- ರಸ್ತೆ ಗುಂಡಿಗಳನ್ನು ಮುಚ್ಚಲು ಅಪ್ಪ ಅಮ್ಮ ಚಾಕ್ಲೇಟ್ಗೆ ಕೊಟ್ಟ ಹಣವನ್ನೇ ಕೊಡ್ತೀನಿ
- ಗುಂಡಿಗಳಿಂದ ಸುಮಾರು ಜನ ಸಾಯ್ತ ಇದ್ದಾರೆ
- ಪ್ಲೀಸ್ ತಾತ ಗುಂಡಿ ಮುಚ್ಚಿ
ಬೆಂಗಳೂರು ಅ 21 : ಬೆಂಗಳೂರಿನ ರಸ್ತೆಗುಂಡಿಗಳಿಂದ ಸಾಕಷ್ಟು ಜನ ಅಸುನೀಗುತ್ತಿರುವ ಹಿನ್ನಲೆಯಲ್ಲಿ ಗುಂಡಿ ಮುಚ್ಚುವಂತೆ ನಗರದ 2ನೇ ತರಗತಿಯ ಬಾಲಕಿಯೊಬ್ಬಳು ವಿಡಿಯೋ ಮುಖೇನ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಗೆ ಕೈ ಮುಗಿದು ಮನವಿ ಮಾಡಿದ್ದಾಳೆ.
ಬಾಲಕಿ ವಿಡಿಯೋದಲ್ಲಿ ತಗ್ಗುಗುಂಡಿಗಳನ್ನ ಮುಚ್ಚಿಸಿ, ಜನರನ್ನ ಬದುಕಿಸಿ. ತಗ್ಗು ಗುಂಡಿಗಳಿಂದ ಸುಮಾರು ಜನ ಸಾಯ್ತಿದ್ದಾರೆ. ಅವ್ರ ಸಾವಿನಿಂದ ಅವ್ರ ಕುಟುಂಬದವ್ರು ಹೇಗೆ ಜೀವನ ನಡೆಸ್ತಾರೆ. ನೀವೇ ಹೇಳಿ ತಾತ ಎಂದು ಬಾಲಕಿ ಸಿಎಂಗೆ ಪ್ರಶ್ನೆ ಮಾಡಿದ್ದಾಳೆ. ನನ್ನಂತ ಮಕ್ಕಳು, ನಮ್ ಅಪ್ಪ ಯಾವಾಗ ಬರ್ತಾರೋ, ಹೇಗೆ ಬರ್ತಾರೋ ಅಂತ ಕಾಯ್ತಾ ಇರ್ತಾರೆ ಅಲ್ವಾ. ನಾನು ಕೂಡ ನಮ್ ಅಪ್ಪ ಯಾವಾಗ ಬರ್ತಾರೋ ಅಂತ ಭಯದಿಂದ ಕಾಯ್ತಾ ಇರ್ತೇನೆ. ನಮ್ ಅಪ್ಪ-ಅಮ್ಮ, ನನಗೆ ಚಾಕ್ಲೇಟ್ಗೆ ಕೊಟ್ಟಿರೋ ದುಡ್ಡನ್ನ ಕೊಡ್ತೇನೆ. ಪ್ಲೀಸ್ ಗುಂಡಿ ಮುಚ್ಚಿಸಿ ಸಿಎಂ ತಾತ ಎಂದು ಮನವಿ ಮಾಡಿದ್ದಾಳೆ.