ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೋವಿಡ್ ೧೯ ಭ್ರಷ್ಟಾಚಾರ ವಿಚಾರ ಹೇಳಿಕೆಗೆ ಸಂಬಂಧಪಟ್ಟಂತೆ ಸಚಿವರಾದ ಸಿಟಿ ರವಿ ಪ್ರತಿಕ್ರಿಯಿಸಿದ್ದಾರೆ . ಕಾಂಗ್ರೆಸ್ ಸರ್ಕಾರದಲ್ಲೂ ಕೋಟ್ಯಾಂತರ ಹಣ ಲೂಟಿಯಾಗಿದೆ ಅನ್ನೋ ಮೂಲಕ ಸಿದ್ದರಾಮಯ್ಯ ಆರೋಪಕ್ಕೆ ತಿರುಗೇಟು ನೀಡಿದ್ದಾರೆ.
ಹಾಸಿಗೆ- ದಿಂಬು ಹಗರಣದಲ್ಲಿ ಹಣ ಲೂಟಿ ಮಾಡಿದ್ದಾರೆ. ಅವರಿಗೆ ಬರೀ ಇಂಥವೇ ಕಾಣುತ್ತಾ ಅಂತ ಪ್ರಶ್ನೆ ಮಾಡಿದ್ದಾರೆ . ಕಾಂಗ್ರೆಸ್ ನವರು ಬರೀ ಇಂಥಹ ಸುಳ್ಳುಗಳನ್ನೇ ಹೇಳೋ ಮೂಲಕ ಸುಳ್ಳನೇ ಮನೆ ದೇವರನ್ನಾಗಿ ಮಾಡಿಕೊಂಡಿದ್ದಾರೆ . ಅಂದಹಾಗೆ ಪ್ರಾರಂಭದಲ್ಲಿ ಸರ್ಜಿಕಲ್ ಮಾಸ್ಕ್ ಮಾತ್ರ ಇದ್ದಿದ್ದು ಅಂಥಹ ಸಂದರ್ಭದಲ್ಲಿ ಬೇರೆ ಕಡೆಯಿಂದ ಮಾಸ್ಕ್ , ಪಿಪಿಇ ಕಿಟ್ ಖರೀದಿ ಮಾಡುವ ಅನಿವಾರ್ಯ ಇತ್ತು. ಇದರಲ್ಲಿ ಹುಳುಕು ಹುಡುಕೋದು ಸರಿಯಲ್ಲ ಎಂದು ವಿಧಾನಸೌಧದಲ್ಲಿ ಸಚಿವ ಸಿಟಿ ರವಿ ಹೇಳಿಕೆ ನೀಡಿದ್ದಾರೆ