ನಟಿ ಕಂಗನಾ ವಿರುದ್ಧ ಎಫ್‍ಐಆರ್ ಗೆ ನ್ಯಾಯಾಲಯ ನಿರ್ದೇಶನ

ತುಮಕೂರು: ಕೃಷಿ ಮಸೂದೆಗಳನ್ನು ವಿರೋಧಿಸುವ ರೈತರ ಬಗ್ಗೆ ಟ್ವೀಟ್‍ ಮಾಡಿದ್ದಕ್ಕೆ ಸಂಬಂಧಿಸಿದಂತೆ ಬಾಲಿವುಡ್‍ ನಟಿ ಕಂಗನಾ ರನೌತ್ ವಿರುದ್ಧ ಎಫ್‍ಐಆರ್‍ ದಾಖಲಿಸುವಂತೆ ತುಮಕೂರು ಜಿಲ್ಲಾ ನ್ಯಾಯಾಲಯ ಪೊಲೀಸರಿಗೆ ನಿರ್ದೇಶಿಸಿದೆ.

ಕೃಷಿ ಮಸೂದೆಗಳನ್ನು ವಿರೋಧಿಸುವ ರೈತರ ಬಗ್ಗೆ ಕಂಗನಾ ರನೌತ್ ಟ್ವೀಟ್ ಮಾಡಿದ್ದರು. ಈ ಬಗ್ಗೆ ವಕೀಲ ರಮೇಶ್ ನಾಯಕ್ ‍ಎಂಬುವವರು, ತುಮಕೂರು ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದರು.

ನಟಿ ಕಂಗನಾ ರನೌತ್ ಮಾಡಿದ್ದ ಟ್ವೀಟ್ನಲ್ಲಿ ಕೃಷಿ ಮಸೂದೆಗಳನ್ನು ವಿರೋಧಿಸುವ ಜನರನ್ನು ಗಾಯಗೊಳಿಸುವ ಸ್ಪಷ್ಟ ಉದ್ದೇಶವಿದೆ. ಹೀಗಾಗಿ ಅವರ ವಿರುದ್ಧ ಎಫ್‍ಐಆರ್ ದಾಖಲಿಸುವಂತೆ ಮನವಿ ಮಾಡಿದ್ದರು.

ಈ ಹಿನ್ನೆಲೆಯಲ್ಲಿ ಶುಕ್ರವಾರ ಅರ್ಜಿಯ ವಿಚಾರಣೆ ನಡೆಸಿದ ಜೆಎಂಎಫ್‍ಸಿ ನ್ಯಾಯಾಲಯ, ನಟಿ ಕಂಗನಾ ರನೌತ್‍ ವಿರುದ್ಧ ಸಿಆರ್‍ಪಿಸಿ 156(3) ಸೆಕ್ಷನ್ ಅಡಿಯಲ್ಲಿ ಎಫ್‍ಐಆರ್ ದಾಖಲಿಸುವಂತೆ ಕ್ಯಾತಸಂದ್ರಾ ಪೊಲೀಸ್ ಠಾಣೆ ಪೊಲೀಸರಿಗೆ ಸೂಚಿಸಿದೆ.

Exit mobile version