Hyderabad : ತೆಲಂಗಾಣ ಸರ್ಕಾರದ ರೈತಬಂಧು ಯೋಜನೆಯಡಿ ರೈತರ ಬೆಳೆಗಳಿಗೆ ಆರ್ಥಿಕ ಸಹಾಯಧನ ವಿತರಿಸಲು ತೆಲಂಗಾಣ ಸರ್ಕಾರಕ್ಕೆ ನೀಡಿದ್ದ ಅನುಮತಿಯನ್ನು ಚುನಾವಣಾ ಆಯೋಗ ಹಿಂಪಡೆದಿದ್ದು, ಯೋಜನೆಯಡಿ ಹಣ ನೀಡುವುದನ್ನ ತಕ್ಷಣದಿಂದಲೇ ನಿಲ್ಲಿಸುವಂತೆ ತೆಲಂಗಾಣ (Telangana) ಸರ್ಕಾರಕ್ಕೆ ಚುನಾವಣಾ ಆಯೋಗ ಸೂಚನೆ ನೀಡಿದೆ.
ಈ ಹಿಂದೆ ಚುನಾವಣಾ ಆಯೋಗಯು ಕೆ ಚಂದ್ರಶೇಖರರಾವ್ (K Chandrashekar) ಅವರ ನೇತೃತ್ವದ ತೆಲಂಗಾಣ ಸರ್ಕಾರಕ್ಕೆ ಕೆಲವು ಷರತ್ತುಗಳ ಆಧಾರದ ಮೇಲೆ ಮಾದರಿ ನೀತಿ ಸಂಹಿತೆ ಅವಧಿಯಲ್ಲಿ ರೈತರಿಗೆ ಆರ್ಥಿಕ ಸಹಾಯಧನವನ್ನು ವಿತರಣೆ ಮಾಡಲು ಅನುಮತಿ ನೀಡಿತ್ತು. ಷರತ್ತಿನ ಭಾಗವಾಗಿ ಚುನಾವಣಾ ಸಂಹಿತೆಯ ಸಮಯದಲ್ಲಿ ರೈತಬಂಧು ಯೋಜನೆಯಡಿ ರೈತರ (Farmer) ಬೆಳೆಗಳಿಗೆ ಆರ್ಥಿಕ ಸಹಾಯಧನ ನೀಡುವ ವಿಚಾರವನ್ನು ಪ್ರಚಾರ ಮಾಡದಂತೆ ಸೂಚನೆ ನೀಡಲಾಗಿತ್ತು. ಆದರೆ ಸರ್ಕಾರದ ಅನೇಕ ಮಂತ್ರಿಗಳು ಈ ಷರತ್ತುನ್ನು ಉಲ್ಲಂಘಿಸಿರುವುದರಿಂದ, ಈ ಹಿಂದೆ ನೀಡಿದ್ದ ಅನುಮತಿಯನ್ನು ಚುನಾವಣಾ ಆಯೋಗ ಹಿಂಪಡೆದಿದೆ.
ಇನ್ನು ತೆಲಂಗಾಣ ರಾಜ್ಯ ಹಣಕಾಸು ಸಚಿವರು ರೈತರಿಗೆ ಆರ್ಥಿಕ ಸಹಾಯಧನ ನೀಡುತ್ತಿರುವ ಬಗ್ಗೆ ಸಾರ್ವಜನಿಕ ಘೋಷಣೆ ಮಾಡಿದ್ದರು. ರೈತರು ತಮ್ಮ ಉಪಹಾರ ಮತ್ತು ಚಹಾವನ್ನು ಪೂರೈಸುವ ಮುನ್ನವೇ ಅವರ ಖಾತೆಗೆ ಹಣವನ್ನು ಜಮಾ ಮಾಡಲಾಗುವುದು ಎಂದು ಅವರು ಘೋಷಿಸಿದ್ದರು.
ಚುನಾವಣಾ ಪ್ರಚಾರದಲ್ಲಿ ರೈತಬಂಧು ಮೊತ್ತದ ವಿತರಣೆಯನ್ನು ಉಲ್ಲೇಖಿಸದಂತೆ ಬಿಆರ್ಎಸ್ (BRS) ಪಕ್ಷದ ಮೇಲೆ ನಿರ್ಬಂಧಗಳನ್ನು ವಿಧಿಸುವಂತೆ ಮುಖ್ಯ ಚುನಾವಣಾ ಆಯುಕ್ತರಿಗೆ ಕಾಂಗ್ರೆಸ್ (Congress) ಪಕ್ಷ ಮನವಿ ಮಾಡಿತ್ತು. ನವೆಂಬರ್ 24 ರಂದು ರಾಜ್ಯ ಸರ್ಕಾರವು ರೈತಬಂಧು ಯೋಜನೆಯಡಿ ಮೊತ್ತವನ್ನು ನವೆಂಬರ್ (November) 28 ರ ಮೊದಲು ವಿತರಿಸಲು ಚುನಾವಣಾ ಆಯೋಗ ಹಸಿರು ನಿಶಾನೆ ತೋರಿತು.
ಏನಿದು ರೈತಬಂಧು ಯೋಜನೆ..?
ರೈತಬಂಧು ಯೋಜನೆಯನ್ನು ರೈತರ ಹೂಡಿಕೆ ಬೆಂಬಲ ಯೋಜನೆ (FISS) ಎಂದೂ ಕರೆಯಲಾಗುತ್ತದೆ. ಇದು ತೆಲಂಗಾಣ ಸರ್ಕಾರದ ರೈತರ ಕಲ್ಯಾಣ ಕಾರ್ಯಕ್ರಮವಾಗಿದೆ. ಈ ಯೋಜನೆಯಡಿ, ರಾಜ್ಯ ಸರ್ಕಾರವು ತೆಲಂಗಾಣದ 58 ಲಕ್ಷ ರೈತರಿಗೆ ಎರಡು ಬೆಳೆಗಳಿಗೆ ಕೃಷಿ ಬಂಡವಾಳವಾಗಿ ಅವರ ಪ್ರತಿ ಎಕರೆ ಭೂಮಿಗೆ ₹5,000 ಅನ್ನು ಒದಗಿಸಿದೆ. ಈ ಹೂಡಿಕೆಯನ್ನು ವರ್ಷಕ್ಕೆ ಎರಡು ಬಾರಿ, ಒಮ್ಮೆ ಖಾರಿಫ್ ಕೊಯ್ಲಿಗೆ (Kharif harvest) ಮತ್ತು ಒಮ್ಮೆ ರಬಿ ಕೊಯ್ಲಿಗೆ ಮಾಡಲಾಗುತ್ತದೆ.