ದೇಶಾದ್ಯಂತ ಪೆಟ್ರೋಲ್ ಹಾಗೂ ಡೀಸಲ್ ದಿನೇ ದಿನೇ ಹೆಚ್ಚುತ್ತಲೇ ಇದೆ. ಇಂದಿಗೆ ೨೧ ನೇ ದಿವಸ ತೈಲಬೆಲೆಯಲ್ಲಿ ಏರಿಕೆ ಕಾಣುತ್ತಿರುವ ನಿಟ್ಟಿನಲ್ಲಿ ಬೆಂಗಳೂರಿನಲ್ಲಿ ಇಂದು ಕಾಂಗ್ರೆಸ್ ಸರ್ಕಾರ ಸೈಕಲ್ ರಾಲಿ ನಡೆಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿಭಟನೆಯಲ್ಲಿ ಮಾಜಿ ಮುಖ್ಯ ಮಂತ್ರಿ ಸಿದ್ದಾರಾಮಯ್ಯ ಭಾಗಿಯಾಗಿದ್ದಾರೆ.
ಸಿ ಎಂ ಗೃಹ ಕಛೇರಿಯಿಂದ ಏರ್ಪೋರ್ಟ್ ರಸ್ತೆಯಲ್ಲಿ ಸೈಕಲ್ ಸವಾರಿಯನ್ನು ಕಾಂಗ್ರೆಸ್ ಕಾರ್ಯಕರ್ತರು ನಡೆಸಲಿದ್ದು ಈ ಹಿನ್ನಲೆ ಡಿ ಕೆ ಶಿ ನಿವಾಸದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಜಮಾಯಿಸಿದ್ದಾರೆ.ಇತ್ತ ಮಾಜಿ ಸಿ.ಎಂ ಸಿದ್ದರಾಮಯ್ಯ ನಿವಾಸಕ್ಕೆ ಅಭಿಮಾನಿಗಳು ಸೈಕಲ್ ಜೊತೆ ಧಾವಿಸಿದ್ದು ಕಂದಾಯ ಭವನದಲ್ಲಿ ಪ್ರತಿಭಟಿಸುತ್ತಿದ್ದಾರೆ .
ಜೂನ್ 7ರಿಂದ ಸತತವಾಗಿ ಏರಿಕೆ ಯಾಗುತ್ತಿದ್ದ ಪೆಟ್ರೋಲ್ ಹಾಗು ಡೀಸಲ್ ದರ ಭಾನುವಾರ ಏರಿಕೆಯಾಗಿರಲ್ಲಿಲ್ಲ ಆದರೆ ಇದೀಗ ಮತ್ತೆ ಸೋಮವಾರ ಏರಿಕೆ ಖಂಡಿದ್ದು ವಾಹನ ಸವಾರರಲ್ಲಿ ಆತಂಕ ಮೋಡಿಸಿದೆ. ಇದನ್ನು ಕುರಿತಂತೆ ಇಂದು ಪ್ರತಿ ಪಕ್ಷ ನಾಯಕ ಸಿದ್ದರಾಮಯ್ಯ ಕಾಂಗ್ರೆಸ್ ಅಧ್ಯಕ್ಷ ಡಿಕೆ ಶಿವಕುಮಾರ್ ಸೇರಿದಂತೆ ಹಲವಾರು ಮಂದಿ ಧರಣಿಯಲ್ಲಿ ಪಾಲ್ಗೊಂಡಿದ್ದಾರೆ.