ಕೊರೋನಾದ ಭೀತಿ ಈಗ ದೆಹಲಿಯ ಆರೋಗ್ಯ ಸಚಿವರಿಗೂ ಕಾಡುತ್ತಿದೆ. ಮಂಗಳವಾರದಂದು ಸತ್ಯೇಂದರ್ ಜೈನ್ಗೆ ಕೊರೋನಾದ ಲಕ್ಷಣಗಳು ಕಾಡಿದೆ. ತೀವ್ರ ಉಸಿರಾಟದ ತೊಂದರೆಯಿಂದ ಹಾಗು ಜ್ವರದಿಂದ ಬಳಲುತ್ತಿದ್ದಿದರಿಂದ ಇಂದು ಬೆಳಗ್ಗೆ ದೆಹಲಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಭಾನುವಾರ ಬೆಳಗ್ಗೆ ಗೃಹ ಸಚಿವರ ಹಾಗು ದೆಹಲಿ ಸರ್ಕಾರದ ನಡುವೆ ನಡೆದ ಸಂವಾದದಲ್ಲಿ ಸತ್ಯೇಂದರ್ ಜೈನ್ ರವರು ಭಾಗಿಯಾಗಿದ್ದರು. ಈ ಸಂವಾದದಲ್ಲಿ ದೆಹಲಿಯ ಡೆಪ್ಯುಟಿ ಸಿಎಂ ಮನೀಶ್ ಸಿಪೋಡಿಯ, ಗೃಹ ಸಚಿವ ಅಮಿತ್ ಶಾ, ದೆಹಲಿ ಮುಖ್ಯ ಮಂತ್ರಿ ಅರವಿಂದ್ ಕೇಜ್ರೀ ವಾಲ್ ಸೇರಿದಂತೆ ಹಲವಾರು ಗಣ್ಯರು ಭಾಗಿಯಾಗಿದ್ದರು. ಈಗ ಸತ್ಯೇಂದರ್ ಸಿಂಗ್ ಗೆ ಕೊರೋನಾ ಪಾಸಿಟಿವ್ ಬಂದರೆ ಎಂಬ ಆತಂಕ ಕಾಡುತ್ತಿದೆ.
ಮಂಗಳವಾರ ಮುಂಜಾನೆ ಅರಿವಿಂದ್ ಕೇಜ್ರೀವಾಲ್ ರವರು ತಮ್ಮ ಟ್ವಟರ್ ಖಾತೆಯಲ್ಲಿ ಸತ್ಯೇಂದರ್ ಜೈನ್ರನ್ನು ಉದ್ದೇಶಿಸಿ ನೀವು ಹಗಲು ರಾತ್ರಿಯನ್ನದೆ ನಿಮ್ಮ ಆರೋಗ್ಯವನ್ನು ಬದಿಗಿಟ್ಟು ಜನರಿಗಾಗಿ ದುಡಿಯುತ್ತೀದ್ದೀರ. ದಯವಿಟ್ಟು ನೀವು ಬೇಗ ಹುಷಾರಾಗಿ ಎಂದು ಬರೆದುಕೊಂಡಿದ್ದಾರೆ.