ತಿರುಪತಿಯಲ್ಲಿ ಗೀತಾ ಶಿವರಾಜ್ ಕುಮಾರ್ ಮುಡಿ ಕೊಟ್ಟಿದ್ಯಾಕೆ..?

ಇಷ್ಟಾರ್ಥ ಸಿದ್ಧಿಗಾಗಿ ದೇವರ ಮೊರೆ ಹೋಗುವುದು, ಹೋಮ ಹವನ ಪೂಜೆ, ಮುಡಿ ಕೊಡುವಿಕೆ ಹೀಗೆ ಅನೇಕ ರೀತಿಯ ನಂಬಿಕೆಗಳನ್ನು ಪಾಲಿಸುವ ಮಂದಿ ನಾವು ನೀವು..ಇಂತಹ ನಂಬಿಕೆಗಳನ್ನು ಜನಸಾಮಾನ್ಯರು ಮಾತ್ರವಲ್ಲ ಸೆಲೆಬ್ರಿಟಿಗಳಿಗೂ ಸಹ ಪಾಲಿಸುತ್ತಾರೆ..ಹೌದು..ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಪತ್ನಿ ಸಮೇತರಾಗಿ ತಿರುಪತಿ ತಿರುಮಲದ ದರ್ಶನಕ್ಕೆ ತೆರಳಿ ಆಶೀರ್ವಾದ ಪಡೆದುಕೊಂಡಿದ್ದಾರೆ.

ಬಿಳಿ ಪಂಚೆ ತೊಟ್ಟು ಶಿವಣ್ಣ ಸಾಂಪ್ರದಾಯಿಕವಾಗಿ ಕಾಣಿಸಿಕೊಂಡಿದ್ದಾರೆ. ಅವರ ಪತ್ನಿ ಗೀತಾ ತಿರುಪತಿಗೆ ತಮ್ಮ ಮುಡಿಯನ್ನು ಕೊಟ್ಟಿದ್ದಾರೆ. ಈ ವೇಳೆ ಅರ್ಚಕರು ಶಿವಣ್ಣ ದಂಪತಿಗೆ ಕೇಸರಿ ಶಾಲು ಹೊದೆಸಿ ಗೌರವಿಸಿದ್ದಾರೆ..ಆದ್ರೆ ಶಿವಣ್ಣ ಪತ್ನಿ ಸಮೇತರಾಗಿ ದಿಢೀರನೆ ತಿರುಪತಿಗೆ ಭೇಟಿ ಕೊಟ್ಟಿದ್ಯಾಕೆ..? ಅದಕ್ಕೂ ಮಿಗಿಲಾಗಿ ಗೀತಾ ಶಿವರಾಜ್ ಕುಮಾರ್ ರವರು ಮುಡಿ ಕೊಟ್ಟಿದ್ಯಾಕೆ…? ಹೀಗೆ ಅನೇಕ ಪ್ರಶ್ನೆಗಳು ಶಿವಣ್ಣ ಅಭಿಮಾನಿಗಳನ್ನು ಕಾಡುತ್ತಿದ್ದು, ಇನ್ನೂ ಉತ್ತರ ಸಿಗಬೇಕಿದೆ..

Exit mobile version