Bengaluru: ಕರ್ನಾಟಕ ಬಂದ್ (Vatal Nagaraj protest with Burkha) ಬಿಸಿ ಎಲ್ಲೆಡೆ ಕಾವೇರಿದ್ದು, ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಅವರು ಕಪ್ಪು ಬಣ್ಣದ ಬುರ್ಖಾ ಧರಿಸಿ
ಪ್ರತಿಭಟನೆಗೆ ಇಳಿದರು. ಖಾಲಿ ಕೊಡವನ್ನು ಹಿಡಿದು ನ್ಯಾಯಕ್ಕಾಗಿ ಆಗ್ರಹಿಸಿದರು. ಆದರೆ ಪ್ರತಿಭಟನಾಕಾರರನ್ನು ಬಂಧಿಸುತ್ತಿರುವ ಸರ್ಕಾರದ ಇಬ್ಬಂದಿತನದ ನೀತಿಯ ವಿರುದ್ಧ ಕಿಡಿಕಾರಿದ್ದು,
ಯಾವುದೇ ಕಾರಣಕ್ಕೂ ತಮಿಳುನಾಡಿಗೆ (Tamilnadu) ನೀರು ಹರಿಸಬಾರದೆಂದು ಆಗ್ರಹಿಸಿದರು.
ಬುರ್ಖಾ ಧರಿಸಿ ವಾಟಾಳ್ ನಾಗರಾಜ್ (Vatal Nagaraj) ವಿಭಿನ್ನವಾಗಿ ಪ್ರತಿಭಟನೆಗೆ ಇಳಿದಿದ್ದಾರೆ. ಕಪ್ಪು ಬಟ್ಟೆ ವಿರೋಧದ ಸಂಕೇತವಾಗಿದ್ದು, ಜೊತೆಗೆ ನ್ಯಾಯ ದೇವತೆಯ ಸಂಕೇತ ಎಂದು ವಾಟಾಳ್
ತಿಳಿಸಿದ್ದಾರೆ. ಇದು ನ್ಯಾಯದ ಸಂದೇಶ ಹಾಗಾಗಿ ಕಪ್ಪು ಬಟ್ಟೆ ಧರಿಸಿ ಖಾಲಿ ಕೊಡ ಹಿಡಿದಿರುವ ದೃಶ್ಯ ಮತ್ತು ಮಹಿಳೆಯರ ಪರವಾಗಿಯೂ ಈ ಬಟ್ಟೆ ಧರಿಸಿದ್ದೇನೆ ಎಂದರು.
ಈ ವೇಳೆ ಮಾತನಾಡಿದ ಅವರು ನಾವು ಕರ್ನಾಟಕ ಬಂದ್ ಮಾಡುತ್ತಿದ್ದೇವೆ ಆದರೆ ಸರ್ಕಾರ ನಮ್ಮನ್ನು ಬಂದ್ ಮಾಡುತ್ತಿದೆ ಎಂದು ಕಿಡಿಕಾರಿದರು. ಕರ್ನಾಟಕದಾದ್ಯಂತ (Karnataka) ಬಂದ್
ಯಶಸ್ವಿಯನ್ನು ಕಂಡಿದ್ದು . ಯಾವುದೇ ಕಾರಣಕ್ಕೂ ಸರ್ಕಾರ ಒಂದು ಹನಿ ನೀರನ್ನೂ ತಮಿಳುನಾಡಿಗೆ ಬಿಡಬಾರದು ಎಂದು ಆಗ್ರಹಿಸಿದರು ಮತ್ತು ನಾಡಿನ ಜನತೆಯನ್ನು ಅಭಿನಂದಿಸುತ್ತೇನೆ ಎಂದು ಹೇಳಿದರು.
ಕನ್ನಡ ಒಕ್ಕೂಟ ಕರೆದ ಬಂದ್ ಗೆ ಇಡೀ ರಾಜ್ಯ ಬೆಂಬಲಿಸಿದ್ದು, ಅಖಂಡ ಕರ್ನಾಟಕ ಅನ್ನುವ ಹೆಸರಿಗೆ ಗೌರವ ತಂದಿದ್ದಾರೆ. ದೇಶಕ್ಕೆ ಕನ್ನಡಿಗರ ಶಕ್ತಿ ಪ್ರದರ್ಶನ ಅರ್ಥವಾಗಿದೆ ಆದರೆ ನಮ್ಮ ಸರ್ಕಾರಕ್ಕೆ
ಮಾತ್ರ ನಿಜವಾಗಿಯು ಅರ್ಥವಾಗಿಲ್ಲ ಹಾಗಾಗಿ ಸರ್ಕಾರ ಎಲ್ಲೆಂದರಲ್ಲಿ ಬಂದ್ (Vatal Nagaraj protest with Burkha) ಮಾಡುತ್ತಿದ್ದಾರೆ ಎಂದರು.
ತಮಿಳುನಾಡಿನ ಪೊಲೀಸರು ರಸ್ತೆ ತಡೆದಿದ್ದಾರೆ ಆದರೆ ಕರ್ನಾಟಕದ ಪೊಲೀಸರು ಇಲ್ಲಿ ಪ್ರತಿಭಟನಾಕಾರರನ್ನು ಬಂಧಿಸುತ್ತಿದ್ದಾರೆ. ಇದು ಅತ್ಯಂತ ನೋವಿನ ಸಂಗತಿಯಾಗಿದೆ. ಕನ್ನಡ ಒಕ್ಕೂಟದ
ಮುಖಂಡರಾದ ಸಾರಾ ಗೋವಿಂದ್ (Sara Govind), ಪ್ರವೀಣ್ ಕುಮಾರ್ ಶೆಟ್ಟಿ, ಶಿವರಾಮೇ ಗೌಡ, ಗಿರೀಶ್ (Girish) ಎಲ್ಲರೂ ಹೋರಾಟದ ಹಿನ್ನಲೆ ಇರುವವರನ್ನು ಬಂದ್ ಮಾಡುತ್ತಿದ್ದಾರೆ.
ಆದರೆ ಪೊಲೀಸರು ಪ್ರತಿಭಟನಾ ಮೆರವಣಿಗೆಯನ್ನು ತಡೆದು 144 ಸೆಕ್ಷನ್ (Section) ಜಾರಿ ಮಾಡಿ ಇದನ್ನು ಪೊಲೀಸ್ ರಾಜ್ಯ ಮಾಡಲಾಗಿದೆ. ಪೊಲೀಸರ ಗೂಂಡಾಗಿರಿಯಿಂದ ಈಗೆಲ್ಲಾ ನಡೆದಿದೆ.
ಇದು ಈ ರೀತಿ ಆಗಬಾರದಿತ್ತು ಹಾಗೂ ಸಿಎಂನಲ್ಲಿ ಕಳಕಳಿಯ ಮನವಿ ಮಾಡಿದ್ದೇವೆ ಎಂದರು.
ವಿಭಿನ್ನವಾಗಿ ಪ್ರತಿಭಟನೆ ಮಾಡಲು ಮೊದಲೇ ತಯಾರಾಗಿದ್ದು, ಇನ್ನು ನಾನು ಧರಿಸಿದ ಬಟ್ಟೆಯನ್ನು ಬುರ್ಖಾ (Burkha) ಅಂತನೂ ಕರೆಯಬಹುದು. ನ್ಯಾಯದೇವತೆಯ ಉಡುಪು ಹಾಕಿಕೊಂಡಿದ್ದೇನೆ.
ಮಹಿಳೆಯರು ಬುರ್ಖಾ ಅಂತನೂ ಕರೆಯಬಹುದು ಎಂದರು.
ಇದನ್ನು ಓದಿ: ಕಾವೇರಿದ ಬಂದ್ ಬಿಸಿ: ಸಿಎಂ ನಿವಾಸಕ್ಕೆ ಮುತ್ತಿಗೆ ಎಚ್ಚರಿಕೆ ಹಿನ್ನಲೆ ನಿವಾಸದ ಬಳಿ ಬಿಗಿ ಪೊಲೀಸ್ ಬಂದೋಬಸ್ತ್
- ಭವ್ಯಶ್ರೀ ಆರ್.ಜೆ