ಪ್ರಕೃತಿ, ವಿಕೋಪ ಸಂತ್ರಸ್ತರಿಗೆ ಸಿಗದ ಪರಿಹಾರ: ಪ್ರಧಾನಿ ಕಚೇರಿಗೆ ಪತ್ರ ಬರೆದು 6 ತಿಂಗಳಾದರೂ ಕ್ರಮವಿಲ್ಲ.

Bengaluru: ಪ್ರವಾಹ ಹಾಗೂ ಪ್ರಕೃತಿ ವಿಕೋಪಗಳಿಂದ ಮರಣ ಹೊಂದಿದವರಿಗೂ ಮತ್ತು ಗಾಯಗೊಂಡವರಿಗೂ ಪರಿಹಾರ ಪಾವತಿಸುವ ಕುರಿತು ಪ್ರಧಾನ ಮಂತ್ರಿ ಕಚೇರಿಗೆ ಪತ್ರ ಬರೆದು 06 ತಿಂಗಳಾದರು ಈ ಪತ್ರವನ್ನು ಆಧಾರಿಸಿ ಕಂದಾಯ ಇಲಾಖೆಯ ಶಾಖೆ (Branch of Revenue Department)ಯು ಯಾವುದೇ ಕ್ರಮ ಕೈಗೊಳ್ಳದೇ ಬಾಕಿ ಉಳಿಸಿಕೊಂಡಿದೆ ಎನ್ನುವುದು ಇದೀಗ ಬಹಿರಂಗಗೊಂಡಿದೆ.

ಭೂ ಕುಸಿತ, ಪ್ರವಾಹ, ಬೆಂಕಿ ದುರಂತ ಸೇರಿದಂತೆ ಇನ್ನಿತರೇ ಪ್ರಕೃತಿ ವಿಕೋಪಗಳಿಗೆ ತುತ್ತಾಗಿ ಮರಣ ಹೊಂದಿದವರಿಗೆ 2 ಲಕ್ಷ ಮತ್ತು ಗಾಯಗೊಂಡ ಸಂತ್ರಸ್ತರಿಗೆ ತಲಾ 50,000 ರೂಪಾಯಿಯಂತೆ ಪರಿಹಾರ ಮೊತ್ತವನ್ನು ನೇರವಾಗಿ ಫಲಾನುಭವಿಗಳ ಖಾತೆಗೆ ಪಾವತಿಸಬೇಕು.

ಇನ್ನು ಈ ಕುರಿತಂತೆ ಪ್ರಧಾನ ಮಂತ್ರಿ ಕಚೇರಿಯು ನಿರ್ಧಿಷ್ಟ ಸೂಚನೆಗಳನ್ನು ನೀಡಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ 2023ರ ಸೆ.23 ರಂದು ಪಾತ್ರ ಬರೆದಿತ್ತು. ಆದರೆ ಈ ಪಾತ್ರವು ಕಂದಾಯ ಇಲಾಖೆಯ ವಿಪತ್ತು ನಿರ್ವಹಣೆ ಶಾಖೆಯೊಂದರಲ್ಲಿ 6 ತಿಂಗಳವರಿಗೆ ಬಾಕಿ ಇತ್ತು. ಈ ಕುರಿತು ಇಲಾಖೆಯ ಪ್ರಧಾನ ಕಾರ್ಯದರ್ಶಿ ರಶ್ಮಿ ವಿ ಮಹೇಶ್ (Rashmi V Mahesh) ಅವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಕಚೇರಿಗೆ ಬರೆದ ಪತ್ರದಲ್ಲೇನಿತ್ತು?
2023ನೇ ಸಾಲಿನಲ್ಲಿ ಪ್ರಕೃತಿ ವಿಕೋಪಗಳಾದ ಪ್ರವಾಹ, ಭೂ ಕುಸಿತ, ಸೈಕ್ಲೋನ್ (Cyclone), ಬೆಂಕಿ ದುರಂತಗಳಿಂದ ಮರಣ ಹೊಂದಿದ ವಾರಸುದಾರರಿಗೆ ಪ್ರಧಾನ ಮಂತ್ರಿ ರಾಷ್ಟೀಯ ಪರಿಹಾರ ನಿಧಿ (PMNRF)ದಂತೆ ತಲಾ ೨.೦೦ ಲಕ್ಷದಂತೆ ಹಾಗೂ ಗಾಯಗೊಂಡವರಿಗೆ ತಲಾ ೫೦,೦೦೦ ರೂ.ನಂತೆ ಪರಿಹಾರ ಪಾವತಿಸಲು ತೀರ್ಮಾನಿಸಲಾಗಿದೆ. ಪರೈಹಾರ ಮೊತ್ತವನ್ನು ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮೆ ಮಾಡುವ ಉದ್ದೇಶದಿಂದ https://exgratia.nic.in ಅಡಿ ಲಾಗಿನ್ ಆಗಿ ಮಾಹಿತಿಗಳನ್ನು ಅಳವಡಿಸಬೇಕು.

ಸಂತ್ರಸ್ತ, ಗಾಯಗೊಂಡವರ ಹೆಸರು, ವಯಸ್ಸು ಮತ್ತು ಲಿಂಗ, ಮೊಬೈಲ್ ನಂಬರ್, ಸಂತ್ರಸ್ತ ಗಾಯಗೊಂಡವರ ತಂದೆ/ಹೆಂಡತಿ/ಸಂಬಂಧಿ ಹೆಸರು, ಅಂಚೆ ವಿಳಾಸ, ಆಧಾರ್ ನಂಬರ್, ಬ್ಯಾಂಕ್ ಖಾತೆ ವಿವರಗಳನ್ನು https://exgratia.nic.in ನಲ್ಲಿ ಮಾಹಿತಿಗಳನ್ನು ಅಳವಡಿಸಬೇಕು ಎಂದು ಪ್ರಧಾನ ಮಂತ್ರಿ ಕಚೇರಿಯು 2023ರ ಸೆ.23ರಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರದಲ್ಲಿ ಸೂಚಿಸಿದ್ದರು.

ಕರ್ನಾಟಕ (Karnataka) ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರಕ್ಕೆ ಇಲಾಖೆಯ ಕಾರ್ಯದರ್ಶಿಗಳು ನೋಡಲ್ ಅಧಿಕಾರಿಗಳಾಗಿದ್ದಾರೆ. ಫಲಾನುಭವಿಗಳಿಗೆ ಆನ್-ಲೈನ್ ಮೂಲಕ ಪರಿಹಾರ ಪಾವತಿಸುವ ಸಲುವಾಗಿ ಜಿಲ್ಲೆಗಳಿಂದ ಮಾಹಿತಿ ಪಡೆಯಬೇಕು. ಈ ಮಾಹಿತಿಯನ್ನು ಪರಿಶೀಲಿಸಿ ಆನ್ಲೈನ್ ನಲ್ಲಿ ಅಪ್ಲೋಡ್ ಮಾಡಿ ಲಾಗಿನ್ ಒದಗಿಸಬೇಕು. ಆದರೆ ಈ ಯಾವ ನಿರ್ದೇಶಕಗಳನ್ನು ಕಂದಾಯ ಇಲಾಖೆಯು 6 ತಿಂಗಳಾದರೂ ಯಾವುದೇ ಕ್ರಮವಹಿಸಿರಲಿಲ್ಲ ಎಂಬುದು ಟಿಪ್ಪಣಿ ಹಾಳೆಗಳಿಂದ ಗೊತ್ತಾಗಿದೆ.

ಪ್ರಧಾನ ಮಂತ್ರಿ (Prime Minister) ಕಚೇರಿಯು 2023ರ ಸೆಪ್ಟೆಂಬರ್ನಲ್ಲಿ ಬರೆದಿದ್ದ ಪಾತ್ರಕ್ಕೆ ಸಂಬಂಧಿಸಿದಂತೆ ಕಂದಾಯ ಇಲಾಖೆಯಲ್ಲಿ 2024ರ ಮಾರ್ಚ್ (March) 16ರಂದು ಈ ಬಗ್ಗೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಶ್ಮಿ ಮಹೇಶ್ ಅವರು ಇ-ಆಫಿಸ್ ಟಿಪ್ಪಣಿ ಹಾಳೆಯಲ್ಲಿ ವಿಳಂಬಕ್ಕೆ ಕಾರಣಗಳೇನು ಎಂದು ಪ್ರಶ್ನಿಸಿದ್ದಾರೆ.

pls speak to the concerned official in government of india and find out whether the letter is currency relevant? why was it pending in section for so long? ಎಂದು ಟಿಪ್ಪಣಿ ಹಾಳೆಯಲ್ಲಿ ಪ್ರಶ್ನಿಸಿರುವುದು ತಿಳಿದು ಬಂದಿದೆ. ಆದರೆ ಈ ಪತ್ರಕ್ಕೆ ಸಂಬಂಧಿಸಿದಂತೆ ಕಂದಾಯ ಸಚಿವ ಕೃಷ್ಣಭೈರೇಗೌಡ (Krishna Byregowda) ಅವರು ಅಧಿಕಾರಿಗಳೊಂದಿಗೆ ಸಭೆ ನಡೆಸಿಲ್ಲ ಎಂದು ಗೊತ್ತಾಗಿದೆ.

Exit mobile version