ನವದೆಹಲಿ, ಅ. 24: ಅರ್ನಬ್ ಗೋಸ್ವಾಮಿ ಅವರು ‘ನೇಷನ್ ವಾಂಟ್ಸ್ ಟು ನೋ’ ಎಂಬ ಟ್ಯಾಗ್ ಲೈನ್ ಬಳಸಲು ಯಾವುದೇ ಅಡ್ಡಿಯಿಲ್ಲ, ಅವರಿಗೆ ಯಾವುದೇ ನಿರ್ಬಂಧವಿಲ್ಲ ಅವರು ಸ್ವತಂತ್ರರು ಎಂದು ದೆಹಲಿ ಹೈಕೋರ್ಟ್ ಹೇಳಿದೆ. ಆದ್ರೆ, ನ್ಯೂಸ್ ಅವರ್ ಅಥವಾ ಅದನ್ನೇ ಹೋಲುವಂತಹ ಯಾವುದೇ ಇತರೆ ಮುದ್ರೆಯನ್ನು ಬಳಸದಂತೆ ನಿರ್ಬಂಧಿಸಿದೆ.
ರಿಪಬ್ಲಿಕ್ ಟಿವಿಯ ಮಾಲೀಕತ್ವ ಹೊಂದಿರುವ ಎಆರ್ಜಿ ಔಟ್ ಲಿಯರ್ ಮೀಡಿಯಾ ಪ್ರೈವೇಟ್ ಲಿಮಿಟೆಡ್ ಕಂಪೆನಿಯು, ತನ್ನ ಚರ್ಚಾ ಕಾರ್ಯಕ್ರಮವೊಂದಕ್ಕೆ ‘ನ್ಯೂಸ್ ಅವರ್’ ಎಂಬ ಹೆಸರು ಇರಿಸಿದೆ. ಇದನ್ನು ತೆಗೆದು ಹಾಕಬೇಕು ಮತ್ತು ಅರ್ನಬ್ ಗೋಸ್ವಾಮಿ ತಮ್ಮ ಕಾರ್ಯಕ್ರಮಗಳಲ್ಲಿ ‘ನೇಷನ್ ವಾಂಟ್ಸ್ ಟು ನೋ’ ಎಂಬ ಟ್ಯಾಗ್ ಲೈನ್ ಬಳಸದಂತೆ ನಿರ್ಬಂಧಿಸಬೇಕು ಎಂದು ಕೋರಿ ‘ಟೈಮ್ಸ್ ನೌ’ ವಾಹಿನಿಯ ಬೆನೆಟ್ ಆಂಡ್ ಕೋಲ್ಮನ್ ಆಂಡ್ ಕಂಪೆನಿ ಲಿಮಿಟೆಡ್ ಅರ್ಜಿ ಸಲ್ಲಿಸಿತ್ತು.
‘ಟೈಮ್ಸ್ ನೌ’ ಈ ಎರಡೂ ಪದಗಳನ್ನು ಬಳಕೆ ಮಾಡದಂತೆ ಅರ್ನಬ್ ಗೋಸ್ವಾಮಿ ಅವರ ವಾಹಿನಿಯ ಮೇಲೆ ಕಾಯಂ ನಿರ್ಬಂಧ ವಿಧಿಸುವಂತೆ ಕೋರಿತ್ತು. ಆದರೆ ನ್ಯಾಯಾಲಯ ‘ನೇಷನ್ ವಾಂಟ್ಸ್ ಟು ನೌ’ ಟ್ಯಾಗ್ ಲೈನ್ ಬಳಕೆ ನಿರ್ಬಂಧದ ಬಗ್ಗೆ ಪರಿಶೀಲನೆ ಅಗತ್ಯವಿದೆ ಎಂದಿದೆ.