ತಿರುಮಲ ತಿಮ್ಮಪ್ಪನಿಗೆ ಒಂದು ಕೋಟಿ ಮೌಲ್ಯದ ಖಡ್ಗ ಅರ್ಪಣೆ

ತಿರುಪತಿ, ಜು. 20: ಹೈದರಾಬಾದ್‌ನ ಭಕ್ತರೊಬ್ಬರು ತಿರುಮಲದ ವೆಂಕಟೇಶ್ವರ ದೇವಾಲಯದಲ್ಲಿ ಐದು ಕೆಜಿ ತೂಕದ ಖಡ್ಗವನ್ನು ಸೋಮವಾರ ಅರ್ಪಿಸಿದ್ದಾರೆ.

ಈ ಭಕ್ತರು ಉದ್ಯಮಿಯಾಗಿದ್ದು, ದೇವರಿಗೆ ಪೂಜೆ ಸಲ್ಲಿಸಿ ‘ಸೂರ್ಯಕಟಾರಿ’ ಎನ್ನುವ ಖಡ್ಗವನ್ನು ಅರ್ಪಿಸಿದ್ದಾರೆ. ಈ ಖಡ್ಗವನ್ನು ಎರಡು ಕಿಲೋ ಗ್ರಾಂ ಚಿನ್ನ ಮತ್ತು ಮೂರು ಕಿಲೋ ಗ್ರಾಂ ಬೆಳ್ಳಿಯಿಂದ ತಯಾರಿಸಲಾಗಿದ್ದು, ಒಂದು ಕೋಟಿ ಮೌಲ್ಯದ್ದಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ತಿರುಮಲ–ತಿರುಪತಿ ದೇವಸ್ಥಾನದ ಹೆಚ್ಚುವರಿ ಕಾರ್ಯನಿರ್ವಾಹಕ ಅಧಿಕಾರಿ ಎ. ವೆಂಕಟ ಧರ್ಮ ರೆಡ್ಡಿ ಈ ಖಡ್ಗವನ್ನು ಸ್ವೀಕರಿಸಿದ್ದಾರೆ.

Exit mobile version