Bengaluru: ಬೇಸಿಗೆ ಕಾಲ ಆರಂಭವಾಗುವ ಮುನ್ನವೇ ರಾಜಧಾನಿಯಲ್ಲಿ (Water Tankers Seized in Blore) ನೀರಿನ ಸಮಸ್ಯೆ ದಿನದಿಂದ ದಿನಕ್ಕೆ
ಉಲ್ಬಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಖಾಸಗಿ ವಾಟರ್ ಟ್ಯಾಂಕರ್ಗಳನ್ನು (Water Tanker) ವಶಕ್ಕೆ ಪಡೆದು ಜಲಮಂಡಳಿ ಮೂಲಕ ನೀರು ಪೂರೈಸಲು
ಮುಂದಾಗಿದೆ. ಆರ್ಟಿಒ ಅಧಿಕಾರಿಗಳು ಬೆಂಗಳೂರು ನಗರದಾದ್ಯಂತ ಮಂಗಳವಾರ ಕಾರ್ಯಾಚರಣೆ ನಡೆಸಿ 163 ಖಾಸಗಿ ಟ್ಯಾಂಕರ್ಗಳನ್ನು ವಶಕ್ಕೆ ಪಡೆದಿದ್ದಾರೆ.
ನಗರದ ಎಲ್ಲ ಆರ್ಟಿಒ (RTO) ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆದಿದ್ದು, ಆಯಾ ಆರ್ಟಿಒ ವ್ಯಾಪ್ತಿಯ ಪ್ರದೇಶಗಳಲ್ಲಿ ನೀರು ಪೂರೈಕೆಗೆ ಇವುಗಳನ್ನು ಬಳಸಲು
ಉದ್ದೇಶಿಸಲಾಗಿದೆ. ಈಗಾಗಲೇ ನೀರು ಸರಬರಾಜು ಮಾಡಲು ವಾಹನಗಳ ಕೊರತೆ ಇರುವ ಹಿನ್ನೆಲೆಯಲ್ಲಿ ಖಾಸಗಿ ಟ್ಯಾಂಕರ್ಗಳನ್ನು ವಶಕ್ಕೆ ಪಡೆಯಲು
ಜಲಮಂಡಳಿ ಸಾರಿಗೆ ಇಲಾಖೆಗೆ ಮನವಿ ಮಾಡಿತ್ತು. ಅಲ್ಲದೆ ಖಾಸಗಿ ಟ್ಯಾಂಕರ್ಗಳು ನೀರಿಗೆ ದುಬಾರಿ ದರ ವಸೂಲು ಮಾಡುವ ಬಗ್ಗೆ ಹಲವು ದೂರುಗಳು
ಬಂದಿದ್ದವು. ಈ ಹಿನ್ನೆಲೆಯಲ್ಲಿಕಾರ್ಯಾಚರಣೆ ನಡೆಸಲಾಗಿದೆ ಎಂದು (Water Tankers Seized in Blore) ಆರ್ಟಿಒ ಮೂಲಗಳು ತಿಳಿಸಿವೆ.
ನೀರಿನ ಸಮಸ್ಯೆ ನಿವಾರಣೆಗಾಗಿ ಸೋಮವಾರವಷ್ಟೇ ಅಧಿಕಾರಿಗಳ ಸಭೆ ನಡೆಸಿದ್ದ ಡಿಸಿಎಂ ಡಿ.ಕೆ. ಶಿವಕುಮಾರ್ (DCM D K Shivakumar), ಖಾಸಗಿ
ನೀರಿನ ಟ್ಯಾಂಕರ್ ಮಾಲೀಕರು ಬಿಬಿಎಂಪಿಯಲ್ಲಿ ಸ್ವಯಂಪ್ರೇರಿತರಾಗಿ ನೋಂದಣಿ ಮಾಡದಿದ್ದರೆ, ಜಪ್ತಿ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದರು.
ನೋಂದಣಿಗೆ ಮಾ.7ರ ಗಡುವು ನೀಡಿದ್ದರು. ನೀರು ಪೂರೈಕೆಗೆ ಜಲಮಂಡಳಿಗೆ ವಾಹನಗಳ ಕೊರತೆ ಎದುರಾಗಿದೆ ಎಂದೂ ಹೇಳಿದ್ದರು. ಇದರ ಬೆನ್ನಲ್ಲೇ
ಕಾರ್ಯಾಚರಣೆ ನಡೆದಿದೆ.ನಗರದ ಜನರಿಗೆ ಸಮರ್ಪಕ ನೀರು ಪೂರೈಸಲಾಗುವುದು. ನಗರದ 15 ಕಿ.ಮೀ. ಸುತ್ತಮುತ್ತಲ ನೀರಿನ ಮೂಲಗಳನ್ನು ನಗರಕ್ಕೆ
ನೀರು ಪೂರೈಸಲು ಬಳಸಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಹೊಸಕೋಟೆ, ರಾಮನಗರ, ಚನ್ನಪಟ್ಟಣ, ಮಾಗಡಿ, ರಾಮನಗರ (Hoskote, Ramanagara, Channapatna, Magadi, Ramanagara)ದಿಂದ
ದೊಡ್ಡ ಟ್ಯಾಂಕರ್ಗಳಲ್ಲಿನೀರು ತರಲು ಸೂಚಿಸಲಾಗಿದೆ.ಟ್ಯಾಂಕರ್ಗಳ ಮಾಲೀಕರು 600 ರೂ.ಗಳಿಂದ 3 ಸಾವಿರ ರೂ.ವರೆಗೆ ಹಣ ಪಡೆಯುತ್ತಿದ್ದಾರೆ. ಇದನ್ನು
ತಪ್ಪಿಸಲು ಟ್ಯಾಂಕರ್ಗಳ ನೋಂದಣಿಗೆ ಸೂಚಿಸಲಾಗಿದೆ. ನೋಂದಣಿ ನಂತರ ದರದ ವಿಚಾರದಲ್ಲಿ ಸ್ಪಷ್ಟ ತೀರ್ಮಾನ ಮಾಡಲಾಗುವುದು. ನೀರನ್ನು ಎಷ್ಟು
ದೂರದಿಂದ ತರಲಾಗಿದೆ ಎಂದು ಪರಿಗಣಿಸಿ ದರ ನಿಗದಿ ಮಾಡಲಾಗುವುದು ಎಂದಿದ್ದರು. ಈ ಹಿನ್ನೆಯಲೆಯಲ್ಲಿ ನಿನ್ನೆ ಆರ್ಟಿಒ ಅಧಿಕಾರಿಗಳು ಕಾರ್ಯಾಚರಣೆ
ನಡೆಸಿ ಈವರೆಗೂ ನೊಂದಣಿ ಮಾಡದ ಟ್ಯಾಂಕರ್ ವಾಹನವನ್ನು ವಶಪಡಿಸಿಕೊಂಡಿದ್ದಾರೆ.
ಇದನ್ನು ಓದಿ: ಹೇಮಾವತಿ ನದಿಯ ನೀರನ್ನಾದರೂ ಬೆಂಗಳೂರು ನಗರಕ್ಕೆ ಬಿಡಿ ಎಂದು ಸರ್ಕಾರಕ್ಕೆ ಸಲಹೆ ನೀಡಿದ ಹೆಚ್.ಡಿ.ದೇವೇಗೌಡ.