ಯೋಗಿ ಪ್ರಚಾರ ತಂಡದಲ್ಲಿ ಮಣಿಪಾಲದ `ರಶ್ಮಿ’ಗೆ ಸ್ಥಾನ!

politics

ಉತ್ತರ ಪ್ರದೇಶ : ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವ ಚುನಾವಣಾ ಪ್ರಚಾರಕ್ಕೆ ಯೋಗಿ ಆದಿತ್ಯನಾಥ್ ಅವರ ಚುನಾವಣಾ ಪ್ರಚಾರ ತಂಡದಲ್ಲಿ ಮಣಿಪಾಲದ ಮೂಲದ ರಶ್ಮಿ ಸಾಮಂತ್ ಸ್ಥಾನ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಲಂಡನ್ ಆಕ್ಸ್‌ಫರ್ಡ್ ವಿ.ವಿ. ವಿದ್ಯಾರ್ಥಿಯಾಗಿದ್ದ ವೇಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷೆಯಾಗಿ ಚುನಾಯಿತರಾಗಿದ್ದ ರಶ್ಮಿ ಹಿಂದು ಬಲಪಂಥೀಯವಾದಿ ಎಂಬ ಅಪ ಪ್ರಚಾರಕ್ಕೆ ಗುರಿಯಾಗಿ ರಾಜಿನಾಮೆ ನೀಡಿದ್ದರು. ಈ ಬಗ್ಗೆ ದೇಶ ವ್ಯಾಪಿ ಚರ್ಚೆ ನಡೆದು, ಸಂಸತ್ತಿನಲ್ಲಿಯೂ ವಿಚಾರ ಪ್ರಸ್ತಾವಗೊಂಡು ಗಮನ ಸೆಳೆದಿದ್ದರು.


ಪ್ರಚಾರಕ್ಕೆ ಗುರಿಯಾಗಿ ರಾಜೀನಾಮೆ ನೀಡಿದ್ದು, ಈ ಬಗ್ಗೆ ದೇಶ ವ್ಯಾಪಿ ಚರ್ಚೆ ಕೂಡ ನಡೆದಿತ್ತು. ರಶ್ಮಿ ಅವರು ಲಂಡನ್ ಆಕ್ಸ್ಫರ್ಡ್ ವಿ.ವಿ. ವಿದ್ಯಾರ್ಥಿಯಾಗಿದ್ದ ವೇಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷೆಯಾಗಿ ಚುನಾಯಿತರಾಗಿದ್ದು, ಬಳಿಕ ಹಿಂದು ಬಲಪಂಥೀಯವಾದಿ ಎಂಬ ಆಕ್ಸ್ಫರ್ಡ್ ವಿ.ವಿ.ಯಿಂದ ವಿಶಿಷ್ಟ ಶ್ರೇಣಿಯಿಂದ ಎಂ.ಎಸ್ಸಿ ಪದವಿ ಪಡೆದು ಭಾರತಕ್ಕೆ ವಾಪಸಾಗಿದ್ದರು. ಅನಂತರ ಆಕ್ಸ್ಫರ್ಡ್ ವಿ.ವಿ. ಆಡಳಿತ ಮಂಡಳಿ ವಿಚಾರಣೆಯನ್ನು ನಡೆಸಿದ್ದು, ರಶ್ಮಿ ಅವರಿಗೆ ಅನ್ಯಾಯವಾಗಿರುವುದು ಸಾಬೀತಾಗಿತ್ತು.

ಮಣಿಪಾಲ ಎಂಐಟಿಯಲ್ಲಿ ಮೆಕಾನಿಕಲ್ ಎಂಜಿನಿಯರ್ ಪದವಿ ಪಡೆದ ಇವರು ನವೆಂಬರ್ ತಿಂಗಳಲ್ಲಿ ಆಕ್ಸ್ ಫರ್ಡ್ ವಿ.ವಿ.ಯಿಂದ ವಿಶಿಷ್ಟ ಶ್ರೇಣಿಯಿಂದ ಎಂಎಸ್ಸಿ ಪದವಿ ಪಡೆದು ಭಾರತಕ್ಕೆ ವಾಪಸಾಗಿದ್ದರು. ಇದೀಗ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಚುನಾವಣೆ ನಿರ್ವಹಣೆ ಸಂಬಂಧಿಸಿ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಚುನಾವಣೆ ಪ್ರಚಾರ ತಂಡದಲ್ಲಿ ಮಣಿಪಾಲದ ಯುವತಿ ರಶ್ಮಿ ಸಾಮಂತ್ ಸ್ಥಾನ ಪಡೆದಿದ್ದಾರೆ.

Exit mobile version