ದರ್ಟಿ ಫುಡ್‌ ಸೀಕ್ರೆಟ್‌

Dirty food sceret out vijayatimes  | ವಿಷ ಆಹಾರ ಮಾಫಿಯಾ ವಿರುದ್ಧ ವಿಜಯ ಟೈಮ್ಸ್ ಸಮರ

ವಿಷ ಆಹಾರ ಮಾಫಿಯಾದ ವಿರುದ್ಧ ಕವರ್‌ಸ್ಟೋರಿ ತಂಡ ನಿರಂತರವಾಗಿ ಹೋರಾಟ ಮಾಡುತ್ತಲೇ ಇದೆ. ನಾವು ತಿನ್ನೋ ಅನ್ನಕ್ಕೆ ವಿಷ ಹಾಕುವ ದಂಧೆಕೋರರನ್ನು ವಿಷ ಉಗ್ರರು ಅಂತ ಕರಿಯಬೇಕು. ಈ ಉಗ್ರರು ಜನಸಾಮಾನ್ಯರಿಗೆ ಗೊತ್ತಿಲ್ಲದೆ ಜನರ ಮೇಲೆ ದಾಳಿ ಮಾಡ್ತಾರೆ. ಈ ಉಗ್ರರು ಇಡೀ ಸಮಾಜದ ಸ್ವಾಸ್ಥ್ಯವನ್ನೇ ಹಾಳು ಮಾಡ್ತಾರೆ. ಜನರಿಗೆ ವಿಷ ತಿನ್ನಸಿ ನಿಧಾನವಾಗಿ ನಾನಾ ರೋಗಗಳಿಗೆ ತುತ್ತು ಮಾಡಿಸಿ ಕೊಲ್ತಾರೆ. ಕಾನೂನನ್ನು ಉಲ್ಲಂಘಿಸಿ ಕಾನೂನಿಗೆ ಸವಾಲೆಸೆಯುತ್ತಿದ್ದಾರೆ. ಹಣ ಗಳಿಸೋ ಉದ್ದೇಶದಿಂದ ಇತರರ ಹೆಣ ಬೀಳಿಸ್ತಾರೆ. ಇಂಥ ಆಹಾರ ಮಾಫಿಯಾಗಳ ವಿರುದ್ಧ ಇದೀಗ ವಿಜಯಟೈಮ್ಸ್ ತಂಡ ಸಮರ ಸಾರಿದೆ. ವಿಷ ಆಹಾರ ಮಾಫಿಯಾಗಳ ಬಣ್ಣ ಬಯಲು ಮಾಡಲು ರೆಡಿಯಾಗಿದೆ.

ಆಹಾರ ಮಾಫಿಯಾದ ಬಣ್ಣ ಬಯಲು ಮಾಡುವುದು ಸುಲಭದ ಮಾತಲ್ಲ. ಈ ದಂಧೆಕೋರರ ವಿರುದ್ಧ ಸಮರ ಸಾರಲು ಜನರ ಸಹಕಾರದ ಅಗತ್ಯವೂ ಇದೆ. ಜನ ತಮ್ಮ ಸುತ್ತಮುತ್ತಲು ನಡೆಯೋ ಇಂಥಾ ವಿಷ ಆಹಾರ ಮಾಫಿಯಾಗಳ ಸದಾ ನಿಗಾ ಇಡಬೇಕು. ಅದ್ರಲ್ಲೂ ಕೊರೋನಾ ದಾಳಿಯ ಬಳಿಕ ಹೊಟೇಲ್, ಡಾಬಾ, ಪೆಟ್ಟಿಗೆ ಅಂಗಡಿಗಳಲ್ಲಿ ಆಹಾರವನ್ನು ಅತ್ಯಂತ ಶುಚಿಯಿಂದ ತಯಾರಿಸಬೇಕು, ಜನರಿಗೆ ಬಡಿಸಬೇಕು. ಸರ್ಕಾರದ ನಿಯಮ ಪಾಲಿಸದ ಆಹಾರ ತಯಾರಕರ ವಿರುದ್ಧ ಹೋರಾಡಬೇಕು. ಈ ವಿಷ ಆಹಾರ ಮಾಫಿಯಾ ದೊಡ್ಡಮಟ್ಟದಲ್ಲಿ ನಡೀತಿದ್ರೆ ನೀವು ನಮ್ಮನ್ನು ಸಂಪರ್ಕಿಸಿ. ನಮ್ಮ ದೂರವಾಣಿ ಸಂಖ್ಯೆ ೮೩೧೭೩೯೮೪೮೬.  ನಾವು ರಹಸ್ಯ ಕಾರ್ಯಾಚರಣೆ ಮಾಡಿ ಅವರ ಉಗ್ರ ರೂಪವನ್ನು ಬಟಾಬಯಲು ಮಾಡ್ತೇವೆ. ಅಲ್ಲದೆ ಸ್ಥಳೀಯ ಆಹಾರ ಸುರಕ್ಷತಾ ಅಧಿಕಾರಿಗಳು ಕೂಡ ಈ ಬಗ್ಗೆ ಆಸಕ್ತಿ ವಹಿಸಬೇಕು. ಜನರ ಆರೋಗ್ಯ ರಕ್ಷಣೆ ಮಾಡುವ ಜವಾಬ್ದಾರಿಯನ್ನು ಸರ್ಕಾರ ಇವರಿಗೆ ವಹಿಸಿರುವ ಕಾರಣ ವಿಷ ಆಹಾರ ಮಾಫಿಯಾದ ವಿರುದ್ಧ ಸಮರ ಸಾರೋದು ಅವರ ಕರ್ತವ್ಯ. ಅಲ್ಲದೆ ಸಾರ್ವಜನಿಕರು ಕೊಡೋ ದೂರನ್ನು ಪರಿಶೀಲಿಸಿ ಅಂಥವರ ವಿರುದ್ಧ ದಾಳಿ ಮಾಡೋದು ಕರ್ತವ್ಯ. ಅಲ್ಲದೆ ಜನರಿಗೆ ಆಹಾರ ಸುರಕ್ಷತಾ ಕಾಯ್ದೆ ಬಗ್ಗೆ ಜಾಗೃತಿ ಮೂಡಿಸಬೇಕು.

Exit mobile version