Bengaluru: ಸಿಲಿಕನ್ ಸಿಟಿ (Yellow alert announced in Blore) ಹಾಗೂ ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳಿಗೆ ಕಳೆದ ಎರಡು, ಮೂರು ದಿನದಿಂದ ಉತ್ತಮ ಮಳೆಯಾಗುತ್ತಿದ್ದು,
ಇಂದು ಮತ್ತು ನಾಳೆಯೂ ಮಳೆ ಮುಂದುವರಿಯಲಿದೆ ಎಂದು ಹವಾಮಾನ (Yellow alert announced in Blore) ಇಲಾಖೆ ಮುನ್ಸೂಚನೆ ನೀಡಿದೆ.
ಉತ್ತರ ಒಳನಾಡಿನ ಜಿಲ್ಲೆಗಳು ಹಾಗೂ ಕರಾವಳಿಯ ಕೆಲ ಜಿಲ್ಲೆಗಳಲ್ಲಿ ಮುಂಗಾರು ಕ್ಷೀಣಿಸಿರುವ ಹಿನ್ನೆಲೆ ಗರಿಷ್ಠ ಉಷ್ಣಾಂಶದ ಮಟ್ಟದಲ್ಲಿ 2-3 ಡಿಗ್ರಿಗಳಷ್ಟು ಹೆಚ್ಚಾಗಿ ಜನರು ಸೆಕೆಯಿಂದ ಬೆಯ್ಯುವಂತಾಗಿದ್ದು,
ಕಳೆದ 24 ಗಂಟೆಗಳಲ್ಲಿ ನೈರುತ್ಯ ಮುಂಗಾರು ದಕ್ಷಿಣ ಒಳನಾಡಿನ ಚುರುಕಾಗಿತ್ತು. ಹಲವು ಕಡೆ ಉತ್ತಮ ಮಳೆಯಾಗಿದ್ದು, ಭಾರೀ ಮಳೆ ಬೆಂಗಳೂರು ಗ್ರಾಮಾಂತರದ ದೇವನಹಳ್ಳಿ (Devanahalli) ಹಾಗೂ
ಬೆಂಗಳೂರು ನಗರದಲ್ಲಿ 7 ಸೆಂ.ಮೀ ಮಳೆಯಾಗಿದೆ.
ಮೈಸೂರಿನ (Mysore) ಹುಣಸೂರು 9 ಸೆಂ.ಮೀ ಹಾಗೂ ಹಾಸನದ (Hassan) ಶ್ರವಣಬೆಳಗೊಳದಲ್ಲಿ 8 ಸೆಂ.ಮೀ ಮಳೆಯಾಗಿದೆ. ಉಳಿದಂತೆ ಉತ್ತರ ಒಳನಾಡಿನಲ್ಲಿ ಹಾಗೂ ಕರಾವಳಿಯಲ್ಲಿ ಮಳೆ
ದುರ್ಬಲವಾಗಿತ್ತು. ಇನ್ನು ರಾಜ್ಯದಲ್ಲೇ ಅತೀ ಹೆಚ್ಚಿನ ಗರಿಷ್ಠ ಉಷ್ಣಾಂಶ 35.8 ಡಿಗ್ರಿ. ಸೆಲ್ಸಿಯಸ್, ಕಲಬುರ್ಗಿ ನಲ್ಲಿ (Kalburgi) ದಾಖಲಾಗಿದೆ. ಅತೀ ಕಡಿಮೆ ಉಷ್ಣಾಂಶ 18.0 ಡಿ.ಸೆ. ವಿಜಯಪುರಯಲ್ಲಿ ದಾಖಲಾಗಿದೆ.
ಮುನ್ಸೂಚನೆ ನೀಡಿರುವ ಜಿಲ್ಲೆಗಳು
೧. ಬೆಂಗಳೂರು ನಗರ,
೨. ಬೆಂಗಳೂರು ಗ್ರಾಮಾಂತರ,
೩. ಚಾಮರಾಜನಗರ,
೪. ಹಾಸನ,
೫. ಕೊಡಗು ಹಾಗೂ ಮೈಸೂರು, ರಾಮನಗರ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಭಾರಿ ಮಳೆಯಾಗುವ ಸಾದ್ಯತೆ ಇದ್ದು, 7 ಸೆಂ.ಮೀ ವರೆಗೂ ಮಳೆಯಾಗುವ ಸಾಧ್ಯತೆ ಇರುವುದರಿಂದ ಯೆಲ್ಲೋ ಅಲರ್ಟ್
(Yellow Alert) ನೀಡಲಾಗಿದೆ.
ಇಂದು ಮತ್ತು ನಾಳೆ ಮಳೆಯಾಗಲಿದ್ದು, ದಕ್ಷಿಣ ಒಳನಾಡಿನ ಒಂದೆರಡು ಕಡೆಗಳಲ್ಲಿ ಗುಡುಗು ಮಿಂಚಿನ ಸಾದ್ಯತೆ ಇದೆ. ಮತ್ತೆ ಮಳೆಯ ಪ್ರಮಾಣದಲ್ಲಿಇಳಿಕೆಯಾಗಲಿದೆ ಎಂದು ಹವಾಮಾನ ತಜ್ಞರು
ಹೇಳಿದ್ದಾರೆ. ತಮಿಳುನಾಡು (Tamilnadu) ಹಾಗೂ ಕನ್ಯಾಕುಮಾರಿವರೆಗೂ ಟ್ರಫ್ ನಿಂದಾಗಿ ಮಳೆಯಾಗುತ್ತಿತ್ತು. ಇಂದೂ ಕೂಡಾ ರಾಯಲ್ಸೀಮಾದ (Royal Seema) ಸಮುದ್ರಮಟ್ಟದಿಂದ
900 ಮೀಟರ್ ಎತ್ತರದಲ್ಲಿ ಸುಳಿಗಾಳಿ ಇದೆ. ಇದರ ಪ್ರಭಾವದಿಂದ ದಕ್ಷಿಣ ಒಳನಾಡಿಗೆ ಮಳೆಯಾಗುತ್ತಿದೆ ಎಂದು ತಿಳಿಸಲಾಗಿದೆ.
ಒಂದು ಅಥವಾ ಎರಡು ಬಾರಿ ಮಳೆ/ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆಗಳು ಇದ್ದು, ಸಾಮಾನ್ಯವಾಗಿ ಮೋಡ ಕವಿದ ವಾತಾವರಣರುತ್ತದೆ. ಸಂಜೆ/ರಾತ್ರಿಯ ಸಮಯದಲ್ಲಿ ಆಗುವ ಸಾಧ್ಯತೆ
ಹೆಚ್ಚು. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 30 ಮತ್ತು 20 ಡಿಗ್ರಿ ಸೆಲ್ಸಿಯಸ್ ಆಗಿರುವ ಸಾಧ್ಯತೆಯಿದೆ.
ಇದನ್ನು ಓದಿ: ಬಿಗ್ ಪ್ರೊಡ್ಯುಸರ್, ಏನೇನು ಸ್ಕ್ರಿಪ್ಟ್ ರೆಡಿ ಇದೀಯೋ ನೋಡೋಣ ಎಂದು ಮುನಿರತ್ನಗೆ ಡಿಕೆ ಸುರೇಶ್ ತಿರುಗೇಟು
- ಭವ್ಯಶ್ರೀ ಆರ್.ಜೆ