ಕೊರೋನಾ ಲಸಿಕೆ ಮಾಸ್ ಡ್ರೈರನ್: ಸುಧಾಕರ್

ಬೆಂಗಳೂರು, ಜ. 07: ನಾಳೆ ರಾಜ್ಯಾದ್ಯಂತ ದೊಡ್ಡ ಪ್ರಮಾಣದಲ್ಲಿ ಕೊರೋನಾ ಲಸಿಕೆ ಡ್ರೈರನ್ ನಡೆಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಆರೋಗ್ಯ ಸಚಿವ ಸುಧಾಕರ್ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ನಾಳೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿಯೂ ಕೊರೋನಾ ಡ್ರೈರನ್ ಮಾಡಲಿದ್ದೇವೆ. ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ, ತಾಲೂಕು ಆರೋಗ್ಯ ಕೇಂದ್ರ, ಜಿಲ್ಲಾ ಆಸ್ಪತ್ರೆ ಸೇರಿ ಎಲ್ಲ ಕಡೆ ಕೊರೊನಾ ಲಸಿಕೆ ಡ್ರೈರನ್ ಮಾಡಲಿದ್ದೇವೆ. ಅಲ್ಲದೇ ಖಾಸಗಿ ವ್ಯವಸ್ಥೆಯಲ್ಲಿಯೂ ನೂರು ಜನ ಉದ್ಯೋಗಿಗಳನ್ನು ಕೆಲಸ ಮಾಡುವಲ್ಲಿ ಕೊರೊನಾ ಲಸಿಕೆ ನೀಡುವ ಕುರಿತು ಸ್ಪಷ್ಟ ಮಾರ್ಗಸೂಚಿಯನ್ನು ಇಂದು ಕೇಂದ್ರ ಆರೋಗ್ಯ ಸಚಿವರು ನೀಡಲಿದ್ದಾರೆ ಎಂದರು.

Exit mobile version