ಅಸ್ಸಾಂ, ನ. 2: ಕೋವಿಡ್-19 ಹಿನ್ನೆಲೆಯಲ್ಲಿ ಗುವಾಹತಿಯ ಕಾಜಿ಼ರಂಗ ರಾಷ್ಟ್ರೀಯ ಉದ್ಯಾನವನ ಮತ್ತು ಹುಲಿ ಸಂರಕ್ಷಣಾ ಪ್ರದೇಶ (ಕೆಎನ್ಪಿಟಿಆರ್)ದಲ್ಲಿ ತಿಂಗಳಿಂದ ಸ್ಥಗಿತಗೊಳಿಸಲಾಗಿದ್ದ ಆನೆ ಸಫಾರಿ ಪುನರಾರಂಭಗೊಂಡಿದ್ದು, ಮೊದಲ ದಿನವೇ ಭಾರೀ ಸಂಖ್ಯೆಯ ಪ್ರವಾಸಿಗರನ್ನು ಆಕರ್ಷಿಸಿದೆ.
ಕೊರೊನಾ ಹಿನ್ನೆಲೆಯಲ್ಲಿ ಕಳೆದ ಐದಾರು ತಿಂಗಳಿಂದ ಆನೆ ಸಫಾರಿಯನ್ನು ನಿಲ್ಲಿಸಲಾಗಿತ್ತು. ಆದರೆ ಭಾನುವಾರದಿಂದ ಆನೆ ಸಫಾರಿ ಪುನರಾರಂಭ ಮಾಡಲಾಗಿದ್ದು, ವಿದೇಶಿ ಪ್ರವಾಸಿಗರ ನಿರ್ಬಂಧದ ನಡುವೆಯೂ ಹೆಚ್ಚಿನ ಸಂಖ್ಯೆಯ ಸ್ಥಳೀಯ ಪ್ರವಾಸಿಗರು ಆನೆ ಸಫಾರಿ ಮಾಡಲು ಮುಗಿಬಿದ್ದರು.
ವಿಶ್ವದ ಗಮನ ಸೆಳೆದಿರುವ ಕಾಜಿರಂಗ ನಾಷಿನಲ್ ಪಾರ್ಕ್ನಲ್ಲಿ ಆನೆ ಸಫಾರಿ ಪ್ರಮುಖ ಆಕರ್ಷಣೆಯಾಗಿದೆ. ಭಾನುವಾರದಿಂದ ಸಫಾರಿ ಆರಂಭಗೊಂಡಿದ್ದು, ಕೊರೊನಾ ಹಿನ್ನೆಲೆಯಲ್ಲು ಸಾಮಾಜಿಕ ಅಂತರವನ್ನು ಕಾಪಾಡುವ ಉದ್ದೇಶದಿಂದ ಪ್ರತಿದಿನ ಸಫಾರಿಗೆ ಹೋಗುವವರ ಸಂಖ್ಯೆಯನ್ನು 60-40ಕ್ಕೆ ಇಳಿಕೆ ಮಾಡಲಾಗಿದೆ ಎಂದು ಕೆಎನ್ಪಿಟಿಆರ್ ನಿರ್ದೇಶಕ ಪಿ. ಶಿವಕುಮಾರ್ ತಿಳಿಸಿದ್ದಾರೆ.