ಅಂಪನ್ ಚಂಡಮಾರುತಕ್ಕೆ ನಲುಗಿದ ಮೂರು ರಾಜ್ಯಗಳು

ಬುಧವಾರ ಕೊಲ್ಕತಾದಲ್ಲಿ ಅಂಪನ್ ಚಂಡಮಾರುತ ಅಪ್ಪಳಿಸಿದೆ.. ಕೊರೋನಾ ಭೀತಿಗಿಂತ ಚಂಡಮಾರುತದ ಹೊಡೆತಕ್ಕೆ ಜನ್ರು ಬೆಚ್ಚಿಬಿದ್ದಿದ್ದಾರೆ. ಬಾಗ್ಲಾದೇಶ, ಪಶ್ಚಿಮಬಂಗಾಳ ಮತ್ತು ಒಡಿಶಾ ರಾಜ್ಯಗಳನ್ನು ನಡುಗಿಸಿ ಬಿಟ್ಟಿದೆ.190 ಕಿ.ಮೀ ವೇಗದಲ್ಲಿ ಅಂಪನ್ ಚಂಡಮಾರುತ ದಾಳಿ ಇಟ್ಟಿದ್ದು ; ಚಂಡಮಾರುತಕ್ಕೆ 3 ಮಂದಿ ಸಾವನ್ನಪ್ಪಿದ್ದಾರೆ ಅನ್ನೋ ಮಾಹಿತಿ ಮೂಲಗಳಿಂದ ತಿಳಿದುಬಂದಿದೆ.ಅದೇ ರೀತಿ ಬಾಂಗ್ಲಾದೇಶದಲ್ಲಿ 4ಕ್ಕೂ ಹೆಚ್ಚು ಜನರು ಚಂಡಮಾರುತಕ್ಕೆ ಬಲಿಯಾಗಿರುವ ಮಾಹಿತಿ ಸಿಕ್ಕಿದೆ.

ಆದ್ರೆ ಬಾಂಗ್ಲಾದೇಶ ಮುಖ್ಯಮಂತ್ರಿ ಮಮತಾಬ್ಯಾನಜರ್ಿ ಹೇಳುವ ಪ್ರಕಾರ 10ಕ್ಕೂ ಹೆಚ್ಚು ಜನರು ಅವರ ರಾಜ್ಯದಲ್ಲಿ ಸತ್ತಿದ್ದಾರೆ ಜೊತೆಗೆ ನಂದಿಗ್ರಾಮ್, ರಾಮನಗರ, ಉತ್ತರ ಮತ್ತು ದಕ್ಷಿಣ ಪರಗಣ ಜಿಲ್ಲೆಗಳು ನಾಶವಾಗಿವೆ ಅನ್ನೋ ಹೇಳಿಕೆ ನೀಡಿದ್ದಾರೆ. ಇನ್ನೂ ಅತೀವ ಗಾಳಿ ಬೀಸುತ್ತಿರುವ ಹಿನ್ನಲೆಬಂಗಾಳ ಮತ್ತು ಒಡಿಶಾ ರಾಜ್ಯದಲ್ಲಿ ಮುಂಚಿತವಾಗಿಯೇ 6.58 ಲಕ್ಷ ಮಂದಿಯನ್ನು 15000 ಪ್ರವಾಹ ಕೇಂದ್ರಗಳಿಗೆ ಸೇರಿಸಲಾಗಿದೆ.

ಇನ್ನು ಅಂಪನ್ ಚಂಡಮಾರುತದಿಂದ ಸಾಕಷ್ಟು ಆಸ್ತಿ ಪಾಸ್ತಿ ನಾಶವಾಗಿದೆ ಜನಜೀವನ ಸಂಪೂರ್ಣ ಕಂಗೆಟ್ಟು ಹೋಗಿದೆ. ಕೊರೋನಾದಿಂದ ಸೊರಗಿ ಹೋಗಿರೋ ಜನರು ಬದುಕು ಕಟ್ಟಿಕೊಳ್ಳಲು ಕಾಲವೇ ಬೇಕಾದ ಸಂದರ್ಭದಲ್ಲಿ ಇಂಥಹ ಚಂಡಮಾರುತ ಮತ್ತೆ ದಿಗಿಲುಬಡಿದಂಥಹ ಪರಿಸ್ಥಿತಿ ನಿಮರ್ಿಸಿದೆ. ಕೊರೋನಾದಿಂದ ಪಶ್ಚಿಮಬಂಗಾಳದಲ್ಲಿ 250ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ರು ಆದ್ರೆ ಚಂಡಮಾರುತ ಅದಕ್ಕಿಂತ ಜಾಸ್ತಿ ನಾಶ ಮಾಡುತ್ತಿದೆ.

Exit mobile version