ನವದೆಹಲಿ: ರಾಜ್ಯ ಸಭೆಯಲ್ಲಿ ದುರ್ವರ್ತನೆಗೆ ಒಳಗಾಗಿ ಅಮಾನತುಗೊಂಡು, ಆಹೋರಾತ್ರಿ ಪ್ರತಿಭಟನೆಯಲ್ಲಿ ನಿರತರಾಗಿದ್ದ ಸದಸ್ಯರಿಗೆ ಬೆಳಗ್ಗಿನ ವೇಳೆ ರಾಜ್ಯಸಭಾ ಉಪಸಭಾದ್ಯಕ್ಷರು ಚಹಾ, ಉಪಾಹಾರ ಕೊಟ್ಟು ಮಾತಾಡಿಸಿ ಕುಶಲೋಪರಿ ವಿಚಾರಿಸಿದ್ರು. ಉಪಸಭಾದ್ಯಕ್ಷರ ಹರಿವಂಶ್ ನಾರಾಯಣ ಸಿಂಗ್ ಅವರ ಉಪಚಾರದ ಬಗ್ಗೆ ತಿಳಿದ ಪ್ರಧಾನಿ ನರೇಂದ್ರ ಮೋದಿಯವರು ಅವರಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ರಾಜ್ಯಸಭೆಯಲ್ಲಿ ಎರಡು ಮಸೂದೆಗಳ ಅಂಗೀಕಾರದ ವೇಳೆ ಸಭಾಧ್ಯಕ್ಷರ ಮೈಕ್ ಕಿತ್ತುಕೊಂಡು , ರೂಲ್ ಬುಕ್ಕನ್ನು ಕಿತ್ತುಕೊಂಡು ಹರಿದು ಸಭೆಯಲ್ಲಿ ದಾಂಧಲೆ ಎಬ್ಬಿಸಿ ಹರಿವಂಶ್ ಅವರಿಗೆ ಅವಮಾನ ಮಾಡಿದ್ದರೂ, ಅವರು ಸ್ವತ: ಹೋಗಿ ಚಾಯ್ ನೀಡಿ ಮಾತನಾಡಿದ್ದು ಉಪಸಭಾದ್ಯಕ್ಷ ಹರಿವಂಶ್ ಅವರ ದೊಡ್ಡ ಗುಣವನ್ನು ತೋರಿಸುತ್ತದೆ, ಎಂದು ಟ್ವೀಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.