ಭಾರತೀಯ ನೌಕಾಪಡೆಯ ಹಡಗಿನಲ್ಲಿ ಕರ್ತವ್ಯದಲ್ಲಿದ್ದ ಸಾಹಿಲ್ (Soldier missing from IN) ವರ್ಮಾ (Sahil Varma) ಫೆ.27 ರಿಂದ ನಿಗೂಢವಾಗಿ
ಕಣ್ಮರೆಯಾಗಿದ್ದಾರೆ. ಈ ಕುರಿತಾಗಿ ಈ ವರೆಗೆ ಯಾವುದೇ ಮಾಹಿತಿ ತಿಳಿಯದೇ ಕಂಗಾಲಾಗಿರುವ ಪಾಲಕರು ಸಿಬಿಐ ತನಿಖೆ (CBI Enquiry) ನಡೆಸಬೇಕೆಂದು
ಕೇಂದ್ರ ಸರ್ಕಾರಕ್ಕೆ ಮನವಿ (Soldier missing from IN) ಮಾಡಿದ್ದಾರೆ.
ನೌಕಾಪಡೆಯ (Navy) ಹಡಗಿನಿಂದ ಯೋಧನೊಬ್ಬ ಕಣ್ಮರೆಯಾಗಿರುವುದು ಮತ್ತು ಇನ್ನೂ ಪತ್ತೆಯಾಗದಿರುವುದು ಈ ಬಗ್ಗೆ ಎಲ್ಲಿಯೂ ಸುದ್ದಿಯಾಗದಿರುವುದು
ನಿಜಕ್ಕೂ ಅಚ್ಚರಿಯ ವಿಚಾರ. ಹಡಗಿನಿಂದ ಯಾರೂ ಹೊರಹೋಗಿರುವ ಕುರಿತು ಯಾರಿಗೂ ಮಾಹಿತಿ ಇಲ್ಲ.ಅಲ್ಲದೇ ಸಿಸಿಟಿವಿ ಕ್ಯಾಮೆರಾದಲ್ಲಿ (CCTV Camera)
ಏನೊಂದು ಕೂಡಾ ದಾಖಲಾಗಿಲ್ಲ . ನೀರಿಗೆ ಇಳಿದಿಲ್ಲ, ಹಡಗಿನಲ್ಲಿ ಇಲ್ಲ ಅಂದರೆ ನಮ್ಮ ಮಗನೆಲ್ಲಿ ಹೋದ ಎಂದು ಸಾಹಿಲ್ ವರ್ಮಾ (Sahil Varma) ತಂದೆ
ಸುಭಾಷ್ಚಂದ್ರ ಪ್ರಶ್ನಿಸಿದ್ದಾರೆ.
ಮಗನ ಸುರಕ್ಷಿತ ವಾಪಸಾತಿ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi), ರಕ್ಷಣಾ ಸಚಿವ ರಾಜನಾಥ್ ಸಿಂಗ್, ಗೃಹಸಚಿವ ಅಮಿತ್ ಶಾ
ಹಾಗೂ ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ (Manoj Sinha) ಮಧ್ಯಪ್ರವೇಶಿಸಬೇಕು ಇಲ್ಲವೇ ಸಿಬಿಐ ತನಿಖೆ ನಡೆಸಬೇಕು
ಎಂದು ಅವರು ಆಗ್ರಹಿಸಿದ್ದಾರೆ.
ಇನ್ನು ನೌಕಾಪಡೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಾಹಿಲ್ ನಿಗೂಢವಾಗಿ ಕಣ್ಮರೆಯಾಗಿರುವ ಪ್ರಕರಣದ ಸಂಬಂಧ ನೌಕಾಪಡೆ ಅಧಿಕಾರಿಗಳು ವ್ಯಾಪಕ ಶೋಧ
ಕಾರ್ಯಾಚರಣೆ ನಡೆಸುತ್ತಿದ್ದು, ವಿಮಾನ ಹಾಗೂ ಹಡಗಿನ ಮೂಲಕ ಪತ್ತೆ ಕಾರ್ಯಾಚರಣೆ ನಡೆಯುತ್ತಿದೆ. ಘಟನೆ ಬಗ್ಗೆ ತನಿಖೆಗೆ ಉನ್ನತ ಮಟ್ಟದ ತನಿಖೆಗೆ
ಆದೇಶಿಸಲಾಗಿದೆ ಎಂದು ಮುಂಬೈನಲ್ಲಿರುವ ಪಶ್ಚಿಮ ನೌಕಾಪಡೆ ಕಮಾಂಡ್ ಶನಿವಾರ ಟ್ವೀಟ್ ಮಾಡಿತ್ತು. ಇನ್ನು ಈ ಕುರಿತಾಗಿ ಹೇಳಿಕೆ ನೀಡಿರುವ
ಸುಭಾಷ್ಚಂದ್ರ (Subhashchandra) ಫೆ.29ಕ್ಕೆ ನಮಗೆ ವಿಷಯ ತಿಳಿದಿದೆ ಆದರೆ ಈ ವರೆಗೂ ಯಾವುದೆ ತೀರ್ಮಾನ ಕೈಗೊಳ್ಳದೇ ಇರುವುದು ಬೇಸರದ
ಸಂಗತಿಯಾಗಿದೆ ಎಂದಿದ್ದಾರೆ.
ಇದನ್ನು ಓದಿ: ಲೋಕಸಭೆ ಸಮರಕ್ಕೆ ಗೆಲ್ಲುವ ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆಗೆ ಮೆಗಾ ಪ್ಲಾನ್