‘ರಾಜವನ’ ಟೈಟಲ್ ಲಾಂಚ್

ಪ್ರೀತಿ, ಹಾಸ್ಯ, ಸಸ್ಪೆನ್ಸ್ ಥ್ರಿಲ್ಲರ್ ಮೊದಲಾದ ಎಲ್ಲ ಭಾವಗಳನ್ನು ಹೊಂದಿರುವ ಹೊಸಬರ ಚಿತ್ರ ‘ರಾಜವನ’ದ ಶೀರ್ಷಿಕೆ ಲಾಂಚ್ ಕಾರ್ಯಕ್ರಮ ಶುಕ್ರವಾರ ಸಂಜೆ ನೆರವೇರಿತು. ಡಾ.ರಾಜ್ ಆರ್ ಎಸ್ ನಿರ್ಮಿಸಿ, ಪ್ರಧಾನ ಪಾತ್ರದಲ್ಲಿರುವ ಚಿತ್ರದ ಶೀರ್ಷಿಕೆಯನ್ನು
ಖ್ಯಾತ ಕವಿ ಪದ್ಮ ಶ್ರೀ ದೊಡ್ಡರಂಗೇಗೌಡ ಮತ್ತು ಜನಪ್ರಿಯ ನಿರ್ದೇಶಕ ಓಂ ಸಾಯಿ ಪ್ರಕಾಶ್ ಬಿಡುಗಡೆಗೊಳಿಸಿದರು.

ನಿರ್ಮಾಪಕ ರಾಜು ಆರ್ ಎಸ್ ಅವರು ಮಾತನಾಡಿ, ತಾವು ಪ್ರೊಫೆಸರ್ ಪಾತ್ರ ನಿರ್ವಹಿಸುತ್ತಿರುವುದಾಗಿ ತಿಳಿಸಿದರು. ಉಳಿದಂತೆ ಚಿತ್ರದಲ್ಲಿ ಪ್ರೊಫೆಸರ್ ಕೈಕೆಳಗೆ ನಾಲ್ಕು ಜನ ಡಿಗ್ರಿ ಸ್ಟುಡೆಂಟ್ಸ್ ಇದ್ದಾರೆ. ಅವರ ತೊಳಲಾಟವನ್ನು ಚಿತ್ರ ತೋರಿಸುತ್ತದೆ ಎಂದು ನಿರ್ದೇಶಕ ಈರಣ್ಣ ಮಧುಗಿರಿ ತಿಳಿಸಿದರು. ಸಿನಿಮಾದಲ್ಲಿ ಒಟ್ಟು ನಾಲ್ಕು ಹಾಡುಗಳಿವೆ. ಅವುಗಳಲ್ಲಿ ಎರಡು ತುಣುಕುಗಳು ಎಂದು ಅವರು ಹೇಳಿದರು. “ಇದು ನನ್ನ ಎರಡನೆಯ ಚಿತ್ರ. ಈ ಹಿಂದೆ ಸಾಧನೆಯ ಶಿಖರ ಎನ್ನುವ ಚಿತ್ರ ಮಾಡಿದ್ದೆ. ಅದು ಡಿಸೆಂಬರ್ ನಲ್ಲಿ ತೆರೆಕಂಡಿತ್ತು” ಎಂದರು ಈರಣ್ಣ ಮಧುಗಿರಿ. ಮುಂದಿನ ವಾರದಲ್ಲಿ ಚಿತ್ರೀಕರಣ ಶುರುವಾಗಲಿದ್ದು
ಬೆಂಗಳೂರು, ಚಿತ್ರದುರ್ಗ, ‌ಕೊಡಗು ಶೂಟಿಂಗ್ ಮಾಡುವ ಯೋಜನೆ ಇದೆಯಂತೆ.

“ಸಾಯಿ ಪ್ರಕಾಶ್ ಅವರು ತಮ್ಮ ಚಿತ್ರದಲ್ಲಿ ನನಗೆ ಹಲವಾರು ಬಾರಿ ಅವಕಾಶಗಳನ್ನು ನೀಡಿದ್ದಾರೆ. ಇವರೆಲ್ಲರ ಸಮ್ಮುಖದಲ್ಲಿ ಚಿತ್ರದ ಶೀರ್ಷಿಕೆ ಲಾಂಚ್ ಆಗಿರುವುದು ಖುಷಿ ತಂದಿದೆ ಎಂದರು ರಾಜಣ್ಣ.ಕತೆ, ನಿರ್ದೇಶಕರು ಮತ್ತು ಪಾತ್ರಧಾರಿಗಳು ಹೊಸಬರೇ ಇರಬೇಕು ಎನ್ನುವ ಆಕಾಂಕ್ಷೆಯೊಂದಿಗೆ ಮಾಡಿರುವ ಚಿತ್ರ ಇದು ಎಂದರು.

Exit mobile version