“ವಾಸಂತಿ ನಲಿದಾಗ” ಸ್ಯಾಂಡಲ್‌ವುಡ್‌ನಲ್ಲಿ ಭರವಸೆ ಮೂಡಿಸಿದ ಖಳನಾಯಕ ಧನಂಜಯ್‌

Bengaluru : ವಾಸಂತಿ ನಲಿಯುತ್ತಾ ನಲಿಯುತ್ತಾ ಮೂರನೇ ವಾರಕ್ಕೆ ಕಾಲಿಟ್ಟಿದೆ. ಈ ಸಂಭ್ರಮದ ಸಂದರ್ಭದಲ್ಲಿ ಎಲ್ಲರ ಗಮನಸೆಳೆಯುತ್ತಿರುವುದು ಚಿತ್ರದ ಖಳನಟ ಧನಂಜಯ್‌ (Vasanthi Nalidaga in Sandalwood). ತನ್ನ ವಿಭಿನ್ನ ಮ್ಯಾನರಿಸಂನಿಂದ ಧನಂಜಯ್‌ ಸಿನಿ ಲೋಕದಲ್ಲಿ ಭರವಸೆ ಮೂಡಿಸಿದ್ದಾರೆ.

ಧನಂಜಯ್ ಅವರು ಪುನೀತ್ ರಾಜ್‍ಕುಮಾರ್ (Punith rajkumar) ಅವರ ಅಪಟ್ಟ ಅಭಿಮಾನಿಯಾಗಿದ್ದು ಅಪ್ಪು ಅವರ ಒಂದು ಮಾತು ‘ಜನ ಬೆಳೆಸಿದರೆ ಬೆಳವಣಿಗೆ,

ಜನ ಮೆರೆಸಿದರೆ ಮೆರವಣಿಗೆ’ ಈ ಮಾತನ್ನು ಬಲವಾಗಿ ನಂಬಿದ ಇವರು ತಮ್ಮ ಮೊದಲ ಪಾತ್ರದಲ್ಲೆ ಪ್ರೇಕ್ಷಕರ ಮನಸನ್ನು ಗೆದ್ದಿದ್ದಾರೆ.

ಮೊದಲ ಬಾರಿಗೆ ಖಳನಟನ ಪಾತ್ರ ಮಾಡಿದ್ದ ಧನಂಜಯ್‌ ರವರು, ಜನರಿಗೆ ತಾವು ಹೊಸಬರು ಅಲ್ಲ ಅನ್ನುವ ರೀತಿ ನಟಿಸಿ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಡಿಸೆಂಬರ್ ತಿಂಗಳು ಸಿನಿಪ್ರಿಯರಿಗೆ ಹಬ್ಬ ಅಂತಲೇ ಹೇಳಬಹುದು. ಯಾಕಂದ್ರೆ ಅನೇಕ ಚಿತ್ರ ಈಗಾಗಲೇ ಬಿಡುಗಡೆಯಾಗಿವೆ.

ಇದನ್ನೂ ನೋಡಿ : https://fb.watch/hxlS7UCah0/ ಸರ್ಕಾರಿ ವಾಹನ ಹೈಡ್ರಾಮ ! Gate crash of corrupt !

ಅಲ್ಲದೆ ಇನ್ನು ಕೆಲ ಸಿನಿಮಾಗಳು ಬಿಡುಗಡೆಯ ಸರತಿಯಲ್ಲಿವೆ. ಈ ಪೈಕಿ ಅನೇಕವು ಹೊಸಬರ ಚಿತ್ರಗಳಾಗಿವೆ. ಅವುಗಳಲ್ಲಿ ಮೂರನೇ ವಾರಕ್ಕೆ ಯಶಸ್ವಿಯಾಗಿ ಕಾಲಿಟ್ಟಿರುವ ಚಿತ್ರ ‘ವಾಸಂತಿ ನಲಿದಾಗ’.

ವಾಸಂತಿ ನಲಿದಾಗ’ ಸಿನಿಮಾಕ್ಕೆ ಜನರು ನೀಡಿರುವ ಪ್ರತಿಕ್ರಿಯೆ ನೋಡಿ ಚಿತ್ರತಂಡ (Vasanthi Nalidaga in Sandalwood) ಸಂತಸ ವ್ಯಕ್ತಪಡಿಸಿದೆ.

ಚಿತ್ರದ ನಾಯಕ ರೋಹಿತ್ ಶ್ರೀಧರ್ , ನಾಯಕಿಯರಾಗಿ ಭಾವನಾ ಶ್ರೀನಿವಾಸ್ (Bhavana Srinivas), ಜೀವಿತ ವಸಿಷ್ಠ ಇವರಲ್ಲಿ ಜನರ ಸಕಾರಾತ್ಮಕ ಪ್ರತಿಕ್ರಿಯೆ ಹೊಸ ಭರವಸೆ ಮೂಡಿಸಿದೆ.

ಇವರೊಂದಿಗೆ ಸಾಯಿಕುಮಾರ್, ಸುಧಾರಾಣಿ , ಹಾಗೂ ಹಿರಿಯ ಕಲಾವಿದರು ನಟಿಸಿದ್ದಾರೆ.

ಇದನ್ನೂ ಓದಿ : https://vijayatimes.com/pregnant-care-in-winter-time/


ಈ ಚಿತ್ರ ಲವ್‍ಸ್ಟೋರಿ, ತಂದೆ-ಮಗನ ಪ್ರೀತಿಯ ಬಾಂಧವ್ಯ, ಬಡತನದ ಪಾಠ ಎಲ್ಲವನ್ನು ಒಳಗೊಂಡಿರುವ ಸಿನಿಮಾ ,ಇಷ್ಟೆಲ್ಲಾ ಇರುವ ಈ ಸಿನಿಮಾದಲ್ಲಿ ಸಾಹಸದ ದೃಶ್ಯವು ಬಹಳ ಅದ್ಭುತವಾಗಿ ಮೂಡಿಬಂದಿದೆ. ಡಿಸೆಂಬರ್ 2ರಂದು ಬಿಡುಗಡೆಯಾಗಿ ಮೂರನೇ ವಾರಕ್ಕೆ ಕಾಲಿಟ್ಟಿರುವ ‘ವಾಸಂತಿ ನಲಿದಾಗ’ ಚಿತ್ರಕ್ಕೆ ಹೊಸ ಸವಾಲಾಗಿ ಕಾಡಿದ್ದು.

ಇತ್ತೀಚಿಗೆ ಬಿಡುಗಡೆಯಾದ ‘ಅವತಾರ್, ದಿ ವೇ ಆಫ್ ವಾಟರ್’ ಈ ಸಿನಿಮಾ ಬಹಳಷ್ಟು ಸಿನಿ ಪ್ರಿಯರನ್ನು ಆಕರ್ಷಿಸಿಡಿದ್ದು, ಇದರ ಹೊರತಾಗಿಯು ಕೆಲವು ಚಿತ್ರಮಂದಿರದಲ್ಲಿ ವಾಸಂತಿ ನಲಿದಾಗ’ ಸಿನಿಮಾ ತನ್ನದೆ ಆದ ಸ್ಥಾನವನ್ನು ಪಡೆದುಕೊಂಡಿದೆ.

ಫಸ್ಟ್ ಲವ್, ಜೀವನದಲ್ಲಿ ಎದುರಾಗುವ ಹತ್ತಾರು ಘಟನೆಗಳು ಈ ಸಿನಿಮಾದಲ್ಲಿ ನೋಡಲು ಬಹಳ ರಂಜನೀಯವಾಗಿದೆ.

ಹಲವಾರು ಕಲಾವಿದರು ಈ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದು, ವಾಸಂತಿ ನಲಿದಾಗ ಚಿತ್ರವನ್ನು ಜೇನುಗೂಡು ಬ್ಯಾನರ್ ಅಡಿ ಕೆ.ಎನ್.ಶ್ರೀಧರ್ ನಿರ್ಮಾಣ ಮಾಡಿದ್ದಾರೆ. ಒಟ್ಟಿನಲ್ಲಿ ಈ ಸಿನಿಮಾ ಜನ ಮೆಚ್ಚುಗೆ ಗಳಿಸುತ್ತಿರುವುದಕ್ಕೆ ಚಿತ್ರತಂಡ ಸಂತಸ ವ್ಯಕ್ತಪಡಿಸಿದೆ.
Exit mobile version