ಗೌತಮ್ ಗಂಭೀರ್ ಯಾವ ಆಟಗಾರನ ಬಗ್ಗೆ ಆಕ್ರೋಶ ಹೊರಹಾಕಿದ್ರು ಗೊತ್ತಾ..?

ಭಾರತ ತಂಡ ಮಾಜಿ ಕ್ರಿಕೆಟಿಗ, ಸಂಸದ ಗೌತಮ್​ ಗಂಭೀರ್​ ಹಾಗೂ ಪಾಕಿಸ್ತಾನ ಮಾಜಿ ಕ್ರಿಕೆಟಿಗ ಆಫ್ರಿದಿ ನಡುವಿನ ಟ್ವೀಟ್​ ವಾರ್​ ಮತ್ತೆ ಶುರುವಾಗಿದೆ. ಕಾಶ್ಮೀರ ವಿಚಾರದ ಬಗ್ಗೆ ಟ್ವೀಟ್​ ಮಾಡಿದ್ದ ಅಫ್ರಿದಿಗೆ ಟ್ವೀಟ್​ ಮೂಲಕವೇ ಗಂಭೀರ್​ ಸಿಕ್ಸರ್​ ಬಾರಿಸಿದ್ದಾರೆ.

ಶಾಹಿದ್​ ಅಫ್ರಿದಿ ಬುಧವಾರ ಟ್ವಿಟ್ಟರ್​​ನಲ್ಲಿ”ದೇಶದ ಜನತೆಯಲ್ಲ ಪ್ರಧಾನ ಮಂತ್ರಿ ‘ಕಾಶ್ಮೀರ್​ ಅವರ್​’ ಕರೆಗೆ ಪ್ರತಿಕ್ರಿಯಿಸಬೇಕು. ನಾನು ಶುಕ್ರವಾರ ಮಧ್ಯಾಹ್ನ 12 ಗಂಟೆಗೆ ಮಝರ್​ ಇ ಕ್ವೈದ್​ಗೆ ಬರುತ್ತೇನೆ. ನಮ್ಮ ಕಾಶ್ಮೀರಿ ಸಹೋದರರೊಂದಿಗೆ ಒಗ್ಗಟ್ಟನ್ನು ತೋರಿಸಲು ನನ್ನ ಜೊತೆ ನೀವು ಸೇರಿಕೊಳ್ಳಿ. ಶೀಘ್ರದಲ್ಲೇ LOC (ಲೈನ್​ ಆಫ್​ ಕಂಟ್ರೋಲ್​)ಗೂ ಭೇಟಿ ನೀಡಲಿದ್ದೇನೆ ಎಂದು ಟ್ವೀಟ್​ ಮಾಡಿದ್ದಾರೆ.

ಈ ಟ್ವೀಟ್​ನಿಂದ ಕೋಪಗೊಂಡಿರುವ ಗಂಭೀರ್​ ಅವರು ಅಫ್ರಿದಿ ಫೋಟೊ ಟ್ವೀಟ್​ ಮಾಡಿ, ಈ ಚಿತ್ರದಲ್ಲಿ ಶಾಹೀದ್​ ಅಫ್ರಿದಿ ಮುಜುಗರಕ್ಕೊಳಗಾಗುವುದಕ್ಕೆ ಏನು ಮಾಡಬೇಕು ಎಂದು ಶಾಹಿದ್​ ಆಫ್ರಿದಿಯನ್ನೇ ಕೇಳುತ್ತಿದ್ದಾನೆ. ಇದರಿಂದ ಶಾಹಿದ್ ಆಫ್ರಿದಿ ಪ್ರಬುದ್ಧನಾಗಲು ನಿರಾಕರಿಸಿದ್ದಾನೆ ಎಂಬುದರ ಬಗ್ಗೆ ನನಗಿದ್ದ ಅನುಮಾನಗಳು ಖಚಿತವಾಗಿವೆ. ಆತ ಪ್ರಬುದ್ಧನಾಗಲು ಆನ್​ಲೈನ್​ ಶಿಶುವಿಹಾರದ ಟ್ಯುಟೋರಿಯಲ್​ಗೆ ಸೇರಿಕೊಳ್ಳುವಂತೆ ಆದೇಶಿಸುತ್ತೇನೆ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ಅಫ್ರಿದಿ ಅಲ್ಲದೆ, ಜಾವೇದ್​ ಮಿಯಾಂದಾದ್​ ಜೊತೆಗೆ ಗಡಿ ನಿಯಂತ್ರಣ ರೇಖೆ(LOC)ಗೆ ಇತರೆ ಕ್ರೀಡಾಪಟುಗಳೊಂದಿಗೆ ಭೇಟಿ ನೀಡಿ ಶಾಂತಿ ಬಾವುಟ ಹಾರಿಸುವುದಾಗಿ ತಿಳಿಸಿದ್ದಾರೆ.

Exit mobile version