ಬೆಂಗಳೂರು:ಹೆಚ್ಚಿನ ಜನರು ಆರ್ಥಿಕವಾಗಿ ಸದೃಢವಾಗಿದ್ದು, ಬಿಪಿಎಲ್ ಕಾರ್ಡ್ ಪಡೆದುಕೊಂಡ ವರಿಗೆ ರಾಜ್ಯ ಸರ್ಕಾರ ಬಿಗ್ ಶಾಕ್ ನೀಡಿದೆ. ಅನರ್ಹ ಬಿಪಿಎಲ್ ಕಾರ್ಡ್ ನಿಂದಾಗಿ ಸರಕಾರಕ್ಕೆ ಭಾರಿ ಪ್ರಮಾಣದ ನಷ್ಟ ಉಂಟಾಗಿರವುದನ್ನು ಮನಗಂಡ ಸರ್ಕಾರ, ಈ ವಿಚಾರ ವನ್ನು ಗಂಭೀರವಾಗಿ ಪರಿಗಣಿಸಿದೆ. ಈ ನಿಟ್ಟಿನಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಬಿಪಿಎಲ್ ಕಾರ್ಡ್ ಪಡೆದ ಅನರ್ಹರ ಪತ್ತೆಗೆ ಮುಂದಾಗಿತ್ತು.
ಇಲಾಖೆ ಪಡಿತರ ಚೀಟಿ ಹಿಂತಿರುಗಿಸುವಂತಹ ಅವಧಿಯನ್ನು ಎರಡು ಮೂರು ಬಾರಿ ವಿಸ್ತರಿಸಿತ್ತು. ಅದಾಗಿಯು ಹೆಚ್ಚಿನ ಸಂಖ್ಯೆಯ ಜನರು ಹಿಂತಿರುಗಿಸಲು ಮುಂದಾಗದ ಹಿನ್ನಲೆಯಲ್ಲಿ ಇಲಾಖೆಯೇ ನಕಲಿಗಳ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗಿದೆ.
ಸುಮಾರು 15 ತಿಂಗಳಲ್ಲಿ (2019 ಮೇ – 2020 ಆಗಸ್ಟ್ ವರೆಗೆ) ರಾಜ್ಯಾದ್ಯಂತ 94, 885 ಎಎವೈ ಹಾಗೂ ಬಿಪಿಎಲ್ ಕಾರ್ಡ್ ಗಳನ್ನು ಇಲಾಖೆ ರದ್ದುಪಡಿಸಿದೆ. ಸರ್ಕಾರಕ್ಕೆ ಪ್ರತಿ ತಿಂಗಳು ಅಂದಾಜು ಆರು ಕೋಟಿಗೂ ಹೆಚ್ಚಿನ ಹಣ ಉಳಿತಾಯವಾಗುತ್ತಿರುವುದು ಅಂಕಿ ಅಂಶಗಳಿಂದ ತಿಳಿದು ಬಂದಿದೆ. ಬಿಪಿಎಲ್ ಹಾಗೂ ಎ ಎ ವೈ ಪಡಿತರ ಚೀಟಿ ಗಳಿಗೆ ಸರಕಾರದಿಂದ ಸದ್ಯ ಉಚಿತವಾಗಿ ಪಡಿತರ ವಿತರಿಸಲಾಗುತ್ತಿದೆ.
ಫಲಾನುವಿಗಳಿಗೆ ನೀಡುವ ಪ್ರತಿ ಕೆಜಿಗೆ ಸರಕಾರ 22-23 ರೂ ವೆಚ್ಚ ಮಾಡುತ್ತಿದೆ. ಅದರಂತೆ 94 ಸಾವಿರ ಪಡಿತರ ಚೀಟಿಗಳಲ್ಲಿ ಸರಾಸರಿ ಮೂರು ಸದಸ್ಯರಂತೆ 2.82 ಲಕ್ಷ ಸದಸ್ಯರು ಇಷ್ಟು ದಿನ ಪಡಿತರ ಪಡೆಯುತ್ತಿದ್ದರು. ಅದರಂತೆ ಅಂದಾಜು 6 ಕೋಟಿಗೂ ಹೆಚ್ಚಿನ ಹಣ ಸರಕಾರಕ್ಕೆ ಹೋರೆಯಾಗುತಿತ್ತು ಎಂಬ ಮಾಹಿತಿ ಲಭ್ಯವಾಗಿದೆ.