ಪ್ರವಾಹ ಬಂತೆಂದರೆ ಶಹಬಾದ್‌ ತಾಲೂಕಿನ ಜನ ಬೆಚ್ಚಿ ಬೀಳ್ತಾರೆ

Citizen Journalist | Kalburgi Flood | Vijayatimes

ಪ್ರವಾಹದ ಅಬ್ಬರ ಉತ್ತರ ಕರ್ನಾಟಕ ಮಂದಿಯ ಜೀವನವನ್ನ ಜರ್ಜರಿತಗೊಳಿಸಿದೆ. ಮನೆ, ಮಠಗಳೆಲ್ಲಾ ನೀರಲ್ಲಿ ಮುಳುಗಿವೆ. ಬೆಳೆ ಸಂಪೂರ್ಣ ನಾಶ ಆಗಿದೆ. ತುತ್ತು ಅನ್ನಕ್ಕೂ ಪರದಾಡ್ತಿದ್ದಾರೆ ಅಲ್ಲಿನ ಮಂದಿ. ನೆರೆಯ ಭೀಕರತೆ ಮತ್ತು ನಮ್ಮನ್ನಾಳುವವರ ನಿರ್ಲಕ್ಷ್ಯತೆ ಹೇಗೆ ಜನರನ್ನು ಕಂಗಾಲು ಮಾಡಿದೆ ಅನ್ನೋದನ್ನ ಕಲಬುರ್ಗಿಯ ಸಿಟಿಜನ್ ಜರ್ನಲಿಸ್ಟ್ ಬಸವರಾಜ್ ಸಿ ಕೋರಿ ಮುತ್ತುಗಾ ಭಾರೀ ಸಾಹಸ ಮಾಡಿ ವಿವರಿಸಿದ್ದಾರೆ.

ಕಲಬುರ್ಗಿ ಜಿಲ್ಲೆಯ ಚಿತ್ತಾಪುರ್ ಮತಕ್ಷೇತ್ರದ ಶಹಾಬಾದ್ ತಾಲೂಕಿನ ಮತಕ ಗ್ರಾಮ ಸಂಪೂರ್ಣ ಜಲಾವೃತವಾಗಿದ್ದು ಮನೆಗಳೆಲ್ಲಾ ಮುಳುಗಿವೆ. ಜನ ಪ್ರಾಣವನ್ನ ಕೈಯಲ್ಲಿ ಹಿಡಿದು ಸಹಾಯಕ್ಕಾಗಿ ಕಾಯುತ್ತಿದ್ದಾರೆ. ಈ ಪ್ರದೇಶಕ್ಕೆ ಸತತ ನಾಲ್ಕನೇ ಬಾರಿ ಈ ರೀತಿ ಪ್ರವಾಹ ಬಂದಿರೋದು. ಭಾರೀ ನೆರೆ ಇಲ್ಲಿ ಸಾಕಷ್ಟು ಹಾನಿಯುಂಟು ಮಾಡಿದೆ. ಇಲ್ಲಾದ ಅನಾಹುತಗಳ ಬಗ್ಗೆ ಸಿಟಿಜನ್ ಜರ್ನಲಿಸ್ಟ್‌ ಬಸವರಾಜ್‌ ಸಿ ಕೋರಿ ಮುತ್ತಗಾ ನೀರಲ್ಲಿ ಓಡಾಡಿ, ಸಾಹಸ ಮಾಡಿ ಎಳೆ ಎಳೆಯಾಗಿ ವಿವರಿಸಿದ್ದಾರೆ.

Exit mobile version