“ಕತ್ತಲ ಕಾನು” ಪುಸ್ತಕ ಲೋಕಾರ್ಪಣೆಯಲ್ಲಿ ಮುಖ್ಯ ಅತಿಥಿಯಾಗಿದ್ದ ತನಿಖಾ ವರದಿಗಾರ್ತಿ ವಿಜಯಲಕ್ಷ್ಮಿ ಶಿಬರೂರು

ಬೆಂಗಳೂರು: ಎ.ಶ್ರೀನಿವಾಸ್ ಪ್ರಸಾದ್ ರವರ ಚೊಚ್ಚಲ ಕಾದಂಬರಿ ‘ಕತ್ತಲ ಕಾನು’ ಲೋಕಾರ್ಪಣೆಗೊಂಡಿದೆ. ಈ ಪುಸ್ತಕ ಬಿಡುಗಡೆ ಸಮಾರಂಭದ ಜೊತೆಗೆ ಸರ್ಗ ಕ್ರಿಯೇಷನ್ಸ್ ಆಯೋಜಿಸಿದ ಫ್ಯಾಷನ್ ಶೋನಲ್ಲಿ ನಟಿ ಪ್ರಿಯಾಂಕ ಉಪೇಂದ್ರ ಸೆಂಟರ್ ಆಫ್ ಅಟ್ರ್ಯಾಕ್ಷನ್ ಆಗಿದ್ದರು.

ಇನ್ನು ಹಿರಿಯ ಸಾಹಿತಿಗಳಾದ ಡಾ.ಭೈರಮಂಗಲ ರಾಮೇಗೌಡರು ಅಧ್ಯಕ್ಷತೆ ವಹಿಸಿದ್ದ ಈ ಕಾರ್ಯಕ್ರಮದಲ್ಲಿ ಖ್ಯಾತ ತನಿಖಾ ವರದಿಗಾರ್ತಿಯಾಗಿರುವ ವಿಜಯಲಕ್ಷ್ಮಿ ಶಿಬರೂರು,ರಂಗಕಲಾವಿದರಾದ ಟಿ.ಶ್ರೀನಿವಾಸಮೂರ್ತಿ, ಸಾಹಿತಿಗಳಾದ ಪ್ರೊ.ಶಾಂತರಾಜು, ಡಾ.ಭೈರೇಗೌಡ, ರೇಡಿಯೋ ನಿರೂಪಕರಾದ ರಾಜೇಶ್ ಲವ್ ಗುರು, ಯುವ ನಿರ್ದೇಶಕಿ ರಿಷಿಕಾ ಶರ್ಮಾ, ನಟ ನಿಹಾಲ್, ರಾಕುಂಜೀ ಸಂಸ್ಥೆಯ ನಿರ್ದೇಶಕರಾಗಿರುವ ಶ್ರೀ ಆಚಾರ್ಯ ರಾಕುಂಜೀ ಯವರುಗಳು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಯಕ್ಷಗಾನ, ಸಂಗೀತ ಹಾಗೂ ನೃತ್ಯ ಕಾರ್ಯಕ್ರಮಗಳು ಎಲ್ಲರ ಚಿತ್ತವನ್ನು ತನ್ನತ್ತ ಸೆಳೆದಿತ್ತು.

Exit mobile version