ನಮ್ಮ ದೇಶ ಹಲವಾರು ಅಚ್ಚರಿಗಳ ಆಗರ ; ಭಾರತದ ಬಗ್ಗೆ ನೀವು ತಿಳಿಯದ ಕೆಲ ಮಾಹಿತಿಗಳು ಇಲ್ಲಿವೆ ನೋಡಿ

India : ಜಗತ್ತಿನ ಅತೀ ದೊಡ್ಡ ಸೌರ ಗಡಿಯಾರ ಭಾರತದಲ್ಲಿದೆ : ಭಾರತೀಯರು ಖಗೋಳಶಾಸ್ತ್ರದಲ್ಲಿ ಪರಿಣಿತರು. ಚಿಕ್ಕ ದೂರದರ್ಶಕಗಳು(Unknown Facts of India) ಅಲ್ಲದೇ 18ನೇ ಶತಮಾನದ ಜೈಪುರ(Jaipur) ಮತ್ತು ದೆಹಲಿಯ(Delhi) ಜಂತರ್ ಮಂತರ್ ಸಂಕೀರ್ಣಗಳು ಖಗೋಳ ವಿಜ್ಞಾನವನ್ನು ಬೇರೆಯ ಹಂತಕ್ಕೆ ತೆಗೆದುಕೊಂಡು ಹೋಗುತ್ತದೆ.

ಇವುಗಳೇ ಖಗೋಳ ಕೋಷ್ಟಕಗಳನ್ನು ತಯಾರಿಸಲು ಮತ್ತು ಸೂರ್ಯ, ಚಂದ್ರ ಮತ್ತು ಗ್ರಹಗಳ ಚಲನೆಯನ್ನು ಬರಿಗಣ್ಣಿನಿಂದ ನೋಡಲು ಸಹಾಯಕವಾಗಿರುತ್ತಿತ್ತು.

ಜೈಪುರದ ಜಂತರ್ ಮಂತರ್(Janthar Manthar) ಅತ್ಯಂತ ದೊಡ್ಡದಾಗಿದ್ದು, ಇದರಲ್ಲಿ 19 ವಾಸ್ತುಶಿಲ್ಪದ ಖಗೋಳ ಉಪಕರಣಗಳಿದ್ದು, ಇಲ್ಲಿನ ಸೌರ ಗಡಿಯಾರ ಜಗತ್ತಿನಲ್ಲೇ ಅತ್ಯಂತ ದೊಡ್ಡ ಸೌರ ಗಡಿಯಾರವಾಗಿದೆ.

ದೆಹಲಿಯ ಜಂತರ್ ಮಂತರ್ ಚಿಕ್ಕದಾಗಿದ್ದು ಕಡಿಮೆ ಜನಸಂದಣಿ ಇರುವ ಸ್ಥಳವಾಗಿದೆ. ಇಲ್ಲಿ ಕೆಲವು ರಚನೆಗಳ ಮೇಲಿನ ತನಕ ನೀವು ಹೋಗಬಹುದಾಗಿದೆ.

ಭಾರತದ ಕುಂಭ ಮೇಳ ಜಗತ್ತಿನ ಅತೀ ಹೆಚ್ಚು ಜನ ಸೇರುವ ಮೇಳವಾಗಿದೆ : ಹಿಂದೂ ಯಾತ್ರೆಯಾದ ಕುಂಭ ಮೇಳವು ವರ್ಷದಿಂದ ವರ್ಷಕ್ಕೆ ದೊಡ್ಡದಾಗುತ್ತಲೇ ಇದೆ.

ಇದು ಮೂರು ವರ್ಷಗಳಿಗೊಮ್ಮೆ ನಡೆಯುವ ಉತ್ಸವವಾಗಿದ್ದು, ಅಲ್ಲಾಹಾಬಾದ್, ಹರಿದ್ವಾರ್, ನಾಸಿಕ್ ಮತ್ತು ಉಜ್ಜೈನಿಯಲ್ಲಿ ಒಂದಾದ ನಂತರ ಒಂದರಂತೆ ನಡೆಯುತ್ತದೆ.

https://vijayatimes.com/retail-inflation-effects/

ಆದರೆ ಅಲ್ಲಾಹಾಬಾದ್ ನಲ್ಲಿ 12 ವರ್ಷಗಳಿಗೊಮ್ಮೆ ನಡೆಯುವ ಕುಂಭ ಮೇಳವು ಅತ್ಯಂತ ದೊಡ್ಡಮಟ್ಟದ್ದು ಮತ್ತು ಪವಿತ್ರವಾದುದಾಗಿದೆ.

ಕಳೆದ 2013 ರಲ್ಲಿ ನಡೆದ ಕುಂಭ ಮೇಳದಲ್ಲಿ 55 ದಿನಗಳ ಅವಧಿಯಲ್ಲಿ ಸುಮಾರು 10 ಕೋಟಿ ಜನರು ಗಂಗಾ ಮತ್ತು ಯಮುನಾ ನದಿಗಳ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ ಎಂದು ಅಂದಾಜಿಸಲಾಗಿದೆ.

ನಮ್ಮ ದೇಶವು ಬಹಳ ಹಿಂದಿನಿಂದಲೂ ಫ್ಯಾಷನ್ ನ ಕೇಂದ್ರವಾಗಿದೆ : ಪ್ರಾಚೀನ ಕಾಲದಿಂದಲೂ, ಭಾರತೀಯ ಜವಳಿ ಪ್ರಪಂಚದಾದ್ಯಂತ ವ್ಯಾಪಾರವಾಗುತ್ತಿತ್ತು.

ಅಲ್ಲದೆ ಭಾರತವು ಬಹಳ ಹಿಂದಿನಿಂದಲೂ ಅತ್ಯುತ್ತಮವಾದ ಹತ್ತಿ ಮತ್ತು ರೇಷ್ಮೆಯ ಉತ್ಪಾದಕ ಎಂಬ ಹೆಗ್ಗಳಿಗೆಗೆ ಪಾತ್ರವಾಗಿದೆ.

19 ಮತ್ತು 20ನೇ ಶತಮಾನದ ವಸಾಹತು ಷಾಹಿಯ ಒಂದು ಪ್ರಮುಖ ದುಷ್ಪರಿಣಾಮ ಎಂದರೆ ಭಾರತದ ಜವಳಿ ಉದ್ಯಮ ತೀರಾ ಬಡವಾದದ್ದು.

ಇದು, ಭಾರತದ ಜವಳಿ ಉದ್ಯಮವನ್ನು ನಾಶಪಡಿಸಿ ಜಗತ್ತಿನಾದ್ಯಂತ ಜವಳಿ ಉದ್ಯಮವನ್ನು ತಮ್ಮ ಕೈವಶ ಮಾಡಿಕೊಳ್ಳಲು ಬ್ರಿಟೀಷರು ಮಾಡಿದ ಉಪಾಯವಾಗಿತ್ತು. ಆದರೆ, ಇತ್ತೀಚೆಗೆ ಭಾರತದ ಫ್ಯಾಷನ್ ಉದ್ಯಮ ಮತ್ತೆ ಪ್ರಗತಿ ಕಾಣುತ್ತಿದೆ.

ದೆಹಲಿ, ಮುಂಬೈ ಮತ್ತು ಬೆಂಗಳೂರುಗಳಲ್ಲಿ ಫ್ಯಾಷನ್ ವೀಕ್ ಗಳನ್ನು ಆಯೋಜಿಸಲಾಗುತ್ತದೆ. ಇದರ ಜೊತೆಗೆ ಪಾರಂಪರಿಕ ಉಡುಪಿಗೆ ಆಧುನಿಕ ಸ್ಪರ್ಷ ನೀಡುವ ಕೆಲಸವೂ ನಡೆಯುತ್ತದೆ.

ಹಲವು ಸಾಂಪ್ರದಾಯಿಕ ಪದ್ಧತಿಗಳಾದ ಕೈಮಗ್ಗ, ಬ್ಲಾಕ್ ಪ್ರಿಂಟಿಂಗ್ ಭಾರತದಾದ್ಯಂತ ಮತ್ತು ಜಗತ್ತಿನಾದ್ಯಂತ ಜನಪ್ರಿಯವಾಗಿದೆ.

ಮೇಘಾಲಯ(Meghalaya) ಜಗತ್ತಿನ ಅತ್ಯಂತ ತೇವಭರಿತವಾದ ಜನಜೀವನ ಇರುವ ಪ್ರದೇಶವಾಗಿದೆ.

ರಾಜಸ್ಥಾನದ ಮರುಭೂಮಿಯಷ್ಟು ಪ್ರಸಿದ್ಧವಾಗದೇ ಇರುವ ಭಾರತದ ಈಶಾನ್ಯ ಭಾಗದ ಮೇಘಾಲಯವು ಜಗತ್ತಿನಲ್ಲೇ ಅತ್ಯಂತ ತೇವಭರಿತವಾದ ಜನಜೀವನ ಇರುವ ಪ್ರದೇಶವಾಗಿದೆ.

https://youtu.be/B17BlX9yaF8 ಮೈದಾ ಅನ್ನೋ ಸ್ಲೋ ಪಾಯಿಸನ್‌!

ಖಾಸಿ ಬೆಟ್ಟದ ಪ್ರದೇಶವಾದ ಮಾಸೀನ್ರಾಂ ಎಂಬ ಹಳ್ಳಿಯು ವರ್ಷಕ್ಕೆ ಸರಾಸರಿ 467 ಇಂಚು ಮಳೆಯನ್ನು ಪಡೆಯುತ್ತದೆ. ಇಲ್ಲಿಂದ 10 ಮೈಲು ದೂರದಲ್ಲಿರುವ ಚಿರಾಪುಂಜಿಯು ಎರಡನೇ ಸ್ಥಾನದಲ್ಲಿದೆ.

Exit mobile version