ಸೋನಿಯಾ-ರಾಹುಲ್ ಮಾತ್ರವಲ್ಲ, ಯಡಿಯೂರಪ್ಪ ಮತ್ತು ವಿಜಯೇಂದ್ರ ಕೂಡಾ ಜೈಲಿಗೆ ಹೋಗುತ್ತಾರೆ : ಯತ್ನಾಳ್!

BSY

ಕಾಂಗ್ರೆಸ್ ನಾಯಕಿ(Congress Leader) ಸೋನಿಯಾ ಗಾಂಧಿ(Sonia Gandhi) ಮತ್ತು ಅವರ ಮಗ ರಾಹುಲ್ ಗಾಂಧಿ(Rahul Gandhi) ಮೇಲಿನ ಭ್ರಷ್ಟಾಚಾರ(Corruption) ಆರೋಪ ಸಾಬೀತಾಗಿ ಜೈಲಿಗೆ ಹೋಗುತ್ತಾರೆ. ಅದೇ ರೀತಿ ರಾಜ್ಯದಲ್ಲಿ ಬಿ.ಎಸ್.ಯಡಿಯೂರಪ್ಪ(BS Yedurappa) ಮತ್ತು ಅವರ ಮಗ ವಿಜಯೇಂದ್ರ(BY Vijayendra) ಕೂಡಾ ಭ್ರಷ್ಟಾಚಾರ ನಡೆಸಿದ ಕಾರಣ ಜೈಲಿಗೆ ಹೋಗುವ ಸಮಯ ಬರುತ್ತದೆ ಎಂದು ಬಿಜೆಪಿ ಶಾಸಕ(BJP MLA) ಬಸವನಗೌಡ ಪಾಟೀಲ್ ಯತ್ನಾಳ್(Basavanagowda Yathnal Patil) ಭವಿಷ್ಯ ನುಡಿದಿದ್ದಾರೆ.


ಹಾವೇರಿ(Haveri) ಜಿಲ್ಲೆಯ ರಾಣೆಬೆನ್ನೂರು(Ranebennur) ತಾಲೂಕಿನ ಬೇಲೂರು ಗ್ರಾಮದಲ್ಲಿ ನಡೆದ ಪಂಚಮಸಾಲಿ ಸಮಾಜದ 2ಎ ಮೀಸಲಾತಿ ಹೋರಾಟ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಯಡಿಯೂರಪ್ಪ ಮತ್ತು ಅವರ ಮಗ ವಿಜಯೇಂದ್ರ ಅಕ್ರಮವಾಗಿ ವಿದೇಶದಲ್ಲಿ ಸಾಕಷ್ಟು ಆಸ್ತಿ ಮಾಡಿದ್ದಾರೆ. ಹೀಗಾಗಿಯೇ ಅವರು ಆಗಾಗ ದುಬೈ(Dubai) ಮತ್ತು ಮಾರಿಷಸ್‍ಗೆ ಹೋಗುತ್ತಾರೆ. ಇನ್ನು ಯಡಿಯೂರಪ್ಪನವರ ಆಪ್ತನಾಗಿದ್ದ ಉಮೇಶ್ ಮನೆಯಲ್ಲಿ 10 ಸಾವಿರ ಕೋಟಿ ರೂ. ಸಿಕ್ಕಿತ್ತು. ನೋಟು ಏಣಿಸುವ ಮಷೀನ್ ಸಿಕ್ಕಿತ್ತು. ಉಮೇಶ್ ಒರ್ವ ಕಂಡೆಕ್ಟರ್ ಆಗಿದ್ದವನು.

ಆತನ ಬಳಿ ಸಿಕ್ಕ ಹಣವೆಲ್ಲಾ ಯಡಿಯೂರಪ್ಪ ಮತ್ತು ವಿಜಯೇಂದ್ರನಿಗೆ ಸೇರಿದ್ದು ಎಂದು ಗಂಭೀರ ಆರೋಪ ಮಾಡಿದರು. ಇನ್ನು ಪಂಚಮಸಾಲಿ 2ಎ ಮೀಸಲಾತಿ ಹೋರಾಟ ಮುಂದೂಡಲು ಕೆಲವು ಸ್ವಾಮೀಜಿಗಳು 10 ಕೋಟಿ ರೂ. ಪಡೆದು ಹಿಂದೆ ಸರಿದಿದ್ದಾರೆ. ಬೊಮ್ಮಾಯಿಯವರೇ ಗಡಿಬಿಡಿ ಮಾಡಬೇಡಿ ಎನ್ನುತ್ತಾ ಸುಮ್ಮನೆ ಎಸಿ ರೂಮಿನೊಳಗೆ ಕುಳಿತಿದ್ದಾರೆ. ಆದರೆ ಬಸವಜಯ ಮೃತ್ಯುಂಜಯ ಸ್ವಾಮಿಜಿಗಳು ಮಾತ್ರ ಹಳ್ಳಿಯ ಕಟ್ಟಕಡೆಯ ವ್ಯಕ್ತಿಯವರೆಗೂ ಹೋರಾಟವನ್ನು ತಲುಪಿಸಲು ಶ್ರಮಿಸುತ್ತಿದ್ದಾರೆ.

ಶೀಘ್ರವೇ ಮಠಗಳ 10 ಕೋಟಿ ರೂ.ಗಳ ಹಗರಣ ಬೆಳಕಿಗೆ ಬರಲಿದೆ ಎಂದು ಪರೋಕ್ಷವಾಗಿ ವಚನಾನಂದ ಸ್ವಾಮೀಜಿಗಳನ್ನು ಟೀಕಿಸಿದರು.

Exit mobile version