ವೃಂದಾವನದ ವಿಧವೆಯರು ಪ್ರಧಾನಿ ಮೋದಿಗೆ ಕಳುಹಿಸಿಕೊಟ್ಟಿದ್ದಾರೆ 251 ರಾಖಿಗಳು

ಲಖನೌ, ಆ. 21: ರಕ್ಷಾಬಂಧನ ಸಮೀಪಿಸುತ್ತಿರುವ ಸಂದರ್ಭದಲ್ಲಿ ಉತ್ತರ ಪ್ರದೇಶದ ದೇಗುಲ ನಗರ ವೃಂದಾವನದ ವಿಧವೆಯರು ಪ್ರಧಾನಿ ನರೇಂದ್ರ ಮೋದಿಯವರಿಗೆ ಕೈಯಲ್ಲೇ ತಯಾರಿಸಿದ 251 ರಾಖಿಗಳನ್ನು ಕಳುಹಿಸಿಕೊಟ್ಟಿದ್ದಾರೆ.

ಕೋವಿಡ್ ಸಾಂಕ್ರಾಮಿಕ ಕಾರಣ ಈ ಬಾರಿ ವಿಧವೆಯರಿಗೆ ನೇರವಾಗಿ ಪ್ರಧಾನಿಯವರನ್ನು ಭೇಟಿಯಾಗಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ರಾಖಿಗಳನ್ನು ಕಳುಹಿಸಿಕೊಡಲಾಗಿದೆ ಎಂದು ವಿಧವೆಯರಿಗೆ ನೆರವಾಗುತ್ತಿರುವ ಎನ್‌ಜಿಒ ‘ಸುಲಭ್ ಹೋಪ್ ಫೌಂಡೇಷನ್’ ತಿಳಿಸಿದೆ.

ರಾಖಿಗಳು ಪ್ರಧಾನಿ ನರೇಂದ್ರ ಮೋದಿಯವರ ವರ್ಣಮಯ ಚಿತ್ರಗಳು, ಕೋವಿಡ್ ಸಾಂಕ್ರಾಮಿಕದ ವಿರುದ್ಧ ಎಚ್ಚರಿಕೆಯ ಸಂದೇಶಗಳು, ಆತ್ಮನಿರ್ಭರ ಭಾರತ ಅಭಿಯಾನದ ಸಂದೇಶಗಳನ್ನು ಒಳಗೊಂಡಿವೆ ಎಂದು ಎನ್‌ಜಿಒ ತಿಳಿಸಿದೆ.

ಕೆಲವು ವಿಧವೆಯರು ಹತ್ತಿ ಬಟ್ಟೆಯ ಮಾಸ್ಕ್‌ಗಳನ್ನು ಸಿದ್ಧಪಡಿಸಿದ್ದು, ಇವುಗಳನ್ನು ಭಾನುವಾರ ಪ್ರಧಾನಿಯವರಿಗೆ ನೀಡಲಾಗುತ್ತದೆ ಎಂದು ಎನ್‌ಜಿಒ ಹೇಳಿದೆ.

Exit mobile version