Bengaluru: ಸಾರ್ವಜನಿಕರ ಹಿತದೃಷ್ಟಿಯಿಂದ ರಾಜ್ಯದ ಎಲ್ಲಾ ಉಪನೋಂದಣಾಧಿಕಾರಿ ಕಚೇರಿಗಳ ಕೆಲಸದ (Price rise in property) ಅವಧಿಯನ್ನು ಸೆ.23 ರಿಂದ ಸೆ. 30 ರವರೆಗೆ ಬೆಳಗ್ಗೆ 8 ರಿಂದ
ರಾತ್ರಿ 8 ಗಂಟೆಯವರೆಗೆ ವಿಸ್ತರಿಸಿ ಆದೇಶ ಹೊರಡಿಸಲಾಗಿದೆ. ಮುಂದಿನ ತಿಂಗಳಿಂದ ಸ್ಥಿರಾಸ್ತಿಗಳ ಮೌಲ್ಯ ಮಾರ್ಗಸೂಚಿಯ ದರ ಪರಿಷ್ಕರಣೆಯಾಗುವುದರಿಂದ ಉಪ ನೋಂದಣಿ ಕಚೇರಿಗಳಲ್ಲಿ
ಜನದಟ್ಟಣೆ ಹೆಚ್ಚಾಗಲಿದ್ದು, ಈ ಹಿನ್ನೆಲೆ ಒಂದು ವಾರದ ಮಟ್ಟಿಗೆ 12 ಗಂಟೆಗಳವರೆಗೆ ಉಪನೋಂದಣಿ ಕಚೇರಿಗಳು ಅಂದರೆ ಶನಿವಾರವೂ ಕಾರ್ಯನಿರ್ವಹಣೆ ಮಾಡಲಿವೆ ಎಂದು ಸೂಚಿಸಲಾಗಿದೆ.
ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಕೇಂದ್ರ ಮೌಲ್ಯಮಾಪನ ಸಮಿತಿಯು 2023- 24ನೇ ಸಾಲಿನಲ್ಲಿ ಸ್ಥಿರಾಸ್ತಿಗಳ ಮಾರುಕಟ್ಟೆ ಮೌಲ್ಯದ ಮಾರ್ಗಸೂಚಿ ದರ ಪರಿಷ್ಕರಣೆ ಮಾಡುತ್ತಿದೆ.
ಅ.1 ರಿಂದ ಮಾರ್ಗ ಸೂಚಿ ದರ ಹೆಚ್ಚಳವಾಗುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಆಸ್ತಿ ನೋಂದಣಿಗಾಗಿ ನಾಗರಿಕರು ಸಬ್ ರಿಜಿಸ್ಟ್ರಾರ್ (Sub Registrar) ಕಚೇರಿಗಳಿಗೆ ಮುಗಿಬೀಳುತ್ತಿದ್ದಾರೆ.
ಇದರ ಪರಿಣಾಮ ಕಾವೇರಿ- 2 ತಂತ್ರಾಂಶದಲ್ಲಿ ದೋಷ ಕಾಣಿಸಿಕೊಂಡು ಗುರುವಾರ (Price rise in property) ನೋಂದಣಿ ಪ್ರಕ್ರಿಯೆ ವಿಳಂಬವಾಗಿತ್ತು.
ಸರ್ವರ್ (Server) ಸಮಸ್ಯೆಯಿಂದಾಗಿ ಹೆಚ್ಚಿನ ದಸ್ತಾವೇಜುಧಿಗಳ ನೋಂದಣಿ ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಕಚೇರಿಗಳ ಕೆಲಸದ ಅವಧಿ ವಿಸ್ತರಿಸಲಾಗಿದೆ. ನಾಲ್ಕನೇ ಶನಿವಾರ ಸರಕಾರಿ
ರಜೆ ಇದ್ದುದ್ದರಿಂದ ಆದಾಗ್ಯೂ, ಸಬ್ ರಿಜಿಸ್ಟ್ರಾರ್ ಕಚೇರಿಗಳು ಶನಿವಾರವೂ ಕಾರ್ಯನಿರ್ವಹಿಸಲಿವೆ. ಈ ಕೆಲಸದ ಅವಧಿಯು ಸೆ. 30ರವರೆಗೆ ಮಾತ್ರ ಜಾರಿಯಲ್ಲಿರುತ್ತದೆ. ಸಾರ್ವಜನಿಕರು ಇದರ
ಸದುಪಯೋಗ ಪಡೆದುಕೊಳ್ಳಬಹುದು ಎಂದು ನೋಂದಣಿ ಮಹಾಪರಿವೀಕ್ಷಕರು ಮತ್ತು ಮುದ್ರಾಂಕಗಳ ಆಯುಕ್ತೆ ತಿಳಿಸಿದ್ದಾರೆ.
ಸ್ಥಿರಾಸ್ತಿಗಳ ಮೌಲ್ಯ ದುಬಾರಿ
ರಾಜ್ಯದಲ್ಲಿ ಭೂಮಿ, ನಿವೇಶನ, ಸೇರಿ ಸ್ಥಿರಾಸ್ತಿಗಳ ಮೌಲ್ಯ ಅಕ್ಟೋಬರ್ (October) 1 ರಿಂದ ದುಬಾರಿಯಾಗಲಿದ್ದು ನಾಲ್ಕು ವರ್ಷಗಳ ಬಳಿಕ ಆಸ್ತಿ ಮಾರ್ಗಸೂಚಿ ದರ ಪರಿಷ್ಕರಣೆಗೆ ಸರಕಾರ ನಿರ್ಧರಿಸಿದೆ.
ಮಾರುಕಟ್ಟೆ ಮೌಲ್ಯ ಹಾಗೂ ಮಾರ್ಗಸೂಚಿ ದರ ನಡುವೆ ಹೆಚ್ಚಿರುವ ಅಂತರ ತಗ್ಗಿಸಲು ಆಸ್ತಿಗಳ ಮೌಲ್ಯ ಪರಿಷ್ಕರಣೆ ಮಾಡಲಾಗಿದೆ.
ಶೇಕಡಾ.30 ರಷ್ಟು ಹೆಚ್ಚಳ
ಸ್ಥಿರಾಸ್ತಿ ಮೌಲ್ಯವನ್ನು ಸರಾಸರಿ ಶೇ.30 ರಷ್ಟು ಹೆಚ್ಚಳ ಮಾಡಲಾಗುತ್ತಿದ್ದು. ರಾಜಧಾನಿ ಬೆಂಗಳೂರು ಸುತ್ತಮುತ್ತ ಮಾರ್ಗಸೂಚಿ ದರ ಗರಿಷ್ಠ ಪ್ರಮಾಣದಲ್ಲಿ ನಿಗದಿಯಾಗಿದ್ದು ಉದ್ದೇಶಿತ ಎಸ್ಟಿಆರ್ಆರ್
(STRR) , ಪಿಆರ್ಆರ್, ಬಿಬಿಎಂಪಿಗೆ (BBMP) ಹೊಸದಾಗಿ ಸೇರ್ಪಡೆಯಾಗಿರುವ ಪ್ರದೇಶಗಳು ಸೇರಿ ಆಯ್ದ ಜಾಗಗಳಲ್ಲಿ ಗರಿಷ್ಠ ಶೇ.90 ರವರೆಗೆ ಮಾರ್ಗಸೂಚಿ ದರ ಹೆಚ್ಚಳವಾಗುತ್ತಿದೆ. ವಿಲ್ಲಾಗಳು
ಹಾಗೂ ಬಿಡಿಎ ಹೊಸ ಬಡಾವಣೆಗಳಲ್ಲಿ ಮಾರ್ಗಸೂಚಿ ದರ ಶೇ.30ಕ್ಕಿಂತ ಹೆಚ್ಚಾಗುತ್ತಿದೆ. ಆದರೆ, ವಸತಿ ಸಮುಚ್ಚಯ ಫ್ಲಾಟ್ಗಳ ಮೌಲ್ಯವನ್ನು ಕನಿಷ್ಠ ಪ್ರಮಾಣದಲ್ಲಿ ಅಂದರೆ, ಶೇ.5 ರಿಂದ ಶೇ.10 ರಷ್ಟು
ಮಾತ್ರ ಏರಿಕೆ ಮಾಡಲಾಗುತ್ತಿದೆ. ಮೂಲದರದೊಂದಿಗೆ ವಾಣಿಜ್ಯ ದರವೂ ಸೇರುವುದರಿಂದ ಬೆಂಗಳೂರು ಕೇಂದ್ರ ಭಾಗದ ಹಲವು ಪ್ರತಿಷ್ಠಿತ ಪ್ರದೇಶಗಳಲ್ಲಿ ಭೂಮೌಲ್ಯ ದುಪ್ಪಟ್ಟಾಗಲಿದೆ.
ಕಪ್ಪು ಹಣಕ್ಕೆ ಬ್ರೇಕ್
ಕೋವಿಡ್(Covid) ನಂತಹ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಕಳೆದ ನಾಲ್ಕು ವರ್ಷಗಳಿಂದ ರಾಜ್ಯದಲ್ಲಿ ಹಲವೆಡೆ ಮಾರ್ಗಸೂಚಿ ದರ ಪರಿಷ್ಕರಣೆ ಆಗಿರಲಿಲ್ಲ. ಈ ಹಿಂದೆ ಜನವರಿ 2019ರಿಂದ ಜಾರಿಗೆ
ಬರುವಂತೆ ಶೇ.5ರಿಂದ ಶೇ.25ರವರೆಗೆ ಪರಿಷ್ಕರಣೆಯಾಗಿತ್ತು. ದೀರ್ಘಾವಧಿಗೆ ಭೂಮೌಲ್ಯ ಪರಿಷ್ಕರಣೆಯಾಗದ ಕಾರಣ ರಾಜ್ಯದಲ್ಲಿ ಮಾರ್ಗಸೂಚಿ ದರ ಮತ್ತು ಮಾರುಕಟ್ಟೆ ಮೌಲ್ಯದ ನಡುವಿನ ಅಂತರ
ಹೆಚ್ಚಾಗಿದ್ದು. ವಿಶೇಷವಾಗಿ ರಾಜಧಾನಿ ಸುತ್ತಮುತ್ತ ನಿವೇಶನ ಮತ್ತು ಭೂಮಿಯು ಆದಾಯ ಗಳಿಕೆಗೆ ಹೂಡಿಕೆಯ ಮಾರ್ಗವಾಗಿರುವ ಹಿನ್ನೆಲೆಯಲ್ಲಿ ಕೆಲವೆಡೆ ಭೂಮೌಲ್ಯ ಮಾರ್ಗಸೂಚಿ ದರಕ್ಕಿಂತ ದುಪ್ಪಟ್ಟಾಗಿದ್ದು,
ಕಪ್ಪು ಹಣದ ವ್ಯವಹಾರ ಹೆಚ್ಚಾಗಿದೆ ಹೀಗಾಗಿ ಇದನ್ನು ರಾಜ್ಯ ಬೊಕ್ಕಸಕ್ಕೆ ನೋಂದಣಿ ಮತ್ತು ಮುದ್ರಾಂಕ ಶುಲ್ಕವೂ ಕೈತಪ್ಪಿದೆ. ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು 2023 -24ನೇ ಸಾಲಿನ ಬಜೆಟ್
ಭಾಷಣದಲ್ಲೂಪ್ರಕಟಿಸಿದ್ದಂತೆ ಮಾರ್ಗಸೂಚಿ ದರ ಪರಿಷ್ಕರಣೆ ಮಾಡಲಾಗುತ್ತಿದೆ.
ಆದಾಯಗಳಿಕೆ
ಮಾರ್ಗಸೂಚಿ ದರ ಹೆಚ್ಚಳದಿಂದ ಸಹಜವಾಗಿಯೇ ಮುದ್ರಾಂಕ ಶುಲ್ಕ ದುಬಾರಿಯಾಗಲಿದ್ದು ಸದ್ಯ ಮುದ್ರಾಂಕ ಶುಲ್ಕ ಸ್ವತ್ತಿನ ಮಾರುಕಟ್ಟೆ ಅಥವಾ ಮಾರ್ಗಸೂಚಿ ಮೌಲ್ಯದ ಶೇ.5,ರಷ್ಟು ನೋಂದಣಿ ಶುಲ್ಕ ಶೇ.1
ಹಾಗೂ ಹೆಚ್ಚುವರಿ ಶುಲ್ಕ ಮತ್ತು ಸೆಸ್ ಶೇ.0.5 ನಿಗದಿಯಾಗಿದೆ. ಮಾರ್ಗಸೂಚಿ ದರ ಪರಿಷ್ಕರಣೆ ಬಳಿಕ ಈ ಶುಲ್ಕಗಳೂ ಹೆಚ್ಚಗಲಿವೆ ಮತ್ತು ಲೆಕ್ಕಾಚಾರದಲ್ಲಿ ರಾಜ್ಯದ ಬೊಕ್ಕಸಕ್ಕೆ ಮುದ್ರಾಂಕದ ಶುಲ್ಕದ ಮೂಲಕ
ಕಳೆದ ಸಾಲಿಗಿಂತ 8 ಸಾವಿರ ಕೋಟಿ ರೂ. ಹೆಚ್ಚುವರಿ ಆದಾಯ ನಿರೀಕ್ಷಿಸಲಾಗಿದೆ. ಈ ಲೆಕ್ಕಾಚಾರದಲ್ಲಿ ಪ್ರಸಕ್ತ ಆರ್ಥಿಕ ಸಾಲಿಗೆ ನೋಂದಣಿ ಮತ್ತು ಮುದ್ರಾಂಕದಿಂದ 25 ಸಾವಿರ ಕೋಟಿ ರೂ. ಆದಾಯ
ಮೀರುವ ಅಂದಾಜು ಮಾಡಲಾಗಿದೆ.
ಇದನ್ನು ಓದಿ: ರಾಜ್ಯದ ವಿದ್ಯುತ್ ಉತ್ಪಾದನೆ ಕುಸಿತ ಕಂಡಿರುವುದು ಏಕೆ ? ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಪ್ರಶ್ನೆ
- ಮೇಘಾ ಮನೋಹರ ಕಂಪು