ನೀರು ಪೂರೈಕೆಯಲ್ಲಿ ವ್ಯತ್ಯಯ

ಬೆಂಗಳೂರು, ನ. 3: ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ದಿನಾಂಕ: 04-11-2020 ರ ಮಧ್ಯಾಹ್ನ: 02:00 ಗಂಟೆಯಿಂದ 05-11-2020ರ ಬೆಳಿಗ್ಗೆ: 06:00 ಯವರೆಗೆ ವಿಜಯನಗರ ಓ.ಹೆಚ್.ಟಿ ಸೇವಾಠಾಣೆಯಡಿಯಲ್ಲಿ ಬರುವ ಮಾಗಡಿ ಮುಖ್ಯರಸ್ತೆಯಲ್ಲಿ ಹೊಸದಾಗಿ ಅಳವಡಿಸಲಾದ 600ಮಿ.ಮೀ ವ್ಯಾಸದ ಎಂ.ಎಸ್ ಕೊಳವೆ ಮಾರ್ಗದ ಜೋಡಣಾ ಕಾಮಗಾರಿಯನ್ನು ಕೈಗೆತ್ತಿಕೊಳ್ಳುತ್ತಿದ್ದು, ಈ ಕೆಳಕಂಡ ಪ್ರದೇಶಗಳಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.

ಗೋವಿಂದರಾಜನಗರ, ಕಾವೇರಿಪುರ, ರಂಗನಾಥಪುರ, ಪ್ರಶಾಂತ್ ನಗರ, ಎಂ.ಸಿ ಬಡಾವಣೆ, ಮುನೇಶ್ವರ ನಗರ, ಬಿಡಿಎ ಬಡಾವಣೆ, ಕಾಮಾಕ್ಷಿಪಾಳ್ಯ, ಹೆಚ್.ವಿ.ಆರ್.ಬಡಾವಣೆ, ಸಿಂಡಿಕೇಟ್ ಬ್ಯಾಂಕ್ ಕಾಲೋನಿ, ವಿಜಯನಗರ, ಹಂಪಿನಗರ, ಟೆಲಿಕಾಮ್ ಬಡಾವಣೆ, ವಿಜಯನಗರ ಪೈಪ್ ಲೈನ್, ಸಿ.ಎಸ್.ಬಿ.ಎಸ್. ಬಡಾವಣೆ, ಮಾರೇನಹಳ್ಳಿ, ಚಂದ್ರಲೇಔಟ್‍ಗಳಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಮಂಡಳಿ ಪ್ರಕಟಣೆ ತಿಳಿಸಿದೆ.

Exit mobile version