ಸ್ನೇಹಿತ್ರೆ ಉದ್ಯಾನವನ ಅಂದ್ರೆ ಅದು ಜನರಿಗೆ ನೆಮ್ಮದಿ, ಸಂತೋಷ ಕೊಡೋ ಜಾಗ. ಆದ್ರೆ ಯಾದಗಿರಿ ಜಿಲ್ಲೆಯ ಹೃದಯ ಭಾಗದಲ್ಲಿ ಇರುವ ಲುಂಬಿನಿ ಉದ್ಯಾನವನದ ಅಲ್ಲಿನ ಜನರ ನೆಮ್ಮದಿಯನ್ನೇ ಕೆಡಿಸಿದೆ .ಯಾದಗಿರಿ ಜಿಲ್ಲೆಯ ಹೃದಯ ಭಾಗದಲ್ಲಿರುವ ಲುಂಬಿನಿ ಪಾರ್ಕ್. ಜನರ ಆಕರ್ಷಣೆಯ ಕೇಂದ್ರವಾಗಿತ್ತು. ಜನರು ಇಲ್ಲಿ ನೆಮ್ಮದಿಯಾಗಿ ಒಂದಿಷ್ಟು ಹೊತ್ತು ಕಳೆಯಲು ಬರುತ್ತಿದ್ರು.
ಆದ್ರೆ ಇತ್ತೀಚೆಗೆ ಈ ಪಾರ್ಕ್ಗೆ ಜನ ಬರಲು ಅಂಜುತ್ತಿದ್ದಾರೆ. ಯಾಕಂದ್ರೆ ಈ ಉದ್ಯಾನವನ ಈಗ ನೆಮ್ಮದಿ ಕೆಡಿಸೋ ಜಾಗವಾಗಿದೆ. ಇದರೊಳಗೆ ಈಗ ಮೂಗು ಮುಚ್ಚಿಕೊಂಡೇ ಬರ್ಬೇಕು. ಅಷ್ಟೊಂದು ಗಬ್ಬು ನಾರುತ್ತಿದೆ. ಈ ಉದ್ಯಾನವನಕ್ಕೆ ಹೆಸರಿಡಲು ಬಹಳ ಹೋರಾಟಗಳು ನಡೆದಿವೆ. ಆದ್ರೆ ಈಗ ಈ ಪಾರ್ಕ್ ದುಸ್ಥಿತಿಯಲ್ಲಿದೆ. ಆದ್ರೆ ಯಾರೂ ಕೂಡ ಈಗ ಇತ್ತ ತಲೆನೂ ಹಾಕುತ್ತಿಲ್ಲ, ಹೋರಾಟನೂ ಮಾಡುತ್ತಿಲ್ಲ. ಯಾದಗಿರಿಗೆ ಒಲಿದ ಅದೃಷ್ಟ ಅಂದ್ರೆ ಅದು ಲುಂಬಿನಿ ಉದ್ಯಾನವನ. ಅದ್ರೆ ಈಗ ಅದು ಕೇಳುವವರು ನೋಡುವವರು ಇಲ್ಲದೆ ಅನಾಥವಾಗಿದೆ. ಸಾರ್ವಜನಿಕರ ಆರೋಗ್ಯ ರಕ್ಷಣೆಗಾಗಿ, ವಾಯುವಿಹಾರಕ್ಕಾಗಿ, ಮಕ್ಕಳು ಆರಾಮವಾಗಿ ಆಡಿ ನಲಿದಾಡಿ ಸಮಯ ಕಳೆಯಲೆಂದೇ ಲಕ್ಷಗಟ್ಟಲೆ ವೆಚ್ಚದಲ್ಲಿ ಲುಂಬಿನಿ ಉದ್ಯಾನವನವನ್ನು ನಿರ್ಮಾಣ ಮಾಡಲಾಗಿತ್ತು. ಆದ್ರೆ ಈ ಪಾರ್ಕ್ ಈಗ ನಿರ್ವಹಣೆ ಇಲ್ಲದೆ ಹಾಳಾಗಿ ಹೋಗಿದೆ.
ಪಕ್ಕದ ಕಾಲೋನಿಯಿಂದ ಕೊಳಚೆ ನೀರು ಈ ಉದ್ಯಾನವನಕ್ಕೆ ಹರಿದು ಬರುತ್ತಿದೆ. ಈ ಕೊಳಚೆ ನೀರುನಿಂದ ಉದ್ಯಾನವನದ ಕರೆಯಲ್ಲಿ ಇರುವ ಮೀನುಗಳು ಸತ್ತು ನೀರಿನಲ್ಲಿ ತೆಲ್ಲಾಡುತ್ತಿವೆ. ಪಾರ್ಕ್ ಏನೋ ವಿಶಾಲವಾಗಿದೆ ಆದರೆ ಜನ ಬರುವ ಸ್ಥಿತಿಯಲ್ಲಿಲ್ಲ. ಪಾರ್ಕ್ ಹತ್ತಿರ ಗಿಡ ಹುಲ್ಲು, ಬೆಳೆದು ನಿಂತಿದೆ. ಅಲ್ಲದೆ ಸಾರ್ವಜನಿಕರು ಕುಡಿದು ತಿಂದು ಎಸೆದ ಮದ್ಯದ ಬಾಟಲಿಗಳು ಹಾಗೂ ಕಸದಿಂದ ಪಾರ್ಕ್ ತುಂಬಿ ಹೋಗಿದೆ. ಮಕ್ಕಳ ಮನರಂಜನೆ ಆಟಿಕೆಗಳು ತುಕ್ಕು ಹಿಡಿದು ಹಾಳಾಗಿವೆ. ಕೆರೆ ಗೊಬ್ಬರ ಹಾಕಿದ ತಿಪ್ಪೆಯಂತೆ ಕಾಣುತ್ತಿದೆ. ಪ್ರವಾಸಿಗರು ಈ ಉದ್ಯಾನಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ.
ಲುಂಬಿನಿ ಉದ್ಯಾನವನದಲ್ಲಿ ಶೌಚಾಲಯ, ನೀರಿನ ವ್ಯವಸ್ಥೆ ಹಾಗೂ ಸ್ವಚ್ಚತೆಯ ಕಾರ್ಯ ಆಗಬೇಕು .ಜನರು ಇದರ ಪ್ರಯೋಜನವನ್ನು ಪಡೆದುಕೊಳ್ಳುವಂತಾಗಬೇಕು ಎಂಬುದು ಇಲ್ಲಿನ ಜನರ ಬೇಡಿಕೆಯಾಗಿದೆ. ಪಾರ್ಕ್ ಬದಿಯಲ್ಲಿ ಕಲ್ಲು ಬೆಂಚುಗಳನ್ನು ಹಾಕಿದ್ದಾರೆ. ಆದ್ರೆ ಅಲ್ಲಿ ಕುಳಿತುಕೊಳ್ಳಲಾಗುತ್ತಿಲ್ಲ, ಕೆರೆ ಗಬ್ಬು ವಾಸನೆ ಬರುತ್ತಿದೆ. ಕೆರೆಗೆ ಎಸೆದಿರುವ ವಸ್ತುಗಳು ಕೊಳೆತು ಹೋಗುತ್ತಿದೆ. ನೋಡಿದಿರಲ್ಲಾ ಲುಂಬಿನಿ ಉದ್ಯಾನವನದ ಪರಿಸ್ಥಿತಿಯನ್ನು ಈಗಲಾದ್ರು ಅಧಿಕಾರಿಗಳು ನಿದ್ರೆಯಿಂದ ಎದ್ದು ಇತ್ತ ಕಡೆ ನೋಡಿ ಸಮಸ್ಯೆಗಳನ್ನು ಬಗೆಹರಿಸಲು ಮುಂದಾಗಿ ಜನರಿಗೆ ಲುಂಬಿನಿ ಪಾರ್ಕನ್ನು ಉಪಯೋಗಿಸುವಂತೆ ಆಗಲಿ ಎನ್ನುವದು ನಮ್ಮ ವಿಜಯ ಟೈಮ್ಸ್ ಆಶಯವಾಗಿದೆ.
- ಸಿಟಿಜನ್ ಜರ್ನಲಿಸ್ಟ್ ಶರಬು ಬಿ ನಾಟೇಕಾರ್ ಯಾದಗಿರಿ