ನಟ ದರ್ಶನ್ (Darshan) ಮತ್ತು ಆತನ ಗ್ಯಾಂಗ್ ಸೇರಿ ರೇಣುಕಾಸ್ವಾಮಿ ಮೇಲೆ ಕ್ರೂರ ಹಲ್ಲೆ ನಡೆಸಿರುವುದಲ್ಲದೆ, ಕೊಲೆ ಮಾಡಿದ್ದೂ, ಈ ಕುರಿತಾದ ಪೋಸ್ಟ್ ಮಾರ್ಟಮ್ ರಿಪೋರ್ಟ್ (Post Mortem Report) ಇಂದ ಸಂಪೂರ್ಣ ಮಾಹಿತಿ ದೊರೆತಿದೆ. ಕೈಸಿಕ್ಕ ವಸ್ತುಗಳಿಂದ ರೇಣುಕಾಸ್ವಾಮಿ ದೇಹದ ಎಲ್ಲಾ ಭಾಗಗಳಿಗೂ ಹಲ್ಲೆ ಮಾಡಿರುವುದಾಗಿ ತಿಳಿದುಬಂದಿದೆ.
![Police](https://sp-ao.shortpixel.ai/client/to_webp,q_glossy,ret_img,w_800,h_450/https://vijayatimes.com/wp-content/uploads/2024/06/darshan10.webp)
ರೇಣುಕಾಸ್ವಾಮಿ ದೇಹದಲ್ಲಿ ಎಲ್ಲೆಲ್ಲಿ ಗಾಯವಾಗಿತ್ತು?
ರೇಣುಕಾ ಸ್ವಾಮಿ (Renukaswamy)ಯ ಮರ್ಮಾಂಗದ ಮೇಲೆ ಗಂಭೀರವಾಗಿ ಹಲ್ಲೆ ಮಾಡಿದ್ದಾರೆ. ಇದು ಮನುಷ್ಯನಿಗೆ ಅತೀವವಾದ ನೋವು ತರುವ ಆಘಾತವಾಗಿದೆ. ಕೊಲೆಗಾರರ ಹೊಡೆತಕ್ಕೆ ರೇಣುಕಾ ಅವರ ಮರ್ಮಾಂಗದಲ್ಲಿ ಆಂತರಿಕ ಹಾಗು ಬಾಹ್ಯ ರಕ್ತ ಸ್ರಾವ ಉಂಟಾಗಿದೆ ಎಂದು ಮರಣೋತ್ತರ ಪರೀಕ್ಷೆ ವರದಿಯ ಆಧಾರದಲ್ಲಿ ಹೇಳಲಾಗಿದೆ.
ರೇಣುಕಾ ಅವರ ಹೊಟ್ಟೆಯ ಮೇಲೂ ಗಂಭೀರವಾಗಿ ಗಾಯವಾಗಿದ್ದು, ರಕ್ತ ಹೆಪ್ಪುಗಟ್ಟಿದೆ. ಅಂದರೆ ಮರದ ದೊಣ್ಣೆಗಳಿಂದ ಅವರ ಮುಖ, ಮೂತಿ ನೋಡದೆ ಹಲ್ಲೆ ಮಾಡಿರುವುದು ಖಾತ್ರಿಯಾಗಿದೆ.
![Darshan Arrested](https://sp-ao.shortpixel.ai/client/to_webp,q_glossy,ret_img,w_600,h_338/https://vijayatimes.com/wp-content/uploads/2024/06/pavitra-gowda-dashan-detained1-1718086268-1.jpg)
ತಲೆಯ ಭಾಗದಲ್ಲಿ ರಕ್ತ ಸೋರಿಕೆ ಅಥವಾ ಹೆಪ್ಪುಗಟ್ಟಿಲ್ಲ ಆದರೆ ಯಾವುದೋ ವಸ್ತುವಿನಿಂದ #DarshanArrested ಅಪ್ಪಳಿಸಿರುವ ಆಘಾತ ತಲೆಗೆ ಆಗಿದೆ. ಇನ್ನು ಕೈ ಮತ್ತು ಕಾಲಿನಲ್ಲಿ ಹಾಗೂ ಬೆನ್ನಿನ ಭಾಗದಲ್ಲಿ ಹೆಚ್ಚಿನ ರಕ್ತಸ್ರಾವಗೊಂಡಿದೆ. ಹಾಗೂ ಭಾರಿ ಹೊಡೆತಕ್ಕೆ ಚರ್ಮ ಕಿತ್ತು ಬಂದಿದೆ. ಎದೆಯ ಭಾಗಕ್ಕೂ ಪಟ್ಟು ಬಿದ್ದಿದ್ದು, ಹೃದಯ ಮತ್ತು ಶ್ವಾಸಕೋಶ ಜರ್ಜರಿತವಾಗಿದೆ.
ಪೋಲೀಸರ ಲಾಠಿ ಏಟಿನ ರುಚಿ ತಿನ್ನುತ್ತಿದ್ದಂತೆ ಆರೋಪಿಗಳು ಬಾಯಿಬಿಟ್ಟಿದ್ದು, ರೇಣುಕಾ ಅವರ ಮೇಲೆ ಮೊದಲಿಗೆ ದರ್ಶನ್ ಹಲ್ಲೆ ಮಾಡಿದ್ದಾರೆ. ದರ್ಶನ ಅವರು ರೇಣುಕಾಸ್ವಾಮಿಯನ್ನು ಜೋರಾಗಿ ತಳ್ಳಿದ್ದರು. ಇದರಿಂದಾಗಿ ಶೆಡ್ನಲ್ಲಿದ್ದ ಲಾರಿಗೆ ರೇಣುಕಾಸ್ವಾಮಿ ತಲೆ ತಾಗಿ ಆತ ಅಲ್ಲಿಯೇ ಪ್ರಜ್ಞೆ ತಪ್ಪಿ ಬಿದ್ದಿದ್ದ. ನಂತರ ಅಲ್ಲಿಂದ ದರ್ಶನ್ ಮತ್ತು ಪವಿತ್ರಾ (Pavitra) ಮನೆಗೆ ಹೋಗಿದ್ದಾರೆ. ಬಳಿಕ ರೇಣುಕಾಸ್ವಾಮಿ ಕಾಲು ಹಿಡಿದು ಕಾಂಪೌಂಡ್ ಗೆ ಬಡಿದೆವು ಆಗ ರೇಣುಕಾಸ್ವಾಮಿ ಸ್ಥಳದಲ್ಲೇ ಮೃತಪಟ್ಟರು. ತಕ್ಷಣ ನಾವು ದರ್ಶನ್ ಅವರಿಗೆ ಕರೆ ಮಾಡಿದೆವು. ಶವವನ್ನು ಏನಾದ್ರು ಮಾಡಿ ಮುಚ್ಚಾಕಿ ಅಂದರು. ಭಯದಲ್ಲಿ ಏನುಮಾಡಬೇಕು ಅಂತ ಗೊತ್ತಾಗದೆ ಮೋರಿಗೆ ಬಿಸಾಕಿ ಮನೆಗೆ ಹೋಗಿದ್ವಿ ಎಂದು ಹೇಳಿಕೆ ನೀಡಿದ್ದಾರೆ.