Mandya : ಇನ್ನು ಮುಂದೆ ಸಿನಿಮಾಗಳಲ್ಲಿ (Movies) ನಟಿಸುವ ಆಸೆ ನನಗಿಲ್ಲ. ಅದರ ಬದಲಾಗಿ ಅಜ್ಜ, ಅಪ್ಪನ ಜೊತೆಯಾಗಿದ್ದು ರಾಜಕೀಯದ (Politics) ರಹಸ್ಯಗಳನ್ನು ಅರಿಯುತ್ತೇನೆ. ಅಪ್ಪ ಸಿಎಂ ಆಗಿದ್ದಾಗ ರಾಜ್ಯಕ್ಕೆ ಕೊಟ್ಟ ಕೊಡುಗೆ ಅಪಾರ. ಹಾಗಾಗಿ ಈ ಸಲ ಅಪ್ಪನನ್ನೇ ಸ್ಪರ್ಧೆಗೆ ನಿಲ್ಲಿಸುವಂತೆ ಕಾರ್ಯಕರ್ತರು ಆಪೇಕ್ಷಿಸಿದ್ದರು. ಮಹಿಳೆಯರು (Womens) , ರೈತರು (Farmers) , ಹಿರಿಯರು (Seniors) ಎಲ್ಲಾ ವರ್ಗದವರು ಅಪ್ಪನನ್ನು ಹೆಚ್ಚಿನ ಅಂತರದಲ್ಲಿ ಆಯ್ಕೆ ಮಾಡಿದ್ದಾರೆ. ನಮ್ಮ ಕುಟುಂಬಕ್ಕೆ (Family) ಯಾವಾಗಲೂ ಪ್ರೀತಿ ತೋರಿದ್ದಾರೆ.ಮುಂದಿನ 5 ವರ್ಷ ಪ್ರಮಾಣಿಕ ಕೆಲಸ ಮಾಡ್ತಾರೆ, ಜನತೆಗೆ ಚಿರಋಣಿ ಆಗಿರುತ್ತಾರೆ ಎಂದಿದ್ದಾರೆ.
ಇನ್ನು ಅಪ್ಪ ಹಾಗೂ ಅಜ್ಜನ ಆಸೆಯಂತೆ ನಾನು ಈಗ 24*7 ರಾಜಕಾರಣಿ (politician) , ಸಿನಿಮಾ ಮಾಡೋದನ್ನು ಬಂದ್ ಮಾಡಿದ್ದೇನೆ. 2019ರ ನನ್ನ ಸೋಲು ಸೋಲಾಗಿರಲಿಲ್ಲ. ನಮ್ಮಲ್ಲಾದ ತಪ್ಪುಗಳಿಂದ ಹಿನ್ನಡೆ ಆಯ್ತು. ಮಂಡ್ಯ ಜನ ನನಗೆ ಹೃದಯದಲ್ಲಿ ಸ್ಥಾನ ನೀಡಿದ್ದಾರೆ ಅದನ್ನು ಉಳಿಸಿಕೊಂಡು ಅವರ ಅಭಿವೃದ್ಧಿಗಾಗಿ ಶ್ರಮಿಸುತ್ತೇನೆ ಎಂದು ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ (Nikhil Kumarswam) ಹೇಳಿದ್ದಾರೆ.
ಶೀಘ್ರದಲ್ಲೇ ಚೆನ್ನಪಟ್ಟಣದಲ್ಲಿ (Chennapatnam) ಒಂದು ಸಮಾರಂಭ ಏರ್ಪಡಿಸಿ ಅಲ್ಲಿನ ಜನರಿಗೆ ಕೃತಜ್ಞತೆ ಸಲ್ಲಿಸಲಾಗುವುದು. ನಂತರ ಮಂಡ್ಯದಲ್ಲಿ (Mandya) ಸಭೆ ನಡೆಸಿ ಜನರಿಗೆ ಕೃತಜ್ಞತಾ ಸಭೆ ನಡೆಸಿ ಮತದಾರರಿಗೆ ಕೃತಜ್ಞತೆ ಸಲ್ಲಿಸಲಾಗುವುದು. ಇನ್ನು ಹಿರಿಯ ನಟಿ ಹಾಗೂ ರಾಜಕಾರಣಿಗಳು ಆದ ಸುಮಲತಾ ಅಂಬರೀಶ್ (Sumalta Ambarish) ಅವರು ಚುನಾವಣೆ ವೇಳೆ ವೇದಿಕೆ ಹಂಚಿಕೊಳ್ಳಲಾಗದಿದ್ದರೂ ಅಪ್ಪನ ಗೆಲುವಿಗೆ ಸಹಕಾರ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ನನಗೆ ಪಕ್ಷ ಕಟ್ಟುವ ಜವಾಬ್ದಾರಿ ನೀಡಿದ್ದು ಮುಂದಿನ ರಾಜ್ಯಾದ್ಯಂತ ಸಂಚರಿಸಿ ಪಕ್ಷ ಸಂಘಟನೆ ಮಾಡುತ್ತೇನೆ, ಮುಂದೆ ಸಂಪೂರ್ಣ ರಾಜಕಾರಣಿಯಾಗಿರುತ್ತೇನೆ (Politician) ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.