ನೂತನ ಮೇಯರ್ ಮೊದಲ ಕಾರ್ಯಕ್ರಮದಲ್ಲೇ ಹೀಗ್ಯಾಕೆ ಮಾಡಿದ್ರು..?

ಬೆಂಗಳೂರು,ಅ.02: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ 53ನೇ ಮೇಯರ್ ಆಗಿ ಬಿಜೆಪಿ ಗೌತಮ್ ಕುಮಾರ್ ಜೈನ್ ಅಧಿಕಾರಿ ಸ್ವೀಕರಿಸಿ ಒಂದು ದಿನವಾಗಿದೆ ಅಷ್ಟೇ..ಅದಾಗಲೇ ಮಾಧ್ಯಮಗಳಿಗೆ ಆಹಾರವಾಗಿದ್ದಾರೆ..ಹೌದು..ಇಂದು ಗಾಂಧಿ ಜಯಂತಿ,ಈ ಪ್ರಯುಕ್ತ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು..ಈ ಕಾರ್ಯಕ್ರಮದ ಪ್ರಮುಖ ಭಾಗವಾಗಿದ್ದವರು ನೂತನ ಮೇಯರ್ ಗೌತಮ್ ಕುಮಾರ್..

ಆದರೆ ಬಿಬಿಎಂಪಿ ಮೇಯರ್ ಆಗಿ ಆಯ್ಕೆಯಾದ ಬಳಿಕ ಮೊದಲ ಕಾರ್ಯಕ್ರಮ ಗಾಂಧಿ ಜಯಂತಿಗೆ ಖುದ್ದು ಮೇಯರ್ ಅವರೇ ಗೈರಾಗಿದ್ದಾರೆ. ಕಾರ್ಯಕ್ರಮದಲ್ಲಿ ಡಿಸಿಎಂ ಅಶ್ವಥ್ ನಾರಾಯಣ್ ಮಾತ್ರ ಹಾಜರಾಗಿದ್ದರು.

ಬಿಬಿಎಂಪಿ ಮೇಯರ್ ಆಗಿ ಆಯ್ಕೆಯಾದ ಬಳಿಕ ಮೊದಲ ಕಾರ್ಯಕ್ರಮ ಗಾಂಧಿ ಜಯಂತಿಗೆ ಗೈರಾಗಿದ್ದಕ್ಕೆ ಗೌತಮ್ ಕುಮಾರ್ ಇಂದು ಕ್ಷಮೆಯಾಚಿಸಿದರು. ಅಲ್ಲದೆ ಗೈರು ಹಾಝರಾಗಲು ಕಾರಣವನ್ನೂ ಬಿಚ್ಚಿಟ್ಟರು.   ನಾನು ನೇರವಾಗಿ ಮಾತನಾಡುತ್ತೇನೆ. ನಿನ್ನೆ  ನಿದ್ದೆ ಇರಲಿಲ್ಲ. ಆರೋಗ್ಯ ಸಮಸ್ಯೆ ಇತ್ತು. ತಲೆನೋವಿತ್ತು. ಹೀಗಾಗಿ ಗಾಂಧಿ ಜಯಂತಿ ಕಾರ್ಯಕ್ರಮಕ್ಕೆ ಹಾಜರಾಗಲು ಆಗಲಿಲ್ಲ ಎಂದು ಅವರು ಸ್ಪಷ್ಟನೆ ನೀಡಿದರು.

Exit mobile version