ಮಂಗಳೂರು: ಆಂದ್ರ ಪ್ರದೇಶದ ಸಿ ಎಂ ರಿಲೀಪ್ ಫಂಡ್ ಗೆ ಕನ್ನ ಹಾಕಲು ಹೊರಟ ಕೋಸ್ಟಲ್ ವುಡ್ ನಿರ್ದೇಶಕ ಉದಯ್ ಕುಮಾರ್ ಶೆಟ್ಟಿ ಸೇರಿ ಆರು ಜನರನ್ನು ಪೊಲೀಸರು ಬಂಧಿಸಿದ್ದಾರೆ. ಉದಯ್ ಶೆಟ್ಟಿ ಕಾಂತಾವರ, ಮೂಡಬಿದಿರೆಯ ಯೋಗೀಶ್ ಆಚಾರ್ಯ, ಮಂಗಳೂರಿನ ಬ್ರಿಜೇಶ್ ರೈ, ಬೆಳ್ತಂಗಡಿಯ ಗಂಗಾಧರ ಸುವರ್ಣ ಬಂಧಿತ ಆರೋಪಿಗಳಾಗಿದ್ದು ಇನ್ನಿಬ್ಬರ ಹೆಸರನ್ನು ಪೊಲೀಸರು ತಿಳಿಸಿಲ್ಲ. ಆಂದ್ರ ಸಿ ಎಂ ಖಾತೆಯಿಂದ ಒಂದೇ ಸಲ ಬರೋಬ್ಬರಿ 58 ಕೋಟಿ ರೂ ವಿತ್ ಡ್ರಾ ಆಗುತ್ತಿರುವ ವಿಚಾರ ತಿಳಿಯುತ್ತಿದ್ದಂತೆ ಬ್ಯಾಂಕ್ ಸಿಬ್ಬಂಧಿಗಳಿಗೆ ಅನುಮಾನ ಮೂಡಿದೆ.
ಈ ಬಗ್ಗೆ ಬ್ಯಾಂಕ್ ಮ್ಯಾನೇಜರ್ ಆಂದ್ರ ಸರ್ಕಾರಕ್ಕೆ ಕರೆ ಮಾಡಿ ಮಾತಾಡಿದ್ದಾರೆ. ಈ ವೇಳೆ ಆಂದ್ರ ಸಿ ಎಂ ಕಚೇರಿ ಅಷ್ಟು ಮೊತ್ತದ ಚೆಕ್ ಯಾರಿಗೂ ಕೊಟ್ಟಿಲ್ಲವೆಂದು ಸ್ಪಷ್ಟನೆ ನೀಡಿದೆ. ಬ್ಯಾಂಕ್ ಮ್ಯಾನೇಜರ್ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದು 6 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಒಂದೊಂದು ರೂಪಾಯಿಗೂ ಕಷ್ಟ ಪಡುತ್ತಾ ಒಂದು ದಿನದ ಊಟಕ್ಕೆ ಪರದಾಡುವ ಜನ ಒಂದು ಕಡೆಯಾದರೆ, ಒಂದೇ ದಿನದ ರಾತ್ರಿ ಶ್ರೀಮಂತರಾಗಲು ಯಾರ್ಯಾರದೋ ಖಾತೆಗಳಿಗೆ ಕನ್ನ ಹಾಕುವ ಜನ ಇನ್ನೊಂದೆಡೆ. 6 ಜನ ಖದೀಮರ ತಂಡ ನಕಲಿ ಚೆಕ್ ಬಳಕೆ ಮಾಡಿಕೊಂಡು ಹಣ ವಿತ್ ಡ್ರಾ ಮಾಡಲು ಮುಂದಾಗಿ ಪೊಲೀಸ್ ಅಥಿತಿಯಾಗಿದ್ದಾರೆ. ಈ 6 ಜನ ಖದೀಮರು ಹಲವು ವರ್ಷಗಳಿಂದ ಇಂತಹ ದಂಧೆಯಲ್ಲಿ ತೊಡಗಿರುವುದು ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾರೆ ಎನ್ನಲಾಗಿದೆ.