ಮನೋಹರ್‌ ಪರಿಕ್ಕರ್ ಪುತ್ರನಿಗೆ ಟಿಕೆಟ್‌ ಡೌಟ್

ಪಣಜಿ ಜ 6  : ಪಣಜಿ ಕ್ಷೇತ್ರದ ಆಕಾಂಕ್ಷಿಯಾಗಿದ್ದ ಮನೋಹರ್‌ ಪರಿಕ್ಕರ್ ಅವರ ಪುತ್ರನಿಗೆ ಗೋವಾ ಬಿಜೆಪಿ ಶಾಕ್‌ ನೀಡಿದ್ದು , ಪಣಜಿ ಕ್ಷೇತ್ರದಿಂದ ಮಾಜಿ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರ ಪುತ್ರ ಉತ್ಪಲ್ ಪರಿಕ್ಕರ್ ಬದಲಿಗೆ ಹಾಲಿ ಶಾಸಕ ಬಾಬೂಶ್ ಮೊನ್ನೆರಾತ್ ರವರಿಗೆ ಪ್ರಸಕ್ತ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ನೀಡುವ ಕುರಿತಂತೆ ಮುಖ್ಯಮಂತ್ರಿ ಪ್ರಮೋದ ಸಾವಂತ್ ಸೂಚನೆ ನೀಡಿದ್ದು, ಗೋವಾ ಬಿಜೆಪಿಯಲ್ಲಿ ಅಸಮಾಧಾನ ವ್ಯಕ್ತವಾಗಿದೆ.

ಉತ್ಪಲ್ ಪರಿಕ್ಕರ್ ರವರು ಪಣಜಿ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಲು ಸಿದ್ಧತೆ ನಡೆಸುತ್ತಿದ್ದು, ಕ್ಷೇತ್ರದಿಂದ ಹಾಲಿ ಶಾಸಕ ಬಾಬೂಶ್ ಮೊನ್ನೆರಾತ್ ರವರಿಗೆ ಬಿಜೆಪಿ ಟಿಕೆಟ್ ನೀಡುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಬಿಜೆಪಿ ಟಿಕೆಟ್ ಪಡೆಯುವ ಕಸರತ್ತು ಆರಂಭಿಸಿರುವ ಉತ್ಪಲ್ ಪರಿಕ್ಕರ್ ರವರು ಇತ್ತೀಚೆಗೆ ದೆಹಲಿಗೆ ಹೋಗಿ ಬಂದಿದ್ದರು, ಆದರೂ ಕೂಡ ಗೋವಾ ಬಿಜೆಪಿ ಅವರಿ ಟಿಕೆಟ್‌ ಕೊಡಲು ನಿರಾಕರಿಸಿದೆ.

Exit mobile version