ನಿಮ್ಮ ಹೊಲಸು ರಾಜಕಾರಣಕ್ಕೆ ‘ಅಪ್ಪು’ ಹೆಸರನ್ನು ಯಾಕ್ ಎಳೀತೀರಿ… ಪ್ರತಾಪ್ ಸಿಂಹಗೆ ಪ್ರಕಾಶ್ ರಾಜ್ ತಿರುಗೇಟು

Mysore : ಸಂಸದ ಪ್ರತಾಪ ಸಿಂಹ (Pratapa Simha) ಅವರು ಪುನೀತ್ ರಾಜ್ ಕುಮಾರ್ (Puneeth Rajkumar) ಹೆಸರನ್ನು ಉಲ್ಲೇಖಿಸಿ ಒಂದು ಟ್ವೀಟ್ ಮಾಡಿದ್ದಾರೆ. ಆ ಟ್ವೀಟ್ (Tweet) ಈಗ ಸಾಮಾಜಿಕ ಜಾಲತಾಣದಲ್ಲಿ (Social network) ಆಕ್ರೋಶ ಹುಟ್ಟು ಹಾಕಿದೆ ಅಷ್ಟೇ ಅಲ್ಲದೆ ಪ್ರತಾಪ್ ಸಿಂಹರನ್ನು (Pratapa Simha Vs Prakash Raj) ಬಹುಭಾಷಾ ನಟ ಪ್ರಕಾಶ್ ರಾಜ್ (Actor Prakash Raj) ತರಾಟೆಗೆ ತೆಗೆದುಕೊಂಡಿದ್ದಾರೆ.

2023ರ ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆ (2023 Karnataka State Assembly Elections) ರಂಗೇರುತ್ತಿದ್ದು, ಮೂರು ರಾಜಕೀಯ ಪಕ್ಷಗಳು ಎಡೆಬಿಡದೆ ಸ್ಪರ್ಧಿಸುತ್ತಿವೆ.

ಈ ಸಂದರ್ಭದಲ್ಲಿ ರಾಜಕೀಯ ನಾಯಕರುಗಳು ರೋಡ್ ಶೋ, ಅಥವಾ ಚಿತ್ರರಂಗದ ನಾಯಕ ನಾಯಕಿಯರನ್ನು ಕರೆಸಿ ಸ್ಟಾರ್ ಪ್ರಚಾರ ಕೂಡ ಮಾಡುತ್ತಿದ್ದಾರೆ.

ಅಂತೆಯೇ ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaih) ರವರು ಈ ಬಾರಿ ವರುಣ ಕ್ಷತ್ರದಲ್ಲಿ ಸ್ಪರ್ದಿಸುವುದರಿಂದ, ಕನ್ನಡ ಚಿತ್ರರಂಗದ ಹ್ಯಾಟ್ರಿಕ್ ಹೀರೋ

ಶಿವರಾಜಕುಮಾರ್ (Hattrick hero Sivarajkumar) ಅವರನ್ನು ಕರೆಸಿ ಮತ ಪ್ರಚಾರ ಮಾಡುತ್ತಿದ್ದಾರೆ.

ಈ ಸಂದರ್ಭದಲ್ಲಿ ಸಂಸದ ಪ್ರತಾಪ್ ಸಿಂಹ ಶಿವರಾಜ್ ಕುಮಾರ್ ರನ್ನು ಪರೋಕ್ಷವಾಗಿ ಕಾಲೆಳೆದು ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ : https://vijayatimes.com/internal-survey-of-congress/

ಪ್ರತಾಪ್ ಸಿಂಹ ತನ್ನ ಟ್ವೀಟರ್ ಖಾತೆಯಲ್ಲಿ ಈ ಹಿಂದೆ ರಾಘವೇಂದ್ರ ರಾಜಕುಮಾರ್ (Pratapa Simha Vs Prakash Raj) ಮಾಡಿರುವ ಭಾಷಣದ ತುಣುಕನ್ನು ಹಂಚಿಕೊಂಡು,

ಪುನೀತ್ ರಾಜಕುಮಾರ್ ಸರ್ ಹೆಸರಿನಲ್ಲಿ ಬಡವರಿಗಾಗಿ ಆಸ್ಪತ್ರೆ ಕಟ್ಟಿದ ಸೋಮಣ್ಣ ಮನಮೆಚ್ಚಿ ಶ್ಲಾಘಿಸಿದ ರಾಘಣ್ಣ ಸಿದ್ರಾಮಣ್ಣ ಪರವಾಗಿ ಪ್ರಚಾರಕ್ಕಿಳಿದ ಶಿವಣ್ಣ! ಅವರವರ ಭಾವ ಭಕುತಿಗೆ..” ಎಂದು ಟ್ವಿಟ್ ಮಾಡಿದ್ದರು.

ಅಂದರೆ, ಶಿವಣ್ಣ ಸಹೋದರ ರಾಘವೇಂದ್ರ ರಾಜಕುಮಾರ್ರವರು (RaghavendraRajkumar) ಈ ಹಿಂದೆ ಸಿದ್ದರಾಮಯ್ಯ ಅವರ ಪ್ರತಿಸ್ಪರ್ಧಿ ಯಾದ ಸೋಮಣ್ಣ ಪರ ಇದ್ದರು,

ಸೋಮಣ್ಣರವರು ಪುನೀತ್ ರಾಜಕುಮಾರ್ ಹೆಸರಲ್ಲಿ ಬಡವರಿಗೆ ಆಸ್ಪತ್ರೆ ಕಟ್ಟಿಸಿದ್ದರು.


ಆದರೆ ಈಗ ಸಹೋದರ ಅವರ ಪ್ರತಿಸ್ಪರ್ಧಿ ಸಿದ್ದರಾಮಯ್ಯಯ್ಯ ರವರ ಕಡೆ ಪ್ರಚಾರ ಆರಂಭಿಸಿದ್ದಾರೆ. ಇದನ್ನು ಟ್ವೀಟರ್ನಲ್ಲಿ ಪರೋಕ್ಷವಾಗಿ ಕಾಲೇಳಿದ್ದಾರೆ.

ಪ್ರತಾಪ್ ಸಿಂಹ ಮಾಡಿರುವ ಈ ಟ್ವೀಟ್ಗೆ, ಟ್ವಿಟ್ ಮೂಲಕವೇ ಪ್ರಕಾಶ್ ರಾಜ್,ಪ್ರತಿಕ್ರಿಯೆ ನೀಡಿ, “ನಿಮ್ಮ ಹೊಲಸು ರಾಜಕಾರಣಕ್ಕೆ ..ನಮ್ಮೆಲ್ಲರ “ಅಪ್ಪು” ಅವರನ್ನ ಯಾಕ್ ಎಳೀತೀರಿ ಪ್ರತಾಪ್ ಸಿಂಹ ಅವರೆ .. ಛಿ ಛೀ ಇದು ತುಂಬಾ ದೊಡ್ಡ ತಪ್ಪು .. ಈ ತರ ಮಾಡಬೇಡಿ ‘ ಎಂದು ತಿರುಗೇಟು ನೀಡಿದ್ದಾರೆ.

Exit mobile version