Chikkodi: ಲೋಕಸಭಾ ಚುನಾವಣೆಯ (Loksabha Election) ಹಿನ್ನೆಲೆ ರಾಜಕಾರಣಿಗಳು (Raju Kage Controversial Statement) ವಿರೋಧ ಪಕ್ಷದವರನ್ನು ಟೀಕಿಸುವ ಭರದಲ್ಲಿ
ವಿವಾದಕಾರೀ ಹೇಳಿಕೆಯನ್ನು ನೀಡುತ್ತಿದ್ದಾರೆ. ಸೈದ್ದಾಂತಿಕ ಭಿನ್ನಾಭಿಪ್ರಾಯ ಏನೇ ಇದ್ದರೂ, ಪ್ರಧಾನಿ ಹುದ್ದೆಗೆ ಗೌರವ ಕೊಡದೇ ಕಾಂಗ್ರೆಸ್ ಶಾಸಕರೊಬ್ಬರು ನಾಲಗೆಯನ್ನು ಹರಿಬಿಟ್ಟಿದ್ದಾರೆ.
ಸದಾ ಒಂದಲ್ಲ ಒಂದು ವಿವಾದಕಾರೀ ಹೇಳಿಕೆಯಿಂದಲೇ ಗಮನ ಸೆಳೆದ ಕಾಗವಾಡದ ಶಾಸಕ ರಾಜು ಕಾಗೆ (Raju Kage), ನರೇಂದ್ರ ಮೋದಿ ಸತ್ತರೆ ಬೇರೆ ಯಾರೂ ಪ್ರಧಾನಿ ಅಭ್ಯರ್ಥಿ ಇಲ್ಲವೇ
ಎಂದು ಮತ್ತೊಮ್ಮೆ ವಿವಾದಾತ್ಮಕ ಹೇಳಿಕೆ ನೀಡಿ ಹಲವರ ಕೆಂಗಣ್ಣಿಗೆ (Raju Kage Controversial Statement)ಗುರಿಯಾಗಿದ್ದಾರೆ.
ಚಿಕ್ಕೋಡಿ (Chikkodi) ಲೋಕಸಭಾ ವ್ಯಾಪ್ತಿಯ ಕಾಗವಾಡದ ಮಮದಾಪುರದಲ್ಲಿ ಚುನಾವಣಾ ಸಭೆಯಲ್ಲಿ ಮಾತನಾಡುತ್ತಿದ್ದ ಕಾಂಗ್ರೆಸ್ ಶಾಸಕ ಭರಮಗೌಡ ಅಲಗೌಡ ಕಾಗೆ (Bharamagowda alagowda
Kage) (ರಾಜು ಕಾಗೆ), ಮೋದಿ ಸತ್ತರೆ ಈ ದೇಶದಲ್ಲಿ ಪ್ರಧಾನಿಯಾಗುವವರು ಯಾರೂ ಇಲ್ಲವೇನೋ? ಮೋದಿ ಮಾತ್ರ ಪ್ರಧಾನಿ ಆಗಬೇಕು ಎಂದು ಎಲ್ಲಾದರೂ ಹೇಳಲಾಗಿದೆಯೇ? ಅವ್ರ ಬಿಟ್ರೆ ಇಲ್ಯಾರು ಇಲ್ಲವೇ?
140 ಕೋಟಿ ಜನರಲ್ಲಿ ಪ್ರಧಾನಮಂತ್ರಿ ಆಗುವ ಯೋಗ್ಯತೆ ಯಾರಿಗೂ ಇಲ್ಲವೇನೋ ? ಎಂದು ರಾಜು ಕಾಗೆ ವಿವಾದಕಾರಿ ಹೇಳಿಕೆಯನ್ನು ನೀಡಿದ್ದಾರೆ.
ನಮ್ಮ ಯುವಕರೆಲ್ಲಾ ಮೋದಿ ಮೋದಿ ಎಂದು ಕೂಗುತ್ತಾರೆ ಮೋದಿಯವರ ಸಲುವಾಗಿ ಬಿಜೆಪಿಗೆ ಮತ ಚಲಾಯಿಸಿ ಎಂದು ಕೇಸರಿ ಪಡೆಗಳು ಕಿರುಚಿಕೊಳ್ಳುತ್ತಾರೆ . ಕಾಗವಾಡದಾಗ ಮೋದಿ ಬಂದು ಕೆಲಸ ಮಾಡ್ತಾನಾ?
ರಾಜ್ಯದಲ್ಲಿ ಮತದಾರರು ಕಾಂಗ್ರೆಸ್ ಸರ್ಕಾರ ಬೇಕು ಅಂತಾರೆ. ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಬೇಕು ಅಂತಾರೆ. ಮೋದಿ ಹೆಸರು ತಗೊಂಡು ಏನು ನೆಕ್ಕೋದಾ? ಹೆಣ್ ಮಕ್ಕಳಿಗೆ
ಗ್ಯಾರಂಟಿ ಕೊಟ್ಟವರು ನಾವು, ಜನರಿಗೆ ಕರೆಂಟ್ ಕೊಟ್ಟಿರೋದು ನಾವು. ಮೋದಿ ಯಾವಾಗಲೂ ಶ್ರೀಮಂತರ ಪರವಾಗಿ ಇರುವವರು ಎಂದು ರಾಜು ಕಾಗೆ ಬಿಜೆಪಿ ಪಕ್ಷವನ್ನು ಹಾಗೂ ಪ್ರಧಾನಿ ಮೋದಿಯ ಕುರಿತು
ಹೇಳಿಕೆ ನೀಡಿದ್ದಾರೆ.
ಇದನ್ನು ಓದಿ: ಮೋದಿ ಸತ್ತರೆ 140 ಕೋಟಿ ಜನಸಂಖ್ಯೆಯಲ್ಲಿ ಬೇರೊಬ್ಬ ಪ್ರಧಾನಿ ಅಭ್ಯರ್ಥಿ ಸಿಗುವುದಿಲ್ಲವೇ ಎಂದ ರಾಜು ಕಾಗೆ