ಮಕ್ಕಳನ್ನು ಅಂಗನವಾಡಿಗೆ ಬಿಡುವ ಮುನ್ನ ಈ ಸ್ಟೋರಿ ನೋಡಿ..

ಚಿಕ್ಕಮಗಳೂರು,ನ,25: ಮಕ್ಕಳನ್ನು ಅಂಗನವಾಡಿಗೆ ಬಿಡೋದೂ ಈಗ ಸೇಫ್ ಅಲ್ಲ ನೋಡಿ..ಯಾಕಂದ್ರೆ ಮಕ್ಕಳ ಮೇಲೆ ಕಾಳಜಿ ತೋರುವ ಶಿಕ್ಷಕರೇ ಕೆಲವೊಮ್ಮೆ ಹಗೆ ತೀರಿಸಿಕೊಳ್ಳುವ ಸಾಧ್ಯತೆ ಇದೆ..ಈಗ ಯಾಕೆ ಈ ಮಾತು ಅಂತೀರಾ..  ಮಗು ಅಂಗನವಾಡಿಯಲ್ಲಿ ಮೂತ್ರ ವಿಸರ್ಜನೆ ಮಾಡಿರುವ ಕಾರಣಕ್ಕೆ ಶಿಕ್ಷಕಿಯೇ ಮಗುವಿನ ತಲೆಗೆ ಚಾಕುವಿನಿಂದ ಹಲ್ಲೆ ಮಾಡಿರುವ ಘಟನೆ ಚಿಕ್ಕಮಗಳೂರಿನ ಕೆರೆಮಕ್ಕಿ ಗ್ರಾಮದಲ್ಲಿ ನಡೆದಿದೆ.

ಎಂದಿನಂತೆ ತಾಯಿ ತನ್ನ ಮಗು ಅಮಿತ್ ನನ್ನು ಅಂಗನವಾಡಿಗೆ ಬಿಟ್ಟಿದ್ರು..ಆದರೆ ಮಗು ಚಡ್ಡಿಯಲ್ಲೇ ಮೂತ್ರ ವಿಸರ್ಜನೆ ಮಾಡಿದ್ದರಿಂದ ಸಿಟ್ಟಿಗೆದ್ದ ಶಿಕ್ಷಕಿ ಮಾಲತಿ ಹಾಗೂ ಸಹಾಯಕಿ ಸೇರಿ ಮಗುವಿನ ತಲೆಗೆ ಚಾಕುವಿನಿಂದ ಹಲ್ಲೆ ಮಾಡಿದ್ದಾರೆಂಬ ಆರೋಪ ಕೇಳಿಬಂದಿದೆ.

ಮಗುವಿನ ತಲೆಗೆ ಗಂಭೀರವಾಗಿ ಗಾಯವಾಗಿದ್ದು, ಚಿಕ್ಕಮಗಳೂರಿನ ಜಿಲ್ಲಾಸ್ಪತ್ರೆಗೆ ಮಗುವನ್ನು ದಾಲು ಮಾಡಿದ್ದು, ತಲೆಯ ಭಾಗಕ್ಕೆ ಮೂರು ಹೊಲಿಗೆ ಹಾಕಲಾಗಿದೆ. ಅಲ್ಲದೆ ಮಲ್ಲಂದೂರು ಪೊಲೀಸ್ ಠಾಣೆಯಲ್ಲಿ ಶಿಕ್ಷಕಿಯ ವಿರುದ್ಧ ದೂರು ದಾಖಲಾಗಿದೆ.

Exit mobile version