ವಿಷ್ಣುವರ್ಧನ್‌ ಬಗ್ಗೆ ವಿವಾದಾತ್ಮಕ ಹೇಳಿಕೆ ಕೊಟ್ಟ ತೆಲುಗು ನಟ

ಬೆಂಗಳೂರು, ಡಿ. 11: ಕನ್ನಡ ಚಲನಚಿತ್ರದಲ್ಲಿ ಕಂಡ ಅದ್ಭುತ ನಟರೆಂದರೆ ಡಾ. ರಾಜ್ ಕುಮಾರ್, ವಿಷ್ಣುವರ್ಧನ್, ಶಂಕರ್ ನಾಗ್, ಅಂಬರೀಶ್‌ರವರು ಕನ್ನಡ ಚಲನಚಿತ್ರಗಳಿಗೆ ಶುದ್ಧವಾದ ದಾರಿ ಮಾಡಿಕೊಟ್ಟರು. ಆದರೆ ಅದೇ ಹೆಸರುಗಳಿಗೆ ಕಳಂಕ ತರುವ ಕೆಲಸ ಮಾಡಲು ಮುಂದಾಗಿದ್ದಾರೆ. ಅದು ಬೇರೆ ರಾಜ್ಯದ ಜನರು ಮಾಡುತ್ತಿರುವುದು ವಿಪರ್ಯಾಸವೇ ಸರಿ.

ಕನ್ನಡ ಸಿನಿಮಾ ಕ್ಷೇತ್ರದ ಸಾಹಸ ಸಿಂಹ ದಿ. ಡಾ. ವಿಷ್ಣುವರ್ಧನ್​ ಅವರ ಬಗ್ಗೆ ತೆಲುಗು ನಟ ವಿಜಯ್​ ರಂಗರಾಜು ಅವಹೇಳನಕಾರಿ ಹೇಳಿಕೆ ಕೊಟ್ಟಿದ್ದು, ಇದರಿಂದ ವಿಷ್ಣುದಾದರ ಅಭಿಮಾನಿಗಳು ಕೆರಳಿದ್ದಾರೆ.

ಮಾಧ್ಯಮವೊಂದಕ್ಕೆ ಸಂದರ್ಶನ ನೀಡುವ ವೇಳೆ “ವಿಷ್ಣುವರ್ಧನ್​ಗೆ ಲೇಡಿಸ್​ ವೀಕ್ ನೆಸ್​ ಇತ್ತು” ಎಂದು ವಿಷ್ಣುದಾದರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ವಿಜಯ್​ ರಂಗರಾಜುಗೆ ಸೋಶಿಯಲ್ ಮೀಡಿಯಾದಲ್ಲೂ ಕರ್ನಾಟಕದ ಜನತೆ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮುಂಭಾಗ ವಿಷ್ಣು ಅಭಿಮಾನಿಗಳು ಪ್ರತಿಭಟನೆಯನ್ನು  ನಡೆಸಿದ್ದಾರೆ.

ಇದರ ಪರಿಣಾಮ ಬಹಳ ಕೆಟ್ಟದಾಗಿರುತ್ತದೆ ಎಂದು ದಾದಾ ಅಭಿಮಾನಿಗಳು ಎಚ್ಚರಿಕೆ ನೀಡಿದ್ದಾರೆ. ಯಾವುದೇ ರಂಗಭೂಮಿ ಕಲಾವಿದರು ತಮ್ಮದೇ ಆದ ಗೌರವ ಮತ್ತು ಪ್ರತಿಷ್ಠೆ ಇಟ್ಟಿಕೊಂಡಿರುತ್ತಾರೆ. ಅದೇ ರೀತಿ ಚಲನಚಿತ್ರ ನಟರು ಸಹ  ಒಳ್ಳೆ ನಡತೆ ಹೊಂದಿದರೆ ಮಾತ್ರ ಕೊನೆಯವರೆಗೂ ಹೆಸರು ಉಳಿಯುತ್ತದೆ. ಆ ದಾರಿಯಲ್ಲಿ ನಮ್ಮ ಸಾಹಸ ಸಿಂಹ ವಿಷ್ಣುವರ್ಧನ್ ರವರು ಇದ್ದಾರೆ. ಅವರು ಲೋಕ ಬಿಟ್ಟು ಹೋಗಿರಬಹುದು ಆದರೆ ಈಗಲೂ ಸಹ ಅವರು ಅಭಿಮಾನಿಗಳ ಮನದಲ್ಲಿ ಜೀವಂತರಾಗಿದ್ದಾರೆ.

Exit mobile version