New Delhi: ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ವಿರುದ್ಧ ತಮ್ಮ ವಾಗ್ದಾಳಿ ಮುಂದು ವರೆಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Congress leader Rahul Gandhi) , ‘ಲೋಕಸಭಾ ಚುನಾವಣೆ (Lok Sabha Elections) ಹಂತಹಂತಾಗಿ ಪ್ರಧಾನಿ ಮೋದಿ ಅವರ ಕೈತಪ್ಪುತ್ತಿದೆ. ಅದು ಅವರಿಗೆ ಅರಿವಾಗುತ್ತಿದೆ.ಹೀಗಾಗಿ ದೇಶದ ಯುವಜನರ ದಿಕ್ಕು ತಪ್ಪಿಸಲು ಅವರು ಇನ್ನು 3-4 ದಿನಗಳಲ್ಲಿ ಹೊಸ ನಾಟಕ ಆಡಲಿದ್ದಾರೆ ಎಂದು ಹೇಳಿದ್ದಾರೆ .ದೇಶದ ಯುವಸಮೂಹ ಉದ್ದೇಶಿಸಿ ಗುರುವಾರ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿರುವ ರಾಹುಲ್, ‘ನೀವು ಯಾವುದೇ ಕಾರಣಕ್ಕೂ ಮೋದಿ ಅವರ ಪ್ರಾಪಗೆಂಡಾಕ್ಕೆ ಬಲಿಯಾಗಬೇಡಿ. ಒಮ್ಮೆ ಕೇಂದ್ರದಲ್ಲಿ ಇಂಡಿಯಾ ಮೈತ್ರಿಕೂಟದ (Alliance) ಸರ್ಕಾರ ಅಧಿಕಾರಕ್ಕೆ ಬರುತ್ತಲೇ ನಾವು ಯುವಸಮೂಹಕ್ಕೆ 30 ಲಕ್ಷ ಸರ್ಕಾರಿ ಉದ್ಯೋಗ ನೀಡುವ ಪ್ರಕ್ರಿಯೆ ಆರಂಭಿಸುತ್ತೇವೆ ಎಂದು ಭರವಸೆ ನೀಡಿದ್ದಾರೆ.
ಈ ಸಲ ನಡೆದ ಲೋಕಸಭಾ ಚುನಾವಣೆಯಲ್ಲಿ (Lok Sabha elections) ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ದೇಶದ ರೈತರ ಸಾಲವನ್ನು ಮನ್ನಾ ಮಾಡಲಾಗುವುದು. ಗ್ರಾಮೀಣ ಉದ್ಯೋಗ (Rural employment) ಖಾತ್ರಿಯ ದಿನಗೂಲಿಯನ್ನು 250 ರಿಂದ 400 ರು. ಗೆ ಏರಿಕೆ ಮಾಡಲಾಗುತ್ತದೆ . ಜನರ ಕಣ್ಣೀರಿಗೆ ನಾವು ಧ್ವನಿ ಆಗುತ್ತೇವೆ.ಜನರ ಬದುಕು ಕಟ್ಟಿಕೊಳ್ಳಲು ಗ್ಯಾರಂಟಿ ಯೋಜನೆಗಳ ಆರಂಭಿಸುತ್ತೇವೆ ಎಂದು ಕಾಂಗ್ರೆಸ್ ನಾಯಕ (Congress) ರಾಹುಲ್ ಗಾಂಧಿ ಭರವಸೆ ನೀಡಿದ್ದಾರೆ. ಸೋಮವಾರ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿಯವರು ಸಂವಿಧಾನ ಬದಲಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಕಿಡಿ ಕಾರಿದ್ದಾರೆ.
ಭಾರತದ (India) ಸಂಪತ್ತನ್ನು ಅದಾನಿ ಸೇರಿದಂತೆ 22 ರಿಂದ 25 ಮಂದಿ ಶ್ರೀಮಂತರಿಗೆ ನೀಡುತ್ತಿದ್ದಾರೆ. ಇಲ್ಲಿ ಬಡವರಿಗೆ ಮಾತ್ರ ಕಾನೂನು ಎಂದು ಆರೋಪಿಸಿದ್ದಾರೆ.ಕಾಂಗ್ರೆಸ್ (Congress) ಅಧಿಕಾರಕ್ಕೆ ಬಂದರೆ ಸಂವಿಧಾನವನ್ನು ರಕ್ಷಿಸುವುದರ ಜೊತೆಗೆ ಪ್ರಮುಖವಾಗಿ ಬುಡಕಟ್ಟು ಜನರ ಕಾಡು, ಜಲ, ಜಮೀನನ್ನು ರಕ್ಷಿಸುತ್ತದೆ. ಇನ್ನು ನನ್ನ ಬಟ್ಟೆಯ ಬಗ್ಗೆ ಟೀಕೆ ಮಾಡುವ ಅಭ್ಯಾಸ ನಿಮಗಿದ್ದರೆ ಈಗಲೇ ನಿಲ್ಲಿಸಿ ಎಕೆಂದರೆ ಸರಳತೆ ಮತ್ತು ಪಾರದರ್ಶಕತೆಯ ಉದ್ದೇಶದಿಂದ ನಾನು ಸದಾ ಟೀ ಶರ್ಟ್ ಧರಿಸುವುದಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandi) ಹೇಳಿದ್ದಾರೆ.