ಎಲ್ಲಾ ಮುಸ್ಲಿಮರು ಭಯೋತ್ಪಾದಕರಲ್ಲ : ಎಂ.ಪಿ ರೇಣುಕಾಚಾರ್ಯ!

Renukacharya

ಎಲ್ಲಾ ಮುಸ್ಲಿಮರು ಭಯೋತ್ಪಾದಕರಲ್ಲ. ಆದರೆ ದೇಶದ್ರೋಹಿ(Traitor) ಚಟುವಟಿಕೆ ಮಾಡುತ್ತಿರುವರನ್ನು ಕಾಂಗ್ರೆಸ್(Congress) ಬೆಂಬಲಿಸುತ್ತಿದೆ ಎಂದು ಬಿಜೆಪಿ ಶಾಸಕ(BJP MLA) ಮತ್ತು ಮುಖ್ಯಮಂತ್ರಿಗಳ(Chiefminister) ರಾಜಕೀಯ(Political) ಕಾರ್ಯದರ್ಶಿ ಎಂ.ಪಿ ರೇಣುಕಾಚಾರ್ಯ(MP Renukacharya) ಹೇಳಿದ್ದಾರೆ.


ದಾವಣಗೆರೆ(Davangere) ಜಿಲ್ಲೆಯ ಜಗಳೂರು ಪಟ್ಟಣದಲ್ಲಿ ಮಾತನಾಡಿದ ಅವರು, ಎಲ್ಲಾ ಮುಸ್ಲಿಮರು ಭಯೋತ್ಪಾದಕರಲ್ಲ. ಒಳ್ಳೆಯ ಕಾರ್ಯಗಳನ್ನು ಮಾಡುತ್ತಾ, ಸಮಾಜದಲ್ಲಿ ಉತ್ತಮ ರೀತಿಯಲ್ಲಿ ಬದುಕುತ್ತಿರುವ ಮುಸ್ಲಿಮರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಹೀಗಾಗಿಯೇ ಎಲ್ಲರೂ ಒಂದಾಗಿ ಸಾಮರಸ್ಯದಿಂದ ಬಾಳಬೇಕು ಎಂಬುದು ಬಿಜೆಪಿಯ ಮೂಲ ಸಿದ್ದಾಂತ. ನಾವು ಎಲ್ಲರೂ ಸಹಬಾಳ್ವೆಯಿಂದ ಬದುಕಿಲಿ ಎಂದು ಆಶಿಸುತ್ತೇವೆ ಎಂದರು.

ಇನ್ನು ಅನೇಕ ಕಾಂಗ್ರೆಸ್ ಮುಖಂಡರು ಇಂದು ಬಹಿರಂಗವಾಗಿಯೇ ದೇಶದ್ರೋಹಿಗಳ ರಕ್ಷಣೆಗೆ ಮುಂದಾಗಿದ್ದಾರೆ. ವೋಟಿಗಾಗಿ ಯಾವ ಮಟ್ಟಕ್ಕಾದರು ಇಳಿಯಲು ಕಾಂಗ್ರೆಸ್ ಸಿದ್ದವಾಗಿದೆ. ಹುಬ್ಬಳ್ಳಿಯಲ್ಲಿ ಕೋಮುಗಲಭೆ ನಡೆಸಿ ಪೊಲೀಸ್ ಠಾಣೆ, ದೇವಸ್ಥಾನ ಮತ್ತು ಆಸ್ಪತ್ರೆಗಳ ಮೇಲೆ ದಾಳಿ ಮಾಡಿದ ಪುಂಡರ ಮನೆಗೆ ಆರ್ಥಿಕ ನೆರವು ಮತ್ತು ಪುಡ್‍ಕಿಟ್ ನೀಡಲು ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಹೊರಟಿರುವುದು ಯಾವ ನ್ಯಾಯ? ಜಮೀರ್ ಶಿಷ್ಯರು ಈ ರೀತಿಯ ಕಾರ್ಯಗಳನ್ನು ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಇನ್ನು ಒರ್ವ ಪಿಯುಸಿ ವಿದ್ಯಾರ್ಥಿ ನಿಮ್ಮ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುವ ರೀತಿ ಸ್ಟೇಟಸ್ ಹಾಕಿದರೆ, ಪೊಲೀಸ್ ಠಾಣೆಗೆ ದೂರು ನೀಡಿದರೆ ಕಾನೂನಿನ ಮೂಲಕ ಕ್ರಮ ಕೈಗೊಳ್ಳಲಾಗುತ್ತದೆ. ಕಾನೂನಿನ ಪ್ರಕಾರ ಆತನ ತಪ್ಪಿಗೆ ನ್ಯಾಯಾಲಯ ಶಿಕ್ಷೆ ವಿಧಿಸುತ್ತದೆ. ಈ ದೇಶದಲ್ಲಿ ಇನ್ನು ನ್ಯಾಯಾಲಯಗಳು ಜೀವಂತವಾಗಿವೆ. ಆದರೆ ವಿದ್ಯಾರ್ಥಿ ಸ್ಟೇಟಸ್ ಹಾಕಿದ ತಕ್ಷಣ ಸಾವಿರಾರೂ ಜನ ಪೊಲೀಸ್ ಠಾಣೆ ಮುಂದೆ ಸೇರಿಕೊಂಡು ಪ್ರತಿಭಟಿಸುತ್ತಾರೆ, ಪೊಲೀಸರ ಹತ್ಯೆಗೆ ಮುಂದಾಗುತ್ತಾರೆ. ಕಲ್ಲು ತೂರಾಟ ನಡೆಸುತ್ತಾರೆ. ಇಂತವರನ್ನು ಕಾಂಗ್ರೆಸ್ ನಾಯಕರು ಮುಗ್ದರು ಎಂದು ಕರೆಯುತ್ತಾರೆ.

ಬೆಂಗಳೂರಿನ ಕೆಜಿ ಹಳ್ಳಿ ಮತ್ತು ಡಿಜೆ ಹಳ್ಳಿ, ಪಾದರಾಯನಪುರ ಮತ್ತು ಹುಬ್ಬಳ್ಳಿಯಲ್ಲಿ ಗಲಭೆ ನಡೆಸಿದವರನ್ನು ಕಾಂಗ್ರೆಸ್ ನಾಯಕರು ಅದ್ದೂರಿಯಾಗಿ ಸ್ವಾಗತ ಮಾಡುತ್ತಾರೆ. ಕುರ್ಚಿಗಾಗಿ ಕಾಂಗ್ರೆಸ್‍ನವರು ಏನು ಬೇಕಾದರು ಮಾಡುತ್ತಾರೆ ಎಂದು ವಾಗ್ದಾಳಿ ನಡೆಸಿದರು.

Exit mobile version