ನಾಳೆ ಮಂಡ್ಯದಲ್ಲಿ ಸುಮಲತಾ ಅಂಬರೀಷ್

ರೆಬಲ್ ಸ್ಟಾರ್ ಅಂಬರೀಷ್ ಅವರ ಹುಟ್ಟುಹಬ್ಬದ ಪ್ರಯುಕ್ತ ನಾಳೆ ದಿನಾಂಕ 29ರಂದು ಶನಿವಾರ ಮಂಡ್ಯ ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ರೋಗಿಗಳಿಗೆ ಬೆಳಗಿನ ಉಪಾಹಾರ ಹಾಗೂ ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಮಮತೆಯ ಮಡಿಲು ಸಂಸ್ಥೆಯ ಸಹಕಾರದೊಡನೆ ನೀಡಲಾಗುವುದಾಗಿ ತಿಳಿದು ಬಂದಿದೆ. ಇದೇ ಸಂದರ್ಭದಲ್ಲಿ ಹೊರ ರೋಗಿಗಳಿಗೆ ಹಣ್ಣು ಹಂಪಲುಗಳನ್ನು ವಿತರಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ .

ಹನಕೆರೆ ಶಶಿ ಕುಮಾರ್ ಹಾಗೂ ಹಾಲಹಳ್ಳಿ ಅರವಿಂದ್ ಕುಮಾರ್ ನೇತೃತ್ವ ವಹಿಸಲಿರುವ ಈ ಕಾರ್ಯಕ್ರಮದಲ್ಲಿ ಸಂಸದೆ ಸುಮಲತಾ ಅಂಬರೀಷ್ ಅವರು ಕೂಡ ಪಾಲ್ಗೊಳ್ಳಲಿರುವುದಾಗಿ ತಿಳಿದು ಬಂದಿದೆ.

ಜನಪ್ರಿಯ ನಟ ಅಂಬರೀಷ್ ಅವರ ಹುಟ್ಟುಹಬ್ಬದ ಪ್ರಯುಕ್ತ, ‘ಮಮತೆಯ ಮಡಿಲು’ ಸಂಸ್ಥೆಯ ಮುಖಾಂತರ ಮಂಡ್ಯ ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ರೋಗಿಗಳಿಗೆ ಬೆಳಗಿನ ಮತ್ತು ಮಧ್ಯಾಹ್ನದ ಉಪಾಹಾರ ಹಾಗೂ ಊಟದ ವ್ಯವಸ್ಥೆ ಜೊತೆಗೆ ಗಂಜಿ, ಹಣ್ಣು ಹಂಪಲು ಮತ್ತು ಸಿಹಿಯನ್ನು ವಿತರಿಸಲಾಗುವುದು ಎಂದು
‘ಅಖಿಲ ಕರ್ನಾಟಕ ಅಂಬರೀಷ್ ಅಭಿಮಾನಿಗಳ ಸಂಘ,ಮಂಡ್ಯ’ ತಿಳಿಸಿದೆ.

‘ಮಮತೆಯ ಮಡಿಲು’ ಸಂಸ್ಥೆಯು ಸತತವಾಗಿ 500 ದಿನಗಳಿಂದ ಈ ನಿತ್ಯ ಅನ್ನ ದಾಸೋಹ ಕಾರ್ಯಕ್ರಮ ನಡೆಸುತ್ತಿದ್ದು ನಾಳೆಯ ದಿನ ರೆಬೆಲ್ ಸ್ಟಾರ್ ಅಂಬರೀಷ್ ರವರ ಜನ್ಮದಿನದ ಪ್ರಯುಕ್ತ 500ನೇ ದಿನಾಚಾರಣೆ ಆಚರಿಸುತ್ತಿದೆ. ಈ ಶುಭ ಸಮಾರಂಭದಲ್ಲಿ ಜನಪ್ರಿಯ ಸಂಸದರಾದ ಸುಮಲತಾ ಅಂಬರೀಷ್ ರವರು ಮಧ್ಯಾಹ್ನ 12-45 ಕ್ಕೆ ಭಾಗವಹಿಸಿ ಶುಭ ಹಾರೈಸಲಿದ್ದಾರೆ ಎಂದು ಮಾಧ್ಯಮ ಪ್ರಕಟಣೆಯ ಮೂಲಕ ತಿಳಿಸಲಾಗಿದೆ.

Exit mobile version