ಮಗಳಿಗೆ ಮಕ್ಕಳಾಗದ್ದಕ್ಕೆ ತಂದೆ ಮಾಡಿದ್ದೇನು ಗೊತ್ತಾ ?

ಮೈಸೂರು: ಮಗಳಿಗೆ ಮಕ್ಕಳಿಲ್ಲ ಎಂಬ ಕಾರಣಕ್ಕೆ ವ್ಯಕ್ತಿಯೊಬ್ಬ ಮಗುವನ್ನು ಅಪಹರಿಸಿ ಕಳ್ಳನಾದ ಘಟನೆ ಇಲ್ಲಿಗೆ ಸಮೀಪದ ನಂಜನಗೂಡಿನಲ್ಲಿ ನಡೆದಿದೆ. ಕಳೆದ 5 ದಿನಗಳ ಹಿಂದೆ ನಂಜನಗೂಡಿನ ದೇವಾಲಯದ ಮುಂದೆ ಬಿಕ್ಷೆ ಬೇಡುತಿದ್ದ ಬಿಕ್ಷುಕಿಯೊಬ್ಬಳ ಮಗುವೊಂದು ಅಪಹರಣಕ್ಕೀಡಾಗಿತ್ತು. ಆರೋಪಿಯು ಭಿಕ್ಷುಕಿಯ ಕೈಗೆ ಹತ್ತು ರೂಪಾಯಿ ನೀಡಿ ನಂತರ ಉಪಾಯವಾಗಿ ಮಗುವನ್ನು ಅಪಹರಿಸಿದ್ದ. ತನಿಖೆ ಕೈಗೊಂಡ ಪೋಲೀಸರು ಕೊನೆಗೂ ಸೋಮವಾರ ಆರೋಪಿಯನ್ನು ಬಂದಿಸುವಲ್ಲಿ ಯಶಸ್ವಿ ಆಗಿದ್ದಾರೆ.

ಅರೋಪಿ ಗಂಗರಾಜು (47) ಎಂದು ಗುರ್ತಿಸಲಾಗಿದ್ದು ನಂಜನಗೂಡು ತಾಲೂಕು ಹುಣಸೆಕೊಪ್ಪ ಗ್ರಾಮದವನಾಗಿದ್ದಾನೆ. ಈತನ ಮಗಳಿಗೆ ಮದ್ವೆಯಾಗಿ ನಾಲ್ಕು ವರ್ಷವಾದ್ರೂ ಮಕ್ಕಳಾಗಿರಲಿಲ್ಲ. ಮಗುವೊಂದನ್ನ ತಂದು ಪೋಷಿಸಿದ್ರೆ ಮಗಳಿಗೆ ಮಕ್ಕಳಾಗುತ್ತದೆ ಎಂದು ಜ್ಯೋತಿಷಿ ಹೇಳಿದ ಮಾತನ್ನು ನಂಬಿದ್ದ ಗಂಗರಾಜು ಅಪಹರಣಕ್ಕೆ ಮುಂದಾಗಿದ್ದನು.ಯಶಸ್ವಿಯಾಗಿ ಮಗುವನ್ನು ಅಪಹರಿಸಿದನಾದರೂ ಪೋಲೀಸರ ಚಾಣಾಕ್ಷತೆಯಿಂದ ಈಗ ಜೈಲಿನಲ್ಲಿ ಮುದ್ದೆ ಮುರಿಯುತಿದ್ದಾನೆ.

Exit mobile version