• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ವೀಡಿಯೊ ಸಿಟಿಜನ್ ಜರ್ನಲಿಸ್ಟ್

ಬೀದರ್ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಯ ಸಮಸ್ಯೆ

Sharadhi by Sharadhi
in ಸಿಟಿಜನ್ ಜರ್ನಲಿಸ್ಟ್
Featured Video Play Icon
0
SHARES
0
VIEWS
Share on FacebookShare on Twitter

ಬೀದರ್ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ   ಪ್ರತಿನಿತ್ಯ ಸಾವಿರಾರು ವಾಹನಗಳು  ಓಡಾಡುತ್ತವೆ. ಅಲ್ಲದೆ ರಾಷ್ಟ್ರೀಯ ಹೆದ್ದಾರಿ ತುಂಬಾ ಡಾಬಾ ಹೊಟೇಲ್‌ಗಳು ಭರ್ಜರಿ ವ್ಯಾಪಾರ ಮಾಡ್ತಿವೆ. ಆದ್ರೆ ಇದೇ ಈಗ ಬೀದರ್‌ನ ನಾರಾಯಣಪುರ ಮಂದಿಗೆ ಶಾಪವಾಗಿ ಪರಿಣಮಿಸಿದೆ. ಎಲ್ಲಿ ನೋಡಿದ್ರೂ ಕಸದ ರಾಶಿ. ಗಬ್ಬು ನಾತ, ನೊಣ, ಸೊಳ್ಳೆಗಳ ಕಾಟ.  ಇದು ಬೀದರ್ ಜಿಲ್ಲೆಯ ಔರಾದ ತಾಲೂಕಿನ ನಾರಾಯಣಪುರ ಗ್ರಾಮದ  ರಾಷ್ಟ್ರೀಯ  ಹೆದ್ಧಾರಿಯಲ್ಲಿ ಕಂಡು ಬರುವ ಸಾಮಾನ್ಯ ದೃಶ್ಯ.

 ನಾರಾಯಣಪುರ ಗ್ರಾಮದ  ರಾಷ್ಟ್ರೀಯ  ಹೆದ್ಧಾರಿ ಬದಿಯಲ್ಲಿ ಕೆಲವು   ಡಾಬಾಗಳಿವೆ. ಈ ಡಾಬಾಗಳಿಗೆ ಬರುವ  ಗ್ರಾಹಕರು ತಿಂದು ಕುಡಿದು ಎಸೆದ ಬಿಯರ್ ಬಾಟಲಿಗಳು ಹಾಗೂ ಕಸದ  ಮೂಟೆಗಳನ್ನು ಡಾಬಾ ಮಾಲೀಕರು  ರಸ್ತೆ ಬದಿಗೆ ಎಸೆದು ಇಡೀ ಪರಿಸರವನ್ನು ಗಬ್ಬು ನಾರುವಂತೆ ಮಾಡಿದ್ದಾರೆ.    ರಸ್ತೆಯ ಇಕ್ಕೆಲೆಗಳೆಡೆ ಕಣ್ಣು ಹಾಯಿಸಿದ್ರೆ ನಮಗೆ ಕಾಣ ಸಿಗೋದು ಚೆಲ್ಲಾ – ಪಿಲ್ಲಿಯಾಗಿ ಬಿದ್ದಿರುವ ತ್ಯಾಜ್ಯದ ರಾಶಿ, ಗೋಣಿ ಚೀಲಗಳಲ್ಲಿ ತುಂಬಿಸಿಟ್ಟಿರುವ ಬೀಯರ್ ಬಾಟಲಿಗಳು.

ಮೊದಲೇ  ಕೊರೋನಾದ ಅಟ್ಟಹಾಸಕ್ಕೆ ಇಡೀ ದೇಶವೇ  ಅಕ್ಷರಶ: ತತ್ತರಿಸಿಹೋಗಿದೆ.  ಇಂತಹ ಪರಿಸ್ಥಿತಿಯಲ್ಲೇ  ಅಧಿಕಾರಿಗಳ ಹಾಗೂ ಜನರ  ನಿರ್ಲಕ್ಷತನದಿಂದ ಈ ರಸ್ತೆ ಕಸದ ಕೊಂಪೆಯಾಗಿ  ಬದಲಾಗಿದ್ದು ದುರಂತವೇ ಸರಿ.  ಇನ್ನೂ ಸಾಲದೆಂಬಂತೆ ಕ್ಷೌರೀಕರು ಮುಖ್ಯ ರಸ್ತೆಯ ಪಕ್ಕದಲ್ಲೇ ಎಸೆದಿರುವ ಕೇಶ ರಾಶಿ.  ಬುದ್ದಿಜೀವಿಯಾದ ಈ ಮನುಷ್ಯರೇ ಈ ರೀತಿಯಾಗಿ ನಡೆದುಕೊಂಡರೆ ಇನ್ನು ಪ್ರಾಣಿ ಪಕ್ಷಿಗಳು ಹೇಗಿರಬೇಕು? ಇದೇ ರೀತಿ ಔರಾದ(ಬಾ) ಪಟ್ಟಣದಿಂದ ಕೂಗಳತೆಯಷ್ಟೇ ಹತ್ತಿರದಲ್ಲಿರುವ ನಾರಾಯಣಪುರ ಮುಖ್ಯ ರಸ್ತೆಯಲ್ಲೂ  ಮೂರ್ಕಾಲ್ಕು ಢಾಬಾಗಳಿವೆ. ಈ ಢಾಬಾಗಳದ್ದೂ ಅದೇ ಕತೆ. ಪ್ರತಿನಿತ್ಯ ಇಲ್ಲಿ ಕೂಡ ರಾಶಿ ರಾಶಿ ತ್ಯಾಜ್ಯ ಪದಾರ್ಥ ಹಾಗೂ ಮದ್ಯದ ಬಾಟಲಿಗಳನ್ನು ರಸ್ತೆಬದಿಗೆ ಎಸೆಯುತ್ತಿದ್ದಾರೆ. ಅಲ್ಲದೆ  ಬಾಟಲಿಗಳನ್ನು ಒಡೆದು  ಚೂರುಗಳನ್ನೇಲ್ಲಾ ರಸ್ತೆ ಬದಿಯಲ್ಲೇ ಎಸೆದು ಹೋಗುತ್ತಿದ್ದಾರೆ.

ಇದು ಕಿರಿದಾದ ರಸ್ತೆಯಾಗಿದೆ. ಇದರ ಮೇಲೆ ದಿನನಿತ್ಯ ಓಡಾಡುವ ಪಾದಾಚಾರಿಗಳು, ದ್ವಿಚಕ್ರ ವಾಹನ ಸವಾರರು ಮೂಗು ಮುಚ್ಚಿಕೊಂಡೇ ಸಂಚರಿಸಬೇಕಾಗಿದೆ. ಇಲ್ಲಿ ಎಸೆದ ತ್ಯಾಜ್ಯಗಳನ್ನು ತಿನ್ನಲು ಹಂದಿಗಳು ನಾಯಿಗಳು ಇಲ್ಲಿ ನಿತ್ಯವೂ ಬರುವುದರಿಂದ ಹೊಲದಲ್ಲಿ ಬೆಳೆ ನಾಶ ಮಾಡುತ್ತವೆ ಎಂಬುದು ಇಲ್ಲಿನ ಜನರ ಗೋಳು. ಅಲ್ಲದೆ ಹಂದಿಗಳು ಬೇಕಾಬಿಟ್ಟಿ ಓಡಾಡುತ್ತಿರುವುದರಿಂದ ರಸ್ತೆಯಲ್ಲಿ ಮೂರ್ನಾಲ್ಕು ಅಪಘಾತಗಳೂ ಸಂಭವಿಸಿವೆ.

 ಕಸದ ರಾಶಿಯಿಂದಾಗಿ ಇಲ್ಲಿನ ರಸ್ತೆಗಳು ಕೂಡ  ಕಿರಿದಾಗಿದೆ. ಹಾಗಾಗಿ ಇಲ್ಲಿ ಬರುವ ಘನ ವಾಹನಗಳಿಗೆ ರಸ್ತೆಯ ಮೇಲೆ ಓಡಾಡಲು ಭಾರೀ  ಸಮಸ್ಯೆಯಾಗುತ್ತಿದೆ. ಇಲ್ಲಿನ ಸಮಸ್ಯೆಯ ಬಗ್ಗೆ ಜನಸಾಮಾನ್ಯರು ಅಧಿಕಾರಿಗಳಿಗೆ ಸಾಕಷ್ಟು ಬಾರಿ ದೂರು ನೀಡಿದ್ದರೂ ಅಧಿಕಾರಿಗಳು ಕ್ಯಾರೇ ಅಂದಿಲ್ಲ ಅನ್ನೋದು ಅಲ್ಲಿನ ಜನರ ದೂರು.  ನಿತ್ಯ ಓಡಾಡುವ ಜನರಿಗೆ ಇಲ್ಲಿ ನಾನಾ ಸಾಂಕ್ರಾಮಿಕ ಕಾಯಿಲೆಯ ಭಯ ಆವರಿಸಿದೆ.  ಮಕ್ಕಳು ಮರಿಗಳು ಇಲ್ಲಿ ಓಡಾಡುವಾಗ ಗಾಜಿನ ಪುಡಿ ಕಾಲಿಗೆ ಚುಚ್ಚಿ ಅನಾಹುತವಾಗುವ ಸಂಭವವಿದೆ. ನಾರಾಯಣಪುರ ಗ್ರಾಮದ ಜನರ ಸಮಸ್ಯೆಯನ್ನು ಸಂಬಂಧ ಪಟ್ಟ ಅಧಿಕಾರಿಗಳು ಇದನ್ನುನೋಡಿ ತಕ್ಕ ಪರಿಹಾರ ಮಾಡಬೇಕು ಜನರ ಕಷ್ಟಗಳಿಗೆ ಸ್ಪಂದಿಸಬೇಕು ಎಂಬುದು ವಿಜಯಾ ಟೈಮ್ಸ್ ಆಶಯವಾಗಿದೆ.

  • ಸಿಟಿಜನ್ ಜರ್ಲಿಸ್ಟ್ ಪರಮೇಶ್ವರ ಬಿರಾದಾರ ನಾರಾಯಣಪುರ

Related News

basket story
ಸಿಟಿಜನ್ ಜರ್ನಲಿಸ್ಟ್

ಬುಟ್ಟಿ ಬದುಕು ಕಷ್ಟ..ಕಷ್ಟ ; ಇವರ ಜೊತೆ ಚೌಕಾಸಿ ಮಾಡೋ ಮುನ್ನ ಒಮ್ಮೆ ಯೋಚಿಸಿ!

March 23, 2022
krushi ilakhe
ಸಿಟಿಜನ್ ಜರ್ನಲಿಸ್ಟ್

ಕೃಷಿ ಇಲಾಖೆಯಲ್ಲಿ ಮಹಾ ಮೋಸ !

January 20, 2022
Featured Video Play Icon
ಸಿಟಿಜನ್ ಜರ್ನಲಿಸ್ಟ್

ಹದ್ದು ಮೀರಿ ವರ್ತಿಸುತ್ತಿರುವ ಸರ್ಕಾರಿ ಅಧಿಕಾರಿ

October 10, 2022
ರಸ್ತೆ ಇಲ್ಲದೆ ಸುಸ್ತು ! ಸರ್ಕಾರ ಆಶ್ರಯ ಮನೆ ಕಟ್ಟಿದೆ, ಆದ್ರೆ ರಸ್ತೆಯೇ ಮಾಡ್ಲಿಲ್ಲ. ರಸ್ತೆ ಇಲ್ಲದೆ 17 ವರ್ಷಗಳಿಂದ ಒದ್ದಾಡುತ್ತಿರುವ ಬಡ ಜನತೆ. ಇದು ಚೆನ್ನಪಟ್ಟಣದ ಲಾಳಘಟ್ಟದ ತಮಿಳು ಕಾಲೋನಿಯ ದುರಂತದ ಕಥೆ ಇದು
ಸಿಟಿಜನ್ ಜರ್ನಲಿಸ್ಟ್

ರಸ್ತೆ ಇಲ್ಲದೆ ಸುಸ್ತು ! ಸರ್ಕಾರ ಆಶ್ರಯ ಮನೆ ಕಟ್ಟಿದೆ, ಆದ್ರೆ ರಸ್ತೆಯೇ ಮಾಡ್ಲಿಲ್ಲ. ರಸ್ತೆ ಇಲ್ಲದೆ 17 ವರ್ಷಗಳಿಂದ ಒದ್ದಾಡುತ್ತಿರುವ ಬಡ ಜನತೆ. ಇದು ಚೆನ್ನಪಟ್ಟಣದ ಲಾಳಘಟ್ಟದ ತಮಿಳು ಕಾಲೋನಿಯ ದುರಂತದ ಕಥೆ ಇದು

January 4, 2022

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
Menu
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.