ನಾಲ್ಕು ವರ್ಷಗಳ ಗುತ್ತಿಗೆ ಆಧಾರದ ಮೇಲೆ ಸೈನಿಕರನ್ನು ಸೇನೆಗೆ ನೇಮಕ ಮಾಡಿಕೊಳ್ಳುವ ಅಗ್ನಿಪಥ್ ಯೋಜನೆಯನ್ನು(Agnipath Yojana) ಕೇಂದ್ರವು ಘೋಷಿಸಿದ ಎರಡು ದಿನಗಳ ಬೆನ್ನಲ್ಲೇ, ಸೇನಾ ಉದ್ಯೋಗಾಕಾಂಕ್ಷಿಗಳು ಉದ್ಯೋಗ ಭದ್ರತೆ ಮತ್ತು ಪಿಂಚಣಿ(Pension) ಬಗ್ಗೆ ಕಳವಳ ವ್ಯಕ್ತಪಡಿಸಿದ್ದರಿಂದ ಬಿಹಾರ(Bihar) ಮತ್ತು ರಾಜಸ್ಥಾನದಲ್ಲಿ(Rajasthan) ಪ್ರತಿಭಟನೆಗಳು ತೀವ್ರವಾಗಿ ಭುಗಿಲೆದ್ದಿವೆ.
![Agnipath Yojana Narendra modi](https://sp-ao.shortpixel.ai/client/to_webp,q_glossy,ret_img,w_466,h_262/https://vijayatimes.com/wp-content/uploads/2022/06/Untitled-design-2022-06-15T151023.312-1024x576.jpg)
ರಾಜ್ಯದ ಇತರ ಪ್ರದೇಶಗಳಲ್ಲಿ ಉಗ್ರ ಪ್ರತಿಭಟನೆಗಳು ನಡೆದಿದ್ದರಿಂದ ವಿದ್ಯಾರ್ಥಿಗಳು ಬಿಹಾರದ ಅರಾ ರೈಲು ನಿಲ್ದಾಣದಲ್ಲಿ ಕಲ್ಲು ತೂರಾಟ ನಡೆಸಿದ್ದಾರೆ. ನಾಲ್ಕು ವರ್ಷಗಳು ಪೂರ್ಣಗೊಂಡ ನಂತರ ರಕ್ಷಣಾ ಉದ್ಯೋಗಾಕಾಂಕ್ಷಿಗಳು(Defence Job Seekers) ತಮ್ಮ ಮುಂದಿನ ಹೆಜ್ಜೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ, ಕಾರಣ ಈ ಯೋಜನೆಯ ಮೂಲಕ ನೇಮಕಗೊಂಡ ಸೈನಿಕರಲ್ಲಿ ಕೇವಲ 25 ಪ್ರತಿಶತದಷ್ಟು ಸೈನಿಕರನ್ನು ಪೂರ್ಣ ಅವಧಿಗೆ ಸೇವೆ ಸಲ್ಲಿಸಲು ಉಳಿಸಿಕೊಳ್ಳಲಾಗುವುದು.
ಎರಡು ವರ್ಷಗಳ ನಂತರ ಸೇನೆಗೆ ನೇಮಕಾತಿ ಪ್ರಾರಂಭವಾಯಿತು ಮತ್ತು ಅದರ ನಂತರವೂ ಅವರ ಭವಿಷ್ಯದ ಬಗ್ಗೆ ಯಾವುದೇ ಖಚಿತ ಮಾಹಿತಿ ಇಲ್ಲ ಎಂದು ಉದ್ಯೋಗಕಾಂಕ್ಷಿಗಳು ಆಕ್ರೋಶದಿಂದ ಹೇಳಿದ್ದಾರೆ. ನಮ್ಮನ್ನು ಉಳಿಸಿಕೊಳ್ಳದಿದ್ದರೆ ನಾಲ್ಕು ವರ್ಷಗಳ ನಂತರ ನಮ್ಮ ಭವಿಷ್ಯ ಏನಾಗುತ್ತದೆ ಎಂದು ಅವರು ಪ್ರಶ್ನಿಸಿರುವ ಮೂಲಕ ಸರ್ಕಾರವನ್ನು ತರಾಟಗೆ ತೆಗೆದುಕೊಂಡಿದ್ದಾರೆ. ಬಿಹಾರದ ಅರಾ ರೈಲು ನಿಲ್ದಾಣದಲ್ಲಿ ಎರಡನೇ ದಿನವೂ ಪ್ರತಿಭಟನೆ ಮುಂದುವರಿದಿದ್ದು, ಕೇಂದ್ರದ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳು ಪ್ರತಿಭಟನೆಯನ್ನು ತೀವ್ರವಾಗಿ ಮುಂದುವರಿಸಿದ್ದಾರೆ.
![Defence Job seekers Protest](https://sp-ao.shortpixel.ai/client/to_webp,q_glossy,ret_img,w_492,h_277/https://vijayatimes.com/wp-content/uploads/2022/06/Untitled-design-2022-06-16T115702.795-1024x576.jpg)
ಬಿಹಾರದ ಮತ್ತೊಬ್ಬ ಪ್ರತಿಭಟನಾಕಾರರು ಮಾತನಾಡಿ, “ಕೇವಲ ನಾಲ್ಕು ವರ್ಷ ಕೆಲಸ ಮಾಡಿ ನಾವು ಎಲ್ಲಿಗೆ ಹೋಗುತ್ತೇವೆ? ನಾಲ್ಕು ವರ್ಷಗಳ ಸೇವೆಯ ನಂತರ ನಾವು ನಿರಾಶ್ರಿತರಾಗುತ್ತೇವೆ. ಈ ಯೋಜನೆ ನಮಗೆ ಬೇಡ, ಈ ಕೂಡಲೇ ಇದನ್ನು ವಾಪಾಸ್ ತೆಗೆದುಕೊಳ್ಳಬೇಕು! ಹೀಗಾಗಿಯೇ ನಾವು ರಸ್ತೆಗಳನ್ನು ಜಾಮ್ ಮಾಡಿದ್ದೇವೆ. ದೇಶದ ನಾಯಕರಿಗೆ ಈಗ ಜನರು ಜಾಗೃತರಾಗಿದ್ದಾರೆಂದು ತಿಳಿದಿರಬಹುದು ಎಂದು ಪ್ರಶ್ನಿಸಿದ್ದಾರೆ. ಬಕ್ಸರ್ ಜಿಲ್ಲೆಯಲ್ಲಿ, 100 ಕ್ಕೂ ಹೆಚ್ಚು ಯುವಕರು ರೈಲು ನಿಲ್ದಾಣಕ್ಕೆ ನುಗ್ಗಿ ಹಳಿಗಳ ಮೇಲೆ ಕುಳಿತು, ಪಾಟ್ನಾಗೆ ಹೋಗುವ ಜನಶತಾಬ್ದಿ ಎಕ್ಸ್ಪ್ರೆಸ್ನ ಮುಂದಿನ ಪ್ರಯಾಣವನ್ನು ಸುಮಾರು 30 ನಿಮಿಷಗಳ ಕಾಲ ತಡೆದಿದ್ದಾರೆ.
ಆರ್ಪಿಎಫ್ ಇನ್ಸ್ಪೆಕ್ಟರ್ ದೀಪಕ್ ಕುಮಾರ್ ಮತ್ತು ಜಿಆರ್ಪಿ ಎಸ್ಎಚ್ಒ ರಾಮಶಿಶ್ ಪ್ರಸಾದ್ ನೇತೃತ್ವದ ಭದ್ರತಾ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ರೈಲು ಸಂಚಾರಕ್ಕೆ ಅಡ್ಡಿಯಾಗದಂತೆ ಎಚ್ಚರಿಕೆ ನೀಡುವವರೆಗೂ ಅವರು ಹಿಂದಿನ ದಿನ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಯೋಜನೆ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ ಎನ್ನಲಾಗಿದೆ. ನಿಲ್ದಾಣದ ಮೂಲಕ ಹಾದು ಹೋಗುತ್ತಿದ್ದ ಪಾಟಲಿಪುತ್ರ ಎಕ್ಸ್ಪ್ರೆಸ್ಗೆ ಪ್ರತಿಭಟನಾಕಾರರು ಕಲ್ಲು ತೂರಾಟ ನಡೆಸಿದ್ದಾರೆ ಎಂದು ಪ್ರಾದೇಶಿಕ ಮಾಧ್ಯಮದ ಒಂದು ವಿಭಾಗದಲ್ಲಿ ವರದಿಯಾಗಿದೆ.
![Protest Job seekers](https://sp-ao.shortpixel.ai/client/to_webp,q_glossy,ret_img,w_501,h_282/https://vijayatimes.com/wp-content/uploads/2022/06/Untitled-design-2022-06-16T115944.804-1024x576.jpg)
ಮುಜಾಫರ್ಪುರ ಪಟ್ಟಣದಲ್ಲಿ, ಹೆಚ್ಚಿನ ಸಂಖ್ಯೆಯ ಸೇನಾ ಆಕಾಂಕ್ಷಿಗಳು ವಿಸ್ತಾರವಾದ “ಚಕ್ಕರ್ ಮೈದಾನ”ದ ಸುತ್ತಲಿನ ರಸ್ತೆಗಳಲ್ಲಿ ಟೈರ್ಗಳನ್ನು ಸುಡುವ ಮುಖೇನ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.