ಸರಳತೆಗೆ ಹೆಸರು ಮಾಡಿರುವ ನಟರ ಪೈಕಿ ಶಿವರಾಜ್ ಕುಮಾರ್ ಕೂಡ ಒಬ್ಬರು..ಶಿವಣ್ಣ ನಿನ್ನೆಯಷ್ಟೇ ಸ್ನೇಹಿತರೊಂದಿಗೆ ಮುತ್ತತ್ತಿ ಹಾಗೂ ಮಲೆ ಮಹದೇಶ್ವರ ದೇವಾಲಯಗಳಿಗೆ ಭೇಟಿ ನೀಡಿದ್ದರು. ಈ ನಡುವೆ ಹೊಟ್ಟೆ ಹಸಿವಾದಾಗ ಆಡಂಬರದ ಹೊಟೇಲ್ಗಳತ್ತ ಮುಖ ಮಾಡದೆ, ಮಂಡ್ಯದ ಹಲಗೂರಿನ ಬಾಬು ಅವರ ಶೆಡ್ ಹೊಟೇಲ್ನಲ್ಲಿ ದೋಸೆ ತಿಂದಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿರುವ ಶಿವಣ್ಣ,ನಾನು ಇಲ್ಲಿಗೆ ದೋಸೆ ತಿನ್ನಲು ಬರೋದು ಹೊಸದೇನಲ್ಲ. ಮನೆ ದೇವರಾದ ಮುತ್ತತ್ತಿ ರಾಯರ ಸನ್ನಿದಿಗೆ ಬರುವಾಗಲೆಲ್ಲಾ ಇಲ್ಲಿಯ ಬೆಣ್ಣೆ ದೋಸೆ ಸವಿಯುತ್ತೇನೆ ಅಂದಿದ್ದಾರೆ…ಈ ಬಾರಿ ಶಿವಣ್ಣನಿಗೆ ನಿರ್ದೇಶಕ ಗುರುದತ್ ಸಹ ಸಾಥ್ ನೀಡಿದ್ದಾರೆ. ಸ್ಟಾರ್ ನಟನೊಬ್ಬ ಇಂತಹ ಸರಳತೆ ಮೆರೆಯುತ್ತಿರುವುದು ಎಲ್ಲರ ಮೆಚಚುಗೆ ಗಳಿಸಿದೆ.
ಶೆಡ್ ಹೊಟೇಲ್ನ ಬೆಣ್ಣೆ ದೋಸೆಗೆ ಮನಸೋತ ಶಿವಣ್ಣ
-
By Kiran K
- Categories: Vijaya Time
Related Content
ಕೊತ್ವಾಲ್ನ ಶಿಷ್ಯ ಡಿಕೆ ಶಿವಕುಮಾರ್ನ ಪಟಾಲಂ ತಮ್ಮ ಹಳೆಚಾಳಿ ಮುಂದುವರಿಸಿದ್ದಾರೆ – ಡಿಕೆ ಮೇಲೆ ಮುಗಿಬಿದ್ದ ಜೆಡಿಎಸ್
By
Bhavya
April 13, 2024
5,8,9ನೇ ತರಗತಿಗಳ ಬೋರ್ಡ್ ಪರೀಕ್ಷೆಗೆ ಹೈಕೋರ್ಟ್ ಗ್ರೀನ್ ಸಿಗ್ನಲ್
By
Bhavya
March 23, 2024
ಬಿಜೆಪಿ 2ನೇ ಪಟ್ಟಿ ಬಿಡುಗಡೆಗೆ ಕ್ಷಣಗಣನೆ : ಯಾರಿಗೆಲ್ಲಾ ಕೈ ತಪ್ಪಲಿದೆ ಟಿಕೆಟ್..?
By
Bhavya
March 12, 2024