ನಿಗಮ ಮಂಡಳಿ ನೇಮಕಾತಿ ಸಭೆ ಅಪೂರ್ಣ: ಸಿದ್ದರಾಮಯ್ಯ, ಡಿಕೆಶಿ ಜೊತೆಗೆ ಸುರ್ಜೇವಾಲ ಸಭೆ

Bengaluru: ರಾಜ್ಯ ಕಾಂಗ್ರೆಸ್​ (Congress) ಉಸ್ತುವಾರಿ ರಣದೀಪ್​ ಸಿಂಗ್​ ಸುರ್ಜೆವಾಲಾ (Randeep Singh Surjewala) ನೇತೃತ್ವದಲ್ಲಿ ಮಂಗಳವಾರ ತಡರಾತ್ರಿವರೆಗು ತಾಜ್ ವೆಸ್ಟ್ ಎಂಡ್ ಹೋಟೆಲ್​​ನಲ್ಲಿ ಸಭೆ ನಡೆದಿದ್ದು, ನಿಗಮ-ಮಂಡಳಿಗಳಿಗೆ ಅಧ್ಯಕ್ಷರ ನೇಮಕಾತಿ ಕುತೂಹಲ ಹುಟ್ಟುಹಾಕಿದೆ. ಈ ಹಿನ್ನೆಲೆ ಸುರ್ಜೆವಾಲಾ ನ.28 ರಂದು ರಾಜ್ಯಕ್ಕೆ ಮತ್ತೆ ಬರುವ ಸಾಧ್ಯತೆ ಇದೆ.

ಈ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ (DK Shivakumar) ಭಾಗಿಯಾಗಿದ್ದು, ತಡರಾತ್ರಿವರೆಗು ನಡೆದ ಸಭೆ ಅಪೂರ್ಣಗೊಂಡಿದೆ ಎಂದು ಮೂಲಗಳು ತಿಳಿಸಿವೆ. ಹೌದು ಅಧ್ಯಕ್ಷರ ನೇಮಕ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್​ ಒಮ್ಮತಕ್ಕೆ ಬಂದಿಲ್ಲ. ಹೀಗಾಗಿ ರಣದೀಪ​ ಸುರ್ಜೆವಾಲಾ ಮತ್ತೊಮ್ಮೆ ಸಭೆ ನಡೆಸಲು ತೀರ್ಮಾನಿಸಿದ್ದಾರೆ.

ನವೆಂಬರ್​ 28ರಂದು ಈ ಸಂಬಂಧ ಸುರ್ಜೇವಾಲ ಮತ್ತೆ ರಾಜ್ಯಕ್ಕೆ ಆಗಮಿಸಲಿದ್ದು, ಇನ್ನು ಮಂಗಳವಾರ ನಡೆದ ಸಭೆಯಲ್ಲಿ ಹಲವು ನಾಯಕರ ಹೆಸರು ಪ್ರಸ್ತಾಪವಾಗಿದ್ದು, ಶಾರ್ಟ್ ಲಿಸ್ಟ್ (Shortlist) ಮಾಡಲಾಗಿದೆ. ಸುರ್ಜೆವಾಲಾ ಎಐಸಿಸಿ (AICC) ನಾಯಕರೊಂದಿಗೆ ಚರ್ಚಿಸಲಿದ್ದಾರೆ. ನಂತರ ರಾಜ್ಯಕ್ಕೆ ಆಗಮಿಸಿ ಅಂತಿಮ ತೀರ್ಮಾನ ಮಾಡುವ ಸಾಧ್ಯತೆ ಇದೆ.

ಪಟ್ಟಿಗಳು ಹೀಗಿದೆ.
ಅನಿಲ್ ಚಿಕ್ಕಮಾದು
ಟಿ.ಡಿ ರಾಜೇಗೌಡ
ಶಿವಲಿಂಗೇಗೌಡ(Shivalingegowda)
ಬಿ.ಕೆ ಸಂಗಮೇಶ್
ಪಿ.ಎಂ ನರೇಂದ್ರ ಸ್ವಾಮಿ
ರಮೇಶ್ ಬಾಬು ಬಂಡಿಸಿದ್ದೇಗೌಡ
ಕೆ.ವೈ ನಂಜೇಗೌಡ
ಬಿ.ಆರ್ ಪಾಟೀಲ್(B.R.Patil)
ಗಣೇಶ್ ಹುಕ್ಕೇರಿ
ಮಹಾಂತೇಶ್ ಕೌಜಲಗಿ
ಬಂಗಾರಪೇಟೆ ನಾರಾಯಣಸ್ವಾಮಿ
ಸತೀಶ್ ಸೈಲ್
ಪ್ರಸಾದ್ ಅಬ್ಬಯ್ಯ
ಜಿ.ಟಿ ಪಾಟೀಲ್
ಡಿ.ಆರ್ ಪಾಟೀಲ್
ಬಸನಗೌಡ ತುರುವಿಹಾಳ್
ಯಶವಂತ್ ರಾಯ್ ಗೌಡ ಪಾಟೀಲ್
ಬಿ.ಜಿ ಗೋವಿಂದಪ್ಪ
ರಾಘವೇಂದ್ರ ಹಿಟ್ನಾಳ್
ರಘುಮೂರ್ತಿ
ಭೀಮಣ್ಣ ನಾಯ್ಕ್

ಒಟ್ಟಾರೆ ಸರ್ಕಾರದ ಅಧೀನದಲ್ಲಿ 85 ನಿಗಮಗಳಿದ್ದು, ಅಲ್ಲಿಗೆ ನೇಮಕ ಮಾಡುವ ಪೂರ್ಣ ಅಧಿಕಾರ ಸರ್ಕಾರಕ್ಕಿದೆ. ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ನಿರ್ದೇಶಕರನ್ನು ನೇಮಕ ಮಾಡಲಾಗುತ್ತದೆ. ತಮ್ಮ ಅಧಿಕಾರದ ಸರದಿ ಬಂದಾಗ ಎಲ್ಲಾ ರಾಜಕೀಯ ಪಕ್ಷಗಳು ನೇಮಕಗಳನ್ನು ಮಾಡುತ್ತವೆ.

ಭವ್ಯಶ್ರೀ ಆರ್ ಜೆ

Exit mobile version