ರಾಜ್ಯದಲ್ಲಿ ಸಾವಿರಾರು ಅತಿಥಿ ಉಪನ್ಯಾಸಕರು ವೇತನದಲ್ಲಿ ಆಗುತ್ತಿರುವ ತಾರತಮ್ಯವನ್ನು ಖಂಡಿಸಿ ಪ್ರತಿಭಟನೆಯನ್ನು ಮಾಡುತ್ತಿದ್ದಾರೆ ಹಾಗೂ ಇದಕ್ಕೆ ಮಣಿದ ರಾಜ್ಯ ಸರ್ಕಾರ ಅತಿಥಿ ಉಪನ್ಯಾಸಕರ ಗೌರವಧನ ಹೆಚ್ಚಳ ಮಾಡುವುದಾಗಿ ಘೋಷಿಸಿದೆ
ಸರ್ಕಾರದ ಹೊಸ ದೇಶದ ಪ್ರಮುಖ ಅಂಶಗಳು :
- ಯುಜಿಸಿ ನಿಗದಿಪಡಿಸಿದ ಅರ್ಹತೆ ಇದ್ದವರು ಹಾಗೂ ಐದು ವರ್ಷ ಹಾಗೂ ಅದಕ್ಕಿಂತ ಜಾಸ್ತಿ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರ ಗೌರವಧನ ಮಾಸಿಕ 32,000 ಆಗಲಿದೆ ,ಹಾಗೂ ಐದು ವರ್ಷಕ್ಕಿಂತ ಕಡಿಮೆ ಕಾಲ ಸೇವೆ ಸಲ್ಲಿಸಿರುವ ಅವರಿಗೆ ಮಾಸಿಕ 30,000 ಗೌರವಧನ ಹೆಚ್ಚಾಗಲಿದೆ
- ಯುಜಿಸಿ ನಿಗದಿಪಡಿಸಿದ ಅರ್ಹತೆ ಇಲ್ಲದೆ 5 ವರ್ಷಕ್ಕಿಂತ ಹಾಗೂ ಅದಕ್ಕಿಂತ ಜಾಸ್ತಿ ಸೇವೆ ಸಲ್ಲಿಸಿರುವ ಸಲ್ಲಿಸಿರುವ ಅತಿಥಿ ಉಪನ್ಯಾಸಕರ ಗೌರವಧನ ಮಾಸಿಕ 28,000 ಆಗಲಿದೆ ಹಾಗೂ ಐದು ವರ್ಷಕ್ಕಿಂತ ಕಡಿಮೆ ಕಾಲ ಸೇವೆ ಸಲ್ಲಿಸಿರುವ ಅವರಿಗೆ ಮಾಸಿಕ 25,000 ರೂಪಾಯಿ ಗೌರವಧನ ಹೆಚ್ಚಾಗಲಿದೆ
- ಇನ್ನು ಮುಂದೆ ಸೆಮಿಸ್ಟರ್ ಬದಲಿಗೆ ವರ್ಷಕ್ಕೆ ಅಂದರೆ ಹತ್ತು ತಿಂಗಳಿಗೆ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಲಾಗುವುದು
- ಅತಿಥಿ ಉಪನ್ಯಾಸಕರ ಕೆಲಸದ ಅವಧಿಯನ್ನು ಎಂಟರಿಂದ 10 ಗಂಟೆಗಳ ಬದಲಿಗೆ ಇನ್ನುಮುಂದೆ 15 ಗಂಟೆಗಳಿಗೆ ಹೆಚ್ಚಿಸಲಾಗಿದೆ
- ಗೌರವಧನವನ್ನು ಪ್ರತಿ ತಿಂಗಳ 10ನೇ ತಾರೀಖಿನ ಒಳಗಡೆ ಇನ್ನುಮುಂದೆ ಪಾವತಿ ಮಾಡಲಾಗುವುದು
ಈ ಹಿಂದೆ ಇದ್ದ ನಿಯಮಗಳು:
- ಈ ಹಿಂದೆ ಯುಜಿಸಿ ಅರ್ಹತೆ ಇದ್ದವರಿಗೆ 13,000 ಹಾಗೂ ಅರ್ಹತೆ ಇಲ್ಲದವರಿಗೆ ಮಾಸಿಕ 11,000 ವೇತನವನ್ನು ನೀಡಲಾಗುತ್ತಿತ್ತು
- ಈ ಹಿಂದೆ ಕೆಲಸದ ಅವಧಿ ಎಂಟು ಗಂಟೆಗಳ ಕಾಲ ಇರುತ್ತಿತ್ತು
ಹೊಸ ಆದರ್ಶಕ್ಕೆ ಸಂಬಂಧಪಟ್ಟಂತೆ ಸಿಎಂ ಬೊಮ್ಮಾಯಿ ಅವರು ಟ್ವೀಟ್ ಮಾಡಿದ್ದಾರೆ, ಬೊಮ್ಮಾಯಿ ಅವರು ಜನವರಿ 14ರಂದು 5:40 ಕ್ಕೆ ಟ್ವೀಟ್ ಮಾಡಿ ಅದನ್ನು ಅಳಿಸಿ 5.50 ಕ್ಕೆ ಇನ್ನೊಂದು ಟ್ವೀಟ್ ಮಾಡಿದ್ದಾರೆ.
ಅತಿಥಿ ಉಪನ್ಯಾಸಕರ ಆಕ್ರೋಶ:
ಸರ್ಕಾರ ಉದ್ದೇಶ ಅತಿಥಿ ಉಪನ್ಯಾಸಕರನ್ನು ಕೆಲಸದಿಂದ ವಜಾ ಮಾಡುವುದು , ಕೆಲಸ ಜಾಸ್ತಿ ಮಾಡುವುದು.ಸಂಬಳ ಹೆಚ್ಚಳವನ್ನು ಮಾಡಲಾಗುತ್ತಿದೆ ಎಂದು ಒಂದು ನೆಪ ಎಂದು ಅತಿಥಿ ಉಪನ್ಯಾಸಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.